ಆ್ಯಪ್ನಗರ

ಬಳ್ಳಾರಿ ಬಾರ್ಡರ್‌ನಲ್ಲಿ ಹದ್ದಿನ ಕಣ್ಣು

ಗುತ್ತಲ : ಗಣಿ ನಾಡು ಬಳ್ಳಾರಿ ಜಿಲ್ಲೆಯಲ್ಲಿನ ಸುದ್ದಿ, ಗದ್ದಲವು ನೆರೆಯ ಹಾವೇರಿ ಜಿಲ್ಲೆಯಲ್ಲೂ ಕೇಳಿಬರುತ್ತಿದ್ದು, ಗಡಿ ಭಾಗದಲ್ಲಿ ಹಾವೇರಿ ಪೊಲೀಸರ ತಂಡ ಹದ್ದಿನ ಕಣ್ಣಿಡುವಂತಾಗಿದೆ.

Vijaya Karnataka 21 Mar 2019, 5:00 am
ಗುತ್ತಲ : ಗಣಿ ನಾಡು ಬಳ್ಳಾರಿ ಜಿಲ್ಲೆಯಲ್ಲಿನ ಸುದ್ದಿ, ಗದ್ದಲವು ನೆರೆಯ ಹಾವೇರಿ ಜಿಲ್ಲೆಯಲ್ಲೂ ಕೇಳಿಬರುತ್ತಿದ್ದು, ಗಡಿ ಭಾಗದಲ್ಲಿ ಹಾವೇರಿ ಪೊಲೀಸರ ತಂಡ ಹದ್ದಿನ ಕಣ್ಣಿಡುವಂತಾಗಿದೆ.
Vijaya Karnataka Web HVR-20GTL 1


ಬಳ್ಳಾರಿ ಗಡಿ ಭಾಗ ಹೊಂದಿರುವ ಹಾವೇರಿ ಜಿಲ್ಲೆಯ ಗಡಿ ಗ್ರಾಮಗಳನ್ನು ತುಂಗಭದ್ರಾ ನದಿ ಬೇರ್ಪಡಿಸಿದ್ದು ನದಿಗೆ ಅಡ್ಡಲಾಗಿ ಬೃಹತ ಪ್ರಮಾಣದ ಸೇತುವೆ ನಿರ್ಮಿಸಲಾಗಿದೆ. ಚುನಾವಣ ಸಂದರ್ಭದಲ್ಲಿ ಈ ಸೇತುವೆ ಮಾರ್ಗವಾಗಿ ಭಾರಿ ಪ್ರಮಾಣದ ಹಣ ಸಾಗಿಸಲಾಗುತ್ತದೆ ಎಂಬ ಗುಮಾನಿ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದ್ದು, ಚುನಾವಣೆ ಅಧಿಕಾರಿಗಳು ಕಟ್ಟೆಚ್ಚರ ವಹಿಸಿದ್ದಾರೆ.

ಸೇತುವೆ ಪಕ್ಕದಲ್ಲಿ ಚೆಕ್‌ಪೋಸ್ಟ್‌ ನಿರ್ಮಿಸಿ ಹಗಲು ರಾತ್ರಿ ವಾಹನ ತಪಾಸಣೆ ಮಾಡಲಾಗುತ್ತಿದೆ. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲೆಡೆ ಚೆಕ್‌ಪೋಸ್ಟ್‌ ನಿರ್ಮಿಸಲಾಗಿದೆಯಾದರು ಇಲ್ಲಿನ ಚೆಕಪೋಸ್ಟ್‌ ವಿಶೇಷತೆ ಹೊಂದಿದೆ.

ಬಳ್ಳಾರಿ ಕಡೆಯಿಂದ ಹಾವೇರಿ ಜಿಲ್ಲೆಗೆ ಪ್ರವೇಶ ಪಡೆಯುವ ಪ್ರತಿಯೊಂದು ವಾಹನವನ್ನು ತಪಾಸಣೆಗೆ ಒಳಪಡಿಸಲಾಗುತ್ತಿದೆ. ಈ ಮಾರ್ಗವಾಗಿ ಮರಳು ತುಂಬಿದ ಲಾರಿಗಳು, ಜಲಿಕಲ್ಲು , ಎಂ-ಸ್ಯಾಂಡ್‌ ತುಂಬಿದ ಭಾರಿ ಪ್ರಮಾಣದ ವಾಹನಗಳು ಸಂಚರಿಸುತ್ತವೆ.

ಪಂಚಾಯಿತಿ ಪಿಡಿಓಗಳಾದ ರಾಮಣ್ಣಾ ಮರಾಠಿ, ಬಸವರಾಜ ಬನ್ನಿಮಟ್ಟಿ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎಂ.ಕೆ.ಮುಗಳಿ, ರೈತ ಸಂರ್ಪಕ ಕೇಂದ್ರದ ಅಧಿಕಾರಿ ಎಸ್‌.ಎಸ್‌.ಸಿದ್ದಾಪೂರ .ಮಹೇಶ, ಮುದ್ದಿಯಮ್ಮನವರ ಸೇರಿದಂತೆ ಇತರರು ಚುನಾವಣಾಧಿಕಾರಿಗಳಾಗಿ ಕಾರ್ಯನಿರ್ವಸುತ್ತಿದ್ದಾರೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ