ಆ್ಯಪ್ನಗರ

ಶ್ರೀ ಗದಿಗೆಪ್ಪಜ್ಜನವರ ಪುರ ಪ್ರವೇಶ

ಗುತ್ತಲ: ಹೊಸರಿತ್ತಿ ಗುದ್ದಲೀಶ್ವರ ಮಠದ 4ನೇ ಪೀಠಾಧಿಪತಿ ಮಹಾನ್‌ ತಪಸ್ವಿ ಲಿಂಗೈಕ್ಯ ಶ್ರೀ ಗದಿಗೆಪ್ಪಜ್ಜನವರ ಪುರ ಪ್ರವೇಶ ಕಾರ್ಯಕ್ರಮ ವೈಭವದಿಂದ ಶನಿವಾರ ಜರುಗಿತು.

Vijaya Karnataka 19 Aug 2019, 5:00 am
ಗುತ್ತಲ: ಹೊಸರಿತ್ತಿ ಗುದ್ದಲೀಶ್ವರ ಮಠದ 4ನೇ ಪೀಠಾಧಿಪತಿ ಮಹಾನ್‌ ತಪಸ್ವಿ ಲಿಂಗೈಕ್ಯ ಶ್ರೀ ಗದಿಗೆಪ್ಪಜ್ಜನವರ ಪುರ ಪ್ರವೇಶ ಕಾರ್ಯಕ್ರಮ ವೈಭವದಿಂದ ಶನಿವಾರ ಜರುಗಿತು.
Vijaya Karnataka Web entrance of sri gadigeppazza pura
ಶ್ರೀ ಗದಿಗೆಪ್ಪಜ್ಜನವರ ಪುರ ಪ್ರವೇಶ


ಗ್ರಾಮದ ಪ್ರವಾಸಿ ಮಂದಿರದಿಂದ 108 ಸುಮಂಗಲೆಯರ ಪೂರ್ಣ ಕುಂಭ, ವಿವಿಧ ವಾದ್ಯಗಳು ಮೂಲಕ ಸಾರೋಟದಲ್ಲಿ ಶ್ರೀ ಗದಿಗೆಪ್ಪಜ್ಜನವರ ವಿಗ್ರಹವನ್ನು ಶ್ರದ್ಧಾ ಭಕ್ತಿಯಿಂದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯ ಮೂಲಕ ಮಠಕ್ಕೆ ಕರೆ ತರಲಾಯಿತು.

ನಂತರ ವಿವಿಧ ಪೂಜೆ ಕೈಕಂರ್ಯಗಳು ನೆರವೇರಿದವು. ಮಠದ 5ನೇ ಪೀಠಾಧಿಪತಿಗಳಾದ ಶ್ರೀ ಗುದ್ದಲೀಶ್ವರ ಸ್ವಾಮೀಜಿ, ಗುಡ್ಡದ ಆನ್ವೇರಿಯ ಶಿವಯೋಗೀಶ್ವರ ಸ್ವಾಮೀಜಿ, ಹೂವಿನ ಶಿಗ್ಲಿಯ ಚನ್ನವೀರ ಸ್ವಾಮೀಜಿ ಉಪಸ್ಥಿತರಿದ್ದರು. ಇದೇ ವೇಳೆ ಹಾವೇರಿ ಹುಕ್ಕೇರಿ ಮಠದ ಸದಾಶಿವ ಸ್ವಾಮೀಜಿ ಹಾಗೂ ಅಕ್ಕಿಆಲೂರಿನ ಶಿವಬಸವ ಸ್ವಾಮೀಜಿ ಗದಿಗೆಪ್ಪಜ್ಜನವರ ದರ್ಶನ ಪಡೆದುಕೊಂಡರು.

ಮೆರವಣಿಗೆಯಲ್ಲಿ ಮುಖಂಡರಾದ ಐ.ಜೆ ಕೋರಿ, ಗ್ರಾಪಂ ಉಪಾಧ್ಯಕ್ಷ ಶಂಕ್ರಣ್ಣ ಅಂಬಿಗೇರ, ನರೇಶ ಮಂತಟ್ಟಿ, ತಾಪಂ ಮಾಜಿ ಸದಸ್ಯ ಮಲ್ಲೇಶಪ್ಪ ದೀಪಾಳಿ, ಗ್ರಾ.ಪಂ ಸದಸ್ಯರಾದ ಗುಡದಯ್ಯ ಭರಡಿ, ಚನ್ನಪ್ಪ ಹಳ್ಳಿಕೇರಿ, ಅರುಣಕುಮಾರ ಶೆಟ್ಟರ್‌, ಸಿದ್ದಣ್ಣ ಹಳ್ಳಿಕೇರಿ, ಗ್ರಾ.ಪಂ ಮಾಜಿ ಅಧ್ಯಕ್ಷ ಪರಶುರಾಮ ಚಂದ್ರಗಿರಿ, ಗ್ರಾ.ಪಂ ಮಾಜಿ ಉಪಾಧ್ಯಕ್ಷ ಚನ್ನವೀರಯ್ಯ ಹಾವೇರಿಮಠ, ಶಂಕ್ರಣ್ಣ ಗಾಣಗೇರ ಸೇರಿದಂತೆ ನೂರಾರು ಜನರಿದ್ದರು. ಮೆರವಣಿಗೆಯಲ್ಲಿ ಮುಕ್ತಿ ಮಂದಿರದ ಆನೆ ಎಲ್ಲರ ಗಮನ ಸೆಳೆಯಿತು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ