ಆ್ಯಪ್ನಗರ

ವರದೆ ಪಕ್ಕದಲ್ಲಿದ್ದರೂ ನೀರಿಗೆ ಬರ

ಮಂಜುನಾಥ ಹಳ್ಳದ ಹಾವೇರಿ: ಸಮೀಪದಲ್ಲಿ ವರದಾ ನದಿ ತುಂಬಿ ಹರಿಯುತ್ತಿದ್ದರೂ ತಾಲೂಕಿನ ಗಣಜೂರ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಪರದಾಟಕ್ಕೆ ಕೊನೆಯಿಲ್ಲದಂತಾಗಿದ್ದು, ಸಕಾಲಕ್ಕೆ ನೀರು ದೊರೆಯದೆ ಸಾರ್ವಜನಿಕರು ಸಮಸ್ಯೆ ಎದುರಿಸುವಂತಾಗಿದೆ.

Vijaya Karnataka 22 Jul 2019, 5:00 am
ಮಂಜುನಾಥ ಹಳ್ಳದ ಹಾವೇರಿ: ಸಮೀಪದಲ್ಲಿ ವರದಾ ನದಿ ತುಂಬಿ ಹರಿಯುತ್ತಿದ್ದರೂ ತಾಲೂಕಿನ ಗಣಜೂರ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಪರದಾಟಕ್ಕೆ ಕೊನೆಯಿಲ್ಲದಂತಾಗಿದ್ದು, ಸಕಾಲಕ್ಕೆ ನೀರು ದೊರೆಯದೆ ಸಾರ್ವಜನಿಕರು ಸಮಸ್ಯೆ ಎದುರಿಸುವಂತಾಗಿದೆ.
Vijaya Karnataka Web HVR-21 HAVERI 1 (1)


ಜಿಲ್ಲಾ ಕೇಂದ್ರದಿಂದ 10 ಕಿ.ಮೀ. ದೂರವಿರುವ ಈ ಗ್ರಾಮದಲ್ಲಿ ಸಾವಿರಕ್ಕೂ ಹೆಚ್ಚು ಜನಸಂಖ್ಯೆಯಿದೆ. ಗ್ರಾಮದ ಪ್ರತಿ ಓಣಿಗಳಲ್ಲಿಯೂ ನೀರಿನ ತೊಂದರೆ ಇದೆ. ಕೋಳೂರು ಗ್ರಾಪಂ ವ್ಯಾಪ್ತಿಗೆ ಬಂದರೂ ಗ್ರಾಪಂ ಆಡಳಿತ ಇದಕ್ಕೂ ನಮಗೂ ಸಂಬಂಧ ಇಲ್ಲ ಎನ್ನುವಂತೆ ವರ್ತಿಸುತ್ತಿದೆ. ಮಳೆಗಾಲ ಶುರುವಾಗಿ 2 ತಿಂಗಳ ಕಳೆದರೂ ಗ್ರಾಮದಲ್ಲಿ ಕುಡಿಯುವ ನೀರು ಸಂಗ್ರಹಿಸಲು ದಿನಗಟ್ಟಲೇ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಕುಡಿಯುವ ನೀರಿನ ಅಭಾವದ ಮಧ್ಯೆ ಜೀವನ ನಡೆಸುವಂತಾಗಿದೆ.

ಕೋಳೂರಿನಿಂದ ನೀರು: ಗಣಜೂರು ಗ್ರಾಮದಿಂದ 4 ಕಿ.ಮೀ. ದೂರವಿರುವ ಕೋಳೂರ ಗ್ರಾಮದ ಬೋರವೆಲ್‌ಗಳಿಂದ ಗಣಜೂರಿಗೆ ನೀರು ಹರಿಸಲಾಗುತ್ತದೆ. ಆದರೆ, ಅಂತರ್ಜಲ ಮಟ್ಟ ಕುಸಿತದಿಂದ ನೀರು ಪೂರೈಕೆಗೆ ಸಮಸ್ಯೆಯಾಗಿದೆ. ಗಣಜೂರನಲ್ಲಿ ಒಂದೇ ಬೋರವೆಲ್‌ ಇದ್ದು ತಾಸಿಗೊಂದು ಕೊಡ ನೀರು ತುಂಬಿಸುತ್ತಿದೆ. ಇದಕ್ಕೆ ಹಗಲು ರಾತ್ರಿ ಎನ್ನದೆ ಸರದಿ ನಿಂತು ನೀರನ್ನು ಹಿಡಿಯಬೇಕಾಗಿದೆ ಎನ್ನುತ್ತಾರೆ ಸ್ಥಳೀಯ ನಾಗರಿಕರು.

ಕೆಲಸ ಬಿಟ್ಟು ನೀರಿಗೆ ಅಲೆದಾಟ: ಗ್ರಾಮದಲ್ಲಿ ಎಲ್ಲಿ ಬೋರವೆಲ್‌ ಕೊರೆಸಿದರೂ ಹನಿ ನೀರು ಸಿಗದ ಕಾರಣ. ಕೆಲಸ ಬಿಟ್ಟು ಪಕ್ಕದ ತೋಟ ಇಲ್ಲವೆ, ಗ್ರಾಮದಿಂದ 4 ಕಿ.ಮೀ ದೂರವಿರುವ ವರದಾ ನದಿಗೆ ಹೋಗಿ ನೀರು ತರುತ್ತಿದ್ದಾರೆ.

ಕೋಳೂರ ಗ್ರಾಮದಿಂದ 200 ಮೀ. ಅಂತರದಲ್ಲಿ ವರದಾ ನದಿ ಹರಿದಿದ್ದರೂ ಗಣಜೂರು ಗ್ರಾಮಕ್ಕೆ ನೀರು ಲಭ್ಯವಿಲ್ಲದಂತಾಗಿದೆ. ನೀರಿನ ಸಮಸ್ಯೆಯನ್ನು ಬಗೆಹರಿಸಿ ಶಾಶÜ್ವತ ಪರಿಹಾರ ನೀಡಿ ಎಂದು ಗ್ರಾಪಂ ಪಿಡಿಒ ಮತ್ತು ಗ್ರಾಪಂ ಸದಸ್ಯರು, ಅಧ್ಯಕ್ಷರ ಗಮನಕ್ಕೆ ತಂದರೂ ಇದುವರೆಗೂ ಶಾಶ್ವತ ಪರಿಹಾರಕ್ಕೆ ಕ್ರಮಕೈಗೊಂಡಿಲ್ಲ ಎನ್ನುತ್ತಾರೆ ಗ್ರಾಮಸ್ಥರು. ಕೂಡಲೇ ನದಿ ನೀರನ್ನು ಹರಿಸಿ ಕೆರೆಗಳನ್ನು ತುಂಬಿಸಬೇಕು. ಕುಡಿಯುವ ನೀರಿನ ಸಮಸ್ಯೆ ಹೋಗಲಾಡಿಸಬೇಕು ಎನ್ನುವುದು ಸಾರ್ವಜನಿಕರ ಒತ್ತಾಯ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ