ಹಾವೇರಿ : ಜಿಲ್ಲಾದ್ಯಂತ ಮಳೆರಾಯನ ಅಬ್ಬರ ಮಿತಿ ಮೀರಿದೆ. ಜಿಲ್ಲೆಯ ನಾಲ್ಕು ನದಿಗಳು ಭೋರ್ಗರೆವ ಮೂಲಕ ಜಲ ಪ್ರಹಾರ ನದಿ ಪಾತ್ರದ ಗ್ರಾಮಗಳನ್ನು ಜಲಾವೃತಗೊಳಿಸಿದೆ. ಮನೆ, ಮಠ ಕಳೆದುಕೊಂಡ ಗ್ರಾಮಸ್ಥರಿಗೆ ಕಾಳಜಿ ಕೇಂದ್ರದಲ್ಲಿ ಆಶ್ರಯ ಕಲ್ಪಿಸುವ ಮೂಲಕ ಜಿಲ್ಲಾಡಳಿತ ತ್ವರಿತವಾಗಿ ಸ್ಪಂದಿಸಿದೆ. ಶನಿವಾರ ಸಹ ಶಾಲಾ-ಕಾಲೇಜ್ಗೆ ರಜೆ ವಿಸ್ತರಿಸಲಾಗಿದೆ.
ಜಿಲ್ಲಾಡಳಿತ ಮೂಲಗಳ ಪ್ರಕಾರ ಜಿಲ್ಲಾದ್ಯಂತ ಶುಕ್ರವಾರ ಬೆಳಗಿನವರೆಗೆ ಒಟ್ಟು 591.7 ಮಿ.ಮೀ. ಮಳೆ ಪ್ರಮಾಣ ದಾಖಲಾಗಿದೆ. ಈ ಪೈಕಿ ಹಾನಗಲ್ಲ ತಾಲೂಕಿನಲ್ಲಿ ಅತಿ ಹೆಚ್ಚು (169.2), ಹಿರೇಕೇರೂರಲ್ಲಿ ಅತಿ ಕಡಿಮೆ (36.2) ಮಿ.ಮೀ. ಮಳೆಯಾಗಿದೆ.
990 ಮನೆ ಕುಸಿತ
ಜಿಲ್ಲಾದ್ಯಂತ ಒಂದೇ ರಾತ್ರಿಗೆ 990 ಮನೆಗಳು ಭಾಗಶಃ ಕುಸಿದಿವೆ. ಈ ಪೈಕಿ ಸವಣೂರಲ್ಲಿ ಅತಿ ಹೆಚ್ಚು (255), ಅತಿ ಕಡಿಮೆ ಹಿರೇಕೇರೂರಲ್ಲಿ (56). ಇನ್ನುಳಿದಂತೆ ರಾಣೇಬೆನ್ನೂರಲ್ಲಿ (227), ಬ್ಯಾಡಗಿ (205), ಶಿಗ್ಗಾವ (96), ಹಾವೇರಿ (91) ಮತ್ತು ಹಾನಗಲ್ಲ (60) ಮನೆ ಗಳು ಭಾಗಶಃ ಕುಸಿದಿವೆ.
77 ಕಾಳಜಿ ಕೇಂದ್ರ
ಸತತ ಸುರಿಯುತ್ತಿರುವ ಮಳೆಯಿಂದಾಗಿ ಜಿಲ್ಲಾದ್ಯಂತ ಕನಿಷ್ಠ 25 ಕ್ಕೂ ಹೆಚ್ಚು ಹಳ್ಳಿಗಳು ಜನ ಸಂಪರ್ಕ ಕಳೆದುಕೊಂಡಿದ್ದರೆ, ಏಳೆಂಟು ಹಳ್ಳಿಗಳು ಜಲಾವೃತಗೊಂಡಿವೆ. ಇರಲು ಮನೆ ಇಲ್ಲದಿರುವ ಹಿನ್ನೆಲೆಯಲ್ಲಿ ಸುರಕ್ಷಿತ ಸ್ಥಳದಲ್ಲಿ ಕಾಳಜಿ ಕೇಂದ್ರ ಆರಂಭಿಸಿ ಅಲ್ಲಿಗೆ ಸಂತ್ರಸ್ತರನ್ನು ಸ್ಥಳಾಂತರಗೊಳಿಸಲಾಗಿದೆ.
ಈವರೆಗೆ ಒಟ್ಟು 77 ಪರಿಹಾರ ಕೇಂದ್ರಗಳನ್ನು ತೆರೆಯಲಾಗಿದ್ದು, ಅತಿ ಹೆಚ್ಚು ಹಾವೇರಿ ತಾಲೂಕಿನಲ್ಲಿ (53) ಕೆಂದ್ರಗಳನ್ನು ತೆರೆಯಲಾಗಿದೆ. ಹಿರೇಕೇರೂರಲ್ಲಿ ಯಾರೂ ಪರಿಹಾರ ಕೇಂದ್ರಕ್ಕೆ ಬರಲು ಒಪ್ಪದಿರುವ ಕಾರಣಕ್ಕೆ ಅಲ್ಲಿ ಕೇಂದ್ರ ತೆರೆದಿಲ್ಲ ಎನ್ನುವುದನ್ನು ಹೊರತುಪಡಿಸಿ ಇನ್ನುಳಿದಂತೆ ಹಾನಗಲ್ಲ (13), ರಾಣೇಬೆನ್ನೂರ (2), ಬ್ಯಾಡಗಿ (1), ಸವಣೂರ ಮತ್ತು ಶಿಗ್ಗಾವ ತಲಾ (4) ಪರಿಹಾರ ಕೇಂದ್ರಗಳನ್ನು ಆರಂಭಿಸಲಾಗಿದೆ.
5344 ಸಂತ್ರಸ್ತರು
ಜಿಲ್ಲಾದ್ಯಂತ ಆರಂಭಿಸಲಾಗಿರುವ 77 ಪರಿಹಾರ ಕೇಂದ್ರಗಳಲ್ಲಿ ಒಟ್ಟು 5,344 ಸಂತ್ರಸ್ತರಿಗೆ ಜಿಲ್ಲಾಡಳಿತ ಆಶ್ರಯ ಜತೆಗೆ ಊಟೋಪಚಾರದ ವ್ಯವಸ್ಥೆ ಕಲ್ಪಿಸಿದೆ. ಸಂತ್ರಸ್ಥರಿಂದ ಈ ವರೆಗೆ ಯಾವುದೇ ಮೂಲ ಸೌಕರ್ಯಗಳಿಲ್ಲ ಎನ್ನುವ ದೂರು ಬಂದಿಲ್ಲ. ಹಾವೇರಿ ತಾಲೂಕಿನಲ್ಲಿ (3369), ರಾಣೇಬೆನ್ನೂರಲ್ಲಿ (330), ಬ್ಯಾಡಗಿ (32), ಸವಣೂರ (79), ಶಿಗ್ಗಾವ (190) ಹಾಗೂ ಹಾನಗಲ್ಲ (1354) ಸಂತಸ್ಥರು ಆಶ್ರಯ ಪಡೆದಿದ್ದಾರೆ.
4 ಡೋಣಿ
ಜಿಲ್ಲಾದ್ಯಂತ ಜಲಾವೃತಗೊಂಡ ಗ್ರಾಮಗಳ ಗ್ರಾಮಸ್ಥರ ರಕ್ಷಣೆ ಹಾಗೂ ಅಲ್ಲಿಯ ಸ್ಥಿತಿಗತಿ ತಿಳಿದುಕೊಳ್ಳುವ ಜತೆಗೆ ಸಂತ್ರಸ್ತರನ್ನು ಸ್ಥಳಾಂತರಗೊಳಿಸುವ ನಿಟ್ಟಿನಲ್ಲಿ ನಾಲ್ಕು ಯಾಂತ್ರಿಕೃತ ದೋಣಿಗಳ ಸಹಾಯವನ್ನು ಜಿಲ್ಲಾಡಳಿತ ಪಡೆದುಕೊಂಡಿದೆ.
ಶನಿವಾರ ರಜೆ
ಸತತ ಸುರಿಯುತ್ತಿರುವ ಮಳೆಯ ಕಾರಣಕ್ಕೆ ಶುಕ್ರವಾರದ ವರೆಗೆ ನೀಡಲಾಗಿದ್ದ ಶಾಲಾ- ಕಾಲೇಜ್ಗಳ ರಜೆಯನ್ನು ಶನಿವಾರಕ್ಕೂ ವಿಸ್ತರಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಹಾನಗಲ್ಲ 169.2
ಹಾವೇರಿ 74.0
ರಾಣೇಬೆನ್ನೂರ 59.4
ಬ್ಯಾಡಗಿ 77.6
ಸವಣೂರ 74.8
ಶಿಗ್ಗಾವ 100.0
ಹಿರೇಕೇರೂರ 36.2
ಜಿಲ್ಲಾಡಳಿತ ಮೂಲಗಳ ಪ್ರಕಾರ ಜಿಲ್ಲಾದ್ಯಂತ ಶುಕ್ರವಾರ ಬೆಳಗಿನವರೆಗೆ ಒಟ್ಟು 591.7 ಮಿ.ಮೀ. ಮಳೆ ಪ್ರಮಾಣ ದಾಖಲಾಗಿದೆ. ಈ ಪೈಕಿ ಹಾನಗಲ್ಲ ತಾಲೂಕಿನಲ್ಲಿ ಅತಿ ಹೆಚ್ಚು (169.2), ಹಿರೇಕೇರೂರಲ್ಲಿ ಅತಿ ಕಡಿಮೆ (36.2) ಮಿ.ಮೀ. ಮಳೆಯಾಗಿದೆ.
990 ಮನೆ ಕುಸಿತ
ಜಿಲ್ಲಾದ್ಯಂತ ಒಂದೇ ರಾತ್ರಿಗೆ 990 ಮನೆಗಳು ಭಾಗಶಃ ಕುಸಿದಿವೆ. ಈ ಪೈಕಿ ಸವಣೂರಲ್ಲಿ ಅತಿ ಹೆಚ್ಚು (255), ಅತಿ ಕಡಿಮೆ ಹಿರೇಕೇರೂರಲ್ಲಿ (56). ಇನ್ನುಳಿದಂತೆ ರಾಣೇಬೆನ್ನೂರಲ್ಲಿ (227), ಬ್ಯಾಡಗಿ (205), ಶಿಗ್ಗಾವ (96), ಹಾವೇರಿ (91) ಮತ್ತು ಹಾನಗಲ್ಲ (60) ಮನೆ ಗಳು ಭಾಗಶಃ ಕುಸಿದಿವೆ.
77 ಕಾಳಜಿ ಕೇಂದ್ರ
ಸತತ ಸುರಿಯುತ್ತಿರುವ ಮಳೆಯಿಂದಾಗಿ ಜಿಲ್ಲಾದ್ಯಂತ ಕನಿಷ್ಠ 25 ಕ್ಕೂ ಹೆಚ್ಚು ಹಳ್ಳಿಗಳು ಜನ ಸಂಪರ್ಕ ಕಳೆದುಕೊಂಡಿದ್ದರೆ, ಏಳೆಂಟು ಹಳ್ಳಿಗಳು ಜಲಾವೃತಗೊಂಡಿವೆ. ಇರಲು ಮನೆ ಇಲ್ಲದಿರುವ ಹಿನ್ನೆಲೆಯಲ್ಲಿ ಸುರಕ್ಷಿತ ಸ್ಥಳದಲ್ಲಿ ಕಾಳಜಿ ಕೇಂದ್ರ ಆರಂಭಿಸಿ ಅಲ್ಲಿಗೆ ಸಂತ್ರಸ್ತರನ್ನು ಸ್ಥಳಾಂತರಗೊಳಿಸಲಾಗಿದೆ.
ಈವರೆಗೆ ಒಟ್ಟು 77 ಪರಿಹಾರ ಕೇಂದ್ರಗಳನ್ನು ತೆರೆಯಲಾಗಿದ್ದು, ಅತಿ ಹೆಚ್ಚು ಹಾವೇರಿ ತಾಲೂಕಿನಲ್ಲಿ (53) ಕೆಂದ್ರಗಳನ್ನು ತೆರೆಯಲಾಗಿದೆ. ಹಿರೇಕೇರೂರಲ್ಲಿ ಯಾರೂ ಪರಿಹಾರ ಕೇಂದ್ರಕ್ಕೆ ಬರಲು ಒಪ್ಪದಿರುವ ಕಾರಣಕ್ಕೆ ಅಲ್ಲಿ ಕೇಂದ್ರ ತೆರೆದಿಲ್ಲ ಎನ್ನುವುದನ್ನು ಹೊರತುಪಡಿಸಿ ಇನ್ನುಳಿದಂತೆ ಹಾನಗಲ್ಲ (13), ರಾಣೇಬೆನ್ನೂರ (2), ಬ್ಯಾಡಗಿ (1), ಸವಣೂರ ಮತ್ತು ಶಿಗ್ಗಾವ ತಲಾ (4) ಪರಿಹಾರ ಕೇಂದ್ರಗಳನ್ನು ಆರಂಭಿಸಲಾಗಿದೆ.
5344 ಸಂತ್ರಸ್ತರು
ಜಿಲ್ಲಾದ್ಯಂತ ಆರಂಭಿಸಲಾಗಿರುವ 77 ಪರಿಹಾರ ಕೇಂದ್ರಗಳಲ್ಲಿ ಒಟ್ಟು 5,344 ಸಂತ್ರಸ್ತರಿಗೆ ಜಿಲ್ಲಾಡಳಿತ ಆಶ್ರಯ ಜತೆಗೆ ಊಟೋಪಚಾರದ ವ್ಯವಸ್ಥೆ ಕಲ್ಪಿಸಿದೆ. ಸಂತ್ರಸ್ಥರಿಂದ ಈ ವರೆಗೆ ಯಾವುದೇ ಮೂಲ ಸೌಕರ್ಯಗಳಿಲ್ಲ ಎನ್ನುವ ದೂರು ಬಂದಿಲ್ಲ. ಹಾವೇರಿ ತಾಲೂಕಿನಲ್ಲಿ (3369), ರಾಣೇಬೆನ್ನೂರಲ್ಲಿ (330), ಬ್ಯಾಡಗಿ (32), ಸವಣೂರ (79), ಶಿಗ್ಗಾವ (190) ಹಾಗೂ ಹಾನಗಲ್ಲ (1354) ಸಂತಸ್ಥರು ಆಶ್ರಯ ಪಡೆದಿದ್ದಾರೆ.
4 ಡೋಣಿ
ಜಿಲ್ಲಾದ್ಯಂತ ಜಲಾವೃತಗೊಂಡ ಗ್ರಾಮಗಳ ಗ್ರಾಮಸ್ಥರ ರಕ್ಷಣೆ ಹಾಗೂ ಅಲ್ಲಿಯ ಸ್ಥಿತಿಗತಿ ತಿಳಿದುಕೊಳ್ಳುವ ಜತೆಗೆ ಸಂತ್ರಸ್ತರನ್ನು ಸ್ಥಳಾಂತರಗೊಳಿಸುವ ನಿಟ್ಟಿನಲ್ಲಿ ನಾಲ್ಕು ಯಾಂತ್ರಿಕೃತ ದೋಣಿಗಳ ಸಹಾಯವನ್ನು ಜಿಲ್ಲಾಡಳಿತ ಪಡೆದುಕೊಂಡಿದೆ.
ಶನಿವಾರ ರಜೆ
ಸತತ ಸುರಿಯುತ್ತಿರುವ ಮಳೆಯ ಕಾರಣಕ್ಕೆ ಶುಕ್ರವಾರದ ವರೆಗೆ ನೀಡಲಾಗಿದ್ದ ಶಾಲಾ- ಕಾಲೇಜ್ಗಳ ರಜೆಯನ್ನು ಶನಿವಾರಕ್ಕೂ ವಿಸ್ತರಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಹಾನಗಲ್ಲ 169.2
ಹಾವೇರಿ 74.0
ರಾಣೇಬೆನ್ನೂರ 59.4
ಬ್ಯಾಡಗಿ 77.6
ಸವಣೂರ 74.8
ಶಿಗ್ಗಾವ 100.0
ಹಿರೇಕೇರೂರ 36.2