ಆ್ಯಪ್ನಗರ

ಬರ ಘೋಷಣೆ, ಕೇಂದ್ರದ ಕೈಯ್ಯಲ್ಲಿ

ಹಾವೇರಿ: ಬರ ಪೀಡಿತ ತಾಲೂಕ ಘೋಷಣೆ ಬಗ್ಗೆ ರೈತರು ತಪ್ಪು ತಿಳಿದಿದ್ದಾರೆ, ಈಗ ಕಾಲ ಬದಲಾಗಿದೆ ಬರ ಪರಿಸ್ಥಿತಿ ಹೇಗಿರಬೇಕು ಎನ್ನುವ ಬಗ್ಗೆ ಕೇಂದ್ರ ಸರಕಾರ ಮಾರ್ಗಸೂಚಿ ರೂಪಿಸಿದೆ. ಬರ ಘೋಷಣೆ ರಾಜ್ಯ ಸರಕಾರಗಳ ಕೈಯ್ಯಲ್ಲಿಲ್ಲ ಎಂದು ರಾಜ್ಯ ಸಚಿವ ಸಂಪುಟ ಉಪ ಸಮಿತಿಯ ಬೆಳಗಾವಿ ವಿಭಾಗದ ಅಧ್ಯಕ್ಷ ಹಾಗೂ ಕಂದಾಯ ಸಚಿವ ಆರ್‌.ವಿ. ದೇಶಪಾಂಡೆ ಅಸಹಾಯ ಕತೆ ವ್ಯಕ್ತಪಡಿಸಿದರು.

Vijaya Karnataka 8 Jan 2019, 5:00 am
ಹಾವೇರಿ: ಬರ ಪೀಡಿತ ತಾಲೂಕ ಘೋಷಣೆ ಬಗ್ಗೆ ರೈತರು ತಪ್ಪು ತಿಳಿದಿದ್ದಾರೆ, ಈಗ ಕಾಲ ಬದಲಾಗಿದೆ ಬರ ಪರಿಸ್ಥಿತಿ ಹೇಗಿರಬೇಕು ಎನ್ನುವ ಬಗ್ಗೆ ಕೇಂದ್ರ ಸರಕಾರ ಮಾರ್ಗಸೂಚಿ ರೂಪಿಸಿದೆ. ಬರ ಘೋಷಣೆ ರಾಜ್ಯ ಸರಕಾರಗಳ ಕೈಯ್ಯಲ್ಲಿಲ್ಲ ಎಂದು ರಾಜ್ಯ ಸಚಿವ ಸಂಪುಟ ಉಪ ಸಮಿತಿಯ ಬೆಳಗಾವಿ ವಿಭಾಗದ ಅಧ್ಯಕ್ಷ ಹಾಗೂ ಕಂದಾಯ ಸಚಿವ ಆರ್‌.ವಿ. ದೇಶಪಾಂಡೆ ಅಸಹಾಯ ಕತೆ ವ್ಯಕ್ತಪಡಿಸಿದರು.
Vijaya Karnataka Web drought declaration at the centers hand
ಬರ ಘೋಷಣೆ, ಕೇಂದ್ರದ ಕೈಯ್ಯಲ್ಲಿ


ಜಿಲ್ಲೆಯ ಬರ ಪರಿಸ್ಥಿತಿ ಅಧ್ಯಯನ ವೇಳೆ ಸೋಮವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಈ ನಿಯಮ ಅನುಸರಿಸಿ ಬರ ಪೀಡಿತ ತಾಲೂಕಿನ ಪರಿಹಾರ ಕೈಗೊಳ್ಳಲು ಅಗತ್ಯ ಅನುದಾನ ಕೇಳಿದಲ್ಲಿ ಮಾತ್ರ ನೀಡುತ್ತಾರೆ. ವಿರೋಧಿಸಿದಲ್ಲಿ ಕೊಡುವ ಅನುದಾನ ಸಹ ಬಿಡುಗಡೆ ಮಾಡುವುದಿಲ್ಲ ಎಂದು ಆರೋಪಿಸಿದರು.

ಮೇವು ರಫ್ತು ನಿಷೇಧ: ಬರ ಪರಿಸ್ಥಿತಿ ಹಿನ್ನೆಲೆ ಜಾನುವಾರುಗಳಿಗೆ ಮೇವಿನ ಕೊರತೆ ಉಂಟಾಗದಂತೆ ನೋಡಿಕೊಳ್ಳಲು ಹೊರ ರಾಜ್ಯಗಳಿಗೆ ಮೇವು ರಫ್ತು ಮಾಡುವುದನ್ನು ನಿಷೇಧಿಸುವ ನಿರ್ಣಯವನ್ನು ನಮ್ಮ ಸರಕಾರ ಕೈಗೊಂಡಿದೆ ಎಂದರು.

ಹಣದ ಕೊರತೆ ಇಲ್ಲ:
ರಾಜ್ಯದ ಬರ ಪರಿಸ್ಥಿತಿ ಎದುರಿಸಲು ನಮ್ಮ ಸರಕಾರ ಬದ್ಧವಾಗಿದೆ. ಬರ ಪೀಡಿತ ಪ್ರದೇಶಗಳಲ್ಲಿ ಕೆಲಸ ಇಲ್ಲದೇ ಕೂಲಿಕಾರರು ವಲಸೆ ಹೋಗುವುದನ್ನು ತಡೆಯಲು, ಜನ ಮತ್ತು ಜಾನುವಾರುಗಳಿಗೆ ಕುಡಿಯುವ ನೀರು ಲಭ್ಯತೆ, ಮೇವು ಸೇರಿದಂತೆ ಪರಿಹಾರ ಕೆಲಸಗಳಿಗೆ ಅಗತ್ಯ ಅನುದಾನ ಆಯಾ ಜಿಲ್ಲಾಧಿಕಾರಿ ಹಾಗೂ ತಹಸೀಲ್ದಾರ ಬಳಿ ಲಭ್ಯವಿದೆ. ಸರಕಾರ ಸಹ ಕುಡಿಯುವ ನೀರಿಗೆ ಈಗಾಗಲೇ ಪ್ರತಿ ಜಿಲ್ಲೆಗೆ 50 ಲಕ್ಷ ಅನುದಾನ ಒದಗಿಸಿತ್ತು. ಈಗ ಮತ್ತೆ 50 ಲಕ್ಷ ಹೆಚ್ಚುವರಿಯಾಗಿ ವಿತರಿಸುವ ಮೂಲಕ ಕುಡಿಯುವ ನೀರು ಭವಣೆ ಉಂಟಾಗದಂತೆ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ ಎಂದರು.

ಬೆಳೆ ನಷ್ಟ ಜಂಟಿ ಸಮೀಕ್ಷೆ: ಬೆಳೆ ನಷ್ಟ ಸಮೀಕ್ಷೆಯಲ್ಲಿ ಯಾವುದೇ ಕಾರಣಕ್ಕೂ ರೈತರಿಗೆ ಅನ್ಯಾಯವಾಗದಂತೆ ಕೃಷಿ, ತೋಟಗಾರಿಕೆ, ಕಂದಾಯ, ಪಶು ಸಂಗೋಪನೆ, ಗ್ರಾಮೀಣ ಕುಡಿಯುವ ನೀರು ಸೇರಿದಂತೆ ಪೂರಕ ಇಲಾಖಾ ಅಧಿಕಾರಿಗಳ ನೇತೃತ್ವದಲ್ಲಿ ಜಂಟಿ ಸಮೀಕ್ಷೆ ನಡೆಸುವಂತೆ ಹಾಗೂ ತ್ವರಿತ ಗತಿಯಲ್ಲಿ ಸರಕಾರಕ್ಕೆ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ ಎಂದರು.

ಸಚಿವ ಪುಟ್ಟರಂಗಶೆಟ್ಟಿ ಸಾಧು ಪ್ರಾಣಿ: ವಿಧಾನ ಸೌಧದಲ್ಲಿ ಸಚಿವ ಕೆ.ಪುಟ್ಟರಂಗಶೆಟ್ಟಿ ಆಪ್ತ ಸಹಾಯಕ ಮೋಹನ ಬಳಿ 25 ಲಕ್ಷ ಹಣ ಸಿಕ್ಕಿರುವ ಮಾಹಿತಿ ಪತ್ರಿಕೆಗಳ ಮೂಲಕ ತಿಳಿದಿದೆ. ವಾಸ್ತವದಲ್ಲಿ ಸಚಿವ ಪುಟ್ಟರಂಗಶೆಟ್ಟಿ ಸಾಧು ಪ್ರಾಣಿ ಮತ್ತು ಸಜ್ಜನ ಎಂದ ಸಚಿವ ದೇಶಪಾಂಡೆ, ರಾಜೀನಾಮೆ ಮಾಧ್ಯಮಗಳ ಊಹಾ- ಪೋಹ ಎಂದು ನಿರಾಕರಿಸಿದರು. ಸಚಿವ ಎಂ.ಸಿ. ಮನಗೂಳಿ, ಶಾಸಕ ನೆಹರು ಓಲೇಕಾರ, ವಿರುಪಾಕ್ಷಪ್ಪ ಬಳ್ಳಾರಿ, ಜಿಪಂ ಎಸ್‌.ಕೆ. ಕರಿಯಣ್ಣನವರ, ಮಾಜಿ ಸಚಿವ ರುದ್ರಪ್ಪ ಲಮಾಣಿ ಇತರರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ