ಆ್ಯಪ್ನಗರ

ಇಂಗ್ಲಿಷ್‌ ಕಾನ್ವೆಂಟ್‌: ಪ್ರವೇಶ ಹೆಚ್ಚಳಕ್ಕೆ ಒತ್ತಾಯ

ಶಿಗ್ಗಾವಿ: ಪ್ರಸಕ್ತ ಶೈಕ್ಷ ಣಿಕ ವರ್ಷದಿಂದ ರಾಜ್ಯ ಸರಕಾರ ಆರಂಭ ಮಾಡಿದ ಆಂಗ್ಲ ಮಾಧ್ಯಮ ಪಬ್ಲಿಕ್‌ ಶಾಲೆಗಳಲ್ಲಿ ಇಂಗ್ಲೀಷ್‌ ಕಲಿಕೆಗೆ ಕೇವಲ 30 ಮಕ್ಕಳಿಗೆ ಪ್ರವೇಶ ನೀಡಿರುವುದನ್ನು ಖಂಡಿಸಿ, ಪಟ್ಟಣದ ನಂಬರ-1 ಸರಕಾರಿ ಶಾಲೆ ಮುಂದೆ ಪ್ರತಿಭಟನೆ ಕೈಗೊಂಡ ಪಾಲಕರು, ಜೂ. 24 ರೊಳಗಾಗಿ ಆಂಗ್ಲ ಮಾಧ್ಯಮ ಶಿಕ್ಷ ಣದಲ್ಲಾಗುತ್ತಿರುವ ತಾರತಮ್ಯ ನೀತಿ ಸರಿಪಡಿಸಿ ದಾಖಲಾದ ಎಲ್ಲ ವಿದ್ಯಾರ್ಥಿಗಳಿಗೆ ಇಂಗ್ಲೀಷ್‌ ಕಲಿಕೆಗೆ ಅವಕಾಶ ನೀಡುವಂತೆ ಗುರುವಾರ ಬಿಇಒಗೆ ಮನವಿ ಅರ್ಪಿಸಿದರು.

Vijaya Karnataka 21 Jun 2019, 5:00 am
ಶಿಗ್ಗಾವಿ: ಪ್ರಸಕ್ತ ಶೈಕ್ಷ ಣಿಕ ವರ್ಷದಿಂದ ರಾಜ್ಯ ಸರಕಾರ ಆರಂಭ ಮಾಡಿದ ಆಂಗ್ಲ ಮಾಧ್ಯಮ ಪಬ್ಲಿಕ್‌ ಶಾಲೆಗಳಲ್ಲಿ ಇಂಗ್ಲೀಷ್‌ ಕಲಿಕೆಗೆ ಕೇವಲ 30 ಮಕ್ಕಳಿಗೆ ಪ್ರವೇಶ ನೀಡಿರುವುದನ್ನು ಖಂಡಿಸಿ, ಪಟ್ಟಣದ ನಂಬರ-1 ಸರಕಾರಿ ಶಾಲೆ ಮುಂದೆ ಪ್ರತಿಭಟನೆ ಕೈಗೊಂಡ ಪಾಲಕರು, ಜೂ. 24 ರೊಳಗಾಗಿ ಆಂಗ್ಲ ಮಾಧ್ಯಮ ಶಿಕ್ಷ ಣದಲ್ಲಾಗುತ್ತಿರುವ ತಾರತಮ್ಯ ನೀತಿ ಸರಿಪಡಿಸಿ ದಾಖಲಾದ ಎಲ್ಲ ವಿದ್ಯಾರ್ಥಿಗಳಿಗೆ ಇಂಗ್ಲೀಷ್‌ ಕಲಿಕೆಗೆ ಅವಕಾಶ ನೀಡುವಂತೆ ಗುರುವಾರ ಬಿಇಒಗೆ ಮನವಿ ಅರ್ಪಿಸಿದರು.
Vijaya Karnataka Web HVR-20SGN-2


ಸರಕಾರ ಮೌಖಿಕವಾಗಿ ಸೂಚಿಸಿದಂತೆ ಹೆಚ್ಚುವರಿ ಮಕ್ಕಳಿಗೆ ಪ್ರವೇಶ ನೀಡಬೇಕು. ಶಾಲೆಗೆ ದಾಖಲಾದ ಎಲ್ಲ ಮಕ್ಕಳಿಗೂ ಆಂಗ್ಲ ಮಾಧ್ಯಮ ಕಲಿಕೆಗೆ ಅವಕಾಶ ಕಲ್ಪಿಸಿ, ಸರಕಾರವೇ ಆದೇಶ ಮಾಡಬೇಕು. ಇಲ್ಲದಿದ್ದಲ್ಲಿ ಉಗ್ರ ಪ್ರತಿಭಟನೆಗೆ ಮುಂದಾಗುತ್ತೇವೆ. ಇದಕ್ಕೂ ಪರಿಹಾರ ಸಿಗದಿದ್ದಲ್ಲಿ ಬಿಇಒ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ ನಡೆಸುವುದಾಗಿ ಮನವಿಯಲ್ಲಿ ಎಚ್ಚರಿಕೆ ನೀಡಿದ್ದಾರೆ.

ಶಿಗ್ಗಾವಿ ಪಟ್ಟಣದ ನಂಬರ್‌-1 ಶಾಲೆ ಸೇರಿದಂತೆ ರಾಜ್ಯದಲ್ಲಿ ಒಂದು ಸಾವಿರ ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಇಂಗ್ಲೀಷ ಕಲಿಕೆಗೆ ಅವಕಾಶ ನೀಡಿದ ಸರಕಾರ, ತರಗತಿಯಲ್ಲಿ 30ಕ್ಕಿಂತ ಹೆಚ್ಚು ಓದುವ ಎಲ್ಲ ಮಕ್ಕಳಿಗೆ ಕಲಿಕೆ ಅವಕಾಶ ನೀಡಬೇಕು. ಒಂದೇ ಶಾಲೆಯಲ್ಲಿ ಓದುವ ಮಕ್ಕಳಲ್ಲಿ ಕೆಲವರಿಗೆ ಪ್ರವೇಶ ನೀಡಿ, ಇನ್ನುಳಿದ ಮಕ್ಕಳಿಗೆ ಪ್ರವೇಶ ವಂಚನೆ ಮಾಡುವುದು ಸರಿಯಲ್ಲ.

ಶಾಲೆಯಲ್ಲಿ ಓದುವ 1ನೇ ತರಗತಿಯ ಎಲ್ಲ ಮಕ್ಕಳಿಗೆ ಪ್ರವೇಶ ನೀಡುವಂತೆ ತಕ್ಷ ಣ ಮರು ಆದೇಶ ನೀಡಬೇಕು. ಇಲ್ಲವಾದರೆ ಇಂಗ್ಲೀಷ್‌ ಕಲಿಕೆಯನ್ನೇ ರದ್ದುಪಡಿಸಬೇಕು. ಒಂದು ವೇಳೆ ಈಗಿನ ಆದೇಶದನ್ವಯ ಮುಂದುವರೆದಲ್ಲಿ ಜೂ.24 ರಂದು ಕೈಗೊಳ್ಳುವ ಗಂಭೀರವಾದ ಪ್ರತಿಭಟನೆ ಸರಕಾರ ಹಾಗೂ ಶಿಕ್ಷ ಣ ಇಲಾಖೆ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಮನವಿ ಸ್ವೀಕರಿಸಿ ಮಾತನಾಡಿದ ಬಿಇಒ ಶಿವಾನಂದ ಹೆಳವರ, ಈಗಾಗಲೇ ಈ ಕುರಿತು ಜಿಲ್ಲಾ ಶಿಕ್ಷ ಣ ಇಲಾಖೆ ಉಪ ನಿರ್ದೇಶಕರ ಮೂಲಕ ಸರಕಾರದ ಗಮನಕ್ಕೆ ತರಲಾಗಿದೆ. ಎಲ್ಲ ಮಕ್ಕಳಿಗೆ ಆಂಗ್ಲ ಮಾಧ್ಯಮ ಶಿಕ್ಷ ಣ ನೀಡಲು ಮರು ಆದೇಶ ಮಾಡುವ ನಿರೀಕ್ಷೆಯಲ್ಲಿ ಶಿಕ್ಷ ಣ ಇಲಾಖೆ ಇದೆ ಎಂದರು.

ರವಿ ಮಡಿವಾಳರ, ಸಂಜೀವ ಮಣ್ಣಣ್ಣವರ, ಅಣ್ಣಪ್ಪ ಕುಂದಗೋಳ, ಸುರೇಶ ಪಾಟೀಲ, ಎಸ್‌.ಪಿ.ಪೊಲೀಸ್‌ಗೌಡ್ರ, ಮಲ್ಲಿಕಾರ್ಜುನ ಸೇರಿದಂತೆ ಪಾಲಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ