ಆ್ಯಪ್ನಗರ

ಹಾವೇರಿ: ಡ್ರಗ್ಸ್‌ ಮಾಫಿಯಾದಲ್ಲಿ ಜಮೀರ್‌ ಟಾರ್ಗೆಟ್ ಸಲ್ಲ ಎಂದ ಧ್ರುವ ನಾರಾಯಣ

ಡ್ರಗ್ಸ್‌ ಮಾಫಿಯಾ ವಿಚಾರದಲ್ಲಿ ಉದ್ದೇಶಪೂರ್ವಕವಾಗಿ ಶಾಸಕ ಜಮೀರ ಅಹ್ಮದ್‌ ಖಾನ್‌ ಅವರನ್ನು ಟಾರ್ಗೆಟ್‌ ಮಾಡುತ್ತಿರುವುದು ಸರಿಯಲ್ಲಎಂದು ಮಾಜಿ ಸಂಸದ ಧ್ರುವ ನಾರಾಯಣ ಹೇಳಿದ್ದಾರೆ.

Vijaya Karnataka 15 Sep 2020, 3:27 pm
ಹಾವೇರಿ: ಡ್ರಗ್ಸ್‌ ಮಾಫಿಯಾ ವಿಚಾರದಲ್ಲಿಉದ್ದೇಶಪೂರ್ವಕವಾಗಿ ಶಾಸಕ ಜಮೀರ ಅಹ್ಮದ್‌ ಖಾನ್‌ ಅವರನ್ನು ಟಾರ್ಗೆಟ್‌ ಮಾಡುತ್ತಿರುವುದು ಸರಿಯಲ್ಲಎಂದು ಮಾಜಿ ಸಂಸದ ಧ್ರುವ ನಾರಾಯಣ ಹೇಳಿದ್ದಾರೆ.
Vijaya Karnataka Web Dhruva Narayana


ಆರೋಗ್ಯ ಹಸ್ತ ಕಾರ್ಯಕ್ರಮಕ್ಕೆ ಚಾಲನೆ ನೀಡಲು ಸೋಮವಾರ ಇಲ್ಲಿಗೆ ಆಗಮಿಸಿದ್ದ ವೇಳೆ ಸುದ್ದಿಗಾರರ ಜತೆ ಮಾತನಾಡಿದ ಅವರು, ''ಶಾಸಕ ಜಮೀರ್‌ ಅವರನ್ನು ನಾವು ಯಾರೂ ಬೆಂಬಲಿಸುತ್ತಿಲ್ಲ. ಕೊಲೊಂಬೊದ ಕ್ಯಾಸಿನೊಗೆ ಜಮೀರು ಹೋಗಿದ್ದಾರೆ ಎಂದ ಮಾತ್ರಕ್ಕೆ ಡ್ರಗ್ಸ್‌ ಜಾಲದಲ್ಲಿ ಭಾಗಿಯಾಗಿದ್ದಾರೆ ಎನ್ನುವುದು ತಪ್ಪು. ಕ್ಯಾಸಿನೊಗೆ ಬಹಳಷ್ಟು ಜನ ಹೋಗುತ್ತಾರೆ, ಬರುತ್ತಾರೆ. ಹಾಗೆಂದ ಮಾತ್ರಕ್ಕೆ ಅವರ ವಿರುದ್ಧ ಆಧಾರ ರಹಿತ ಆರೋಪ ಮಾಡುವುದು ಸರಿಯಲ್ಲ'' ಎಂದರು.

ಡ್ರಗ್ಸ್‌ ಮಾಫಿಯಾದಲ್ಲಿ ಸಿಕ್ಕಿ ಹಾಕಿಕೊಂಡಿರುವ ನಟಿಯರಾದ ರಾಗಿಣಿ ಮತ್ತು ಸಂಜನಾ ಬಿಜೆಪಿ ಸ್ಟಾರ್‌ ಪ್ರಚಾರಕರಾಗಿ ಕೆ.ಆರ್‌.ಪೇಟೆ ಮತ್ತು ಚಿಕ್ಕಬಳ್ಳಾಪುರದಲ್ಲಿಭಾಗವಹಿಸಿದ್ದರು. ಅವರನ್ನು ಕರೆದಿರಲಿಲ್ಲ, ಅವರೇ ಬಂದು ಹೋಗಿದ್ದಾರೆ ಎಂದು ಈಗ ಬಿಜೆಪಿ ನಾಯಕರು ಬೇಜವಾಬ್ದಾರಿ ಹೇಳಿಕೆ ನೀಡುತ್ತಿದ್ದಾರೆ'' ಎಂದು ಟೀಕಿಸಿದರು.

4 - ಡ್ರಗ್ಸ್ ಮಾಫಿಯಾ: ಜಮೀರ್, ಸಿಟಿ ರವಿ ನಡುವೆ ನಿಲ್ಲದ ಗುದ್ದಾಟ..!

''ಡ್ರಗ್ಸ್‌ ಮಾಫಿಯಾದಲ್ಲಿ ಯಾವುದೇ ಪಕ್ಷದ ಯಾರೇ ತಪ್ಪು ಮಾಡಿದರೂ ಕಾನೂನು ಪ್ರಕಾರ ಶಿಕ್ಷೆಯಾಗಬೇಕು ಎನ್ನುವುದು ಕಾಂಗ್ರೆಸ್‌ ನಿಲುವು. ಯಾವುದೇ ಕಾರಣಕ್ಕೂ ಆಧಾರವಿಲ್ಲದೇ ಶಾಸಕ ಜಮೀರ್‌ ಅಹ್ಮದ್‌ ಅವರ ಬಗ್ಗೆ ಆರೋಪಿಸುವುದು ಸರಿಯಲ್ಲ'' ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ