ಆ್ಯಪ್ನಗರ

ಸುಕ್ಷೇತ್ರ ಮಂತ್ರವಾಡಿ ಸಂಭ್ರಮದ ರಥೋತ್ಸವ

ಸವಣೂರು: ಸುಕ್ಷೇತ್ರ ಮಂತ್ರವಾಡಿಯ ಲಿಂ.ಕೆಂಜಡೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳವರ 41 ನೇ ಪುಣ್ಯರಾಧನೆ ಹಾಗೂ ಜಾತ್ರಾ ಮಹೋತ್ಸವವು ಸೋಮವಾರ ಸಂಭ್ರಮದಿಂದ ಜರುಗಿತು.

Vijaya Karnataka 5 Feb 2019, 5:00 am
ಸವಣೂರು: ಸುಕ್ಷೇತ್ರ ಮಂತ್ರವಾಡಿಯ ಲಿಂ.ಕೆಂಜಡೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳವರ 41 ನೇ ಪುಣ್ಯರಾಧನೆ ಹಾಗೂ ಜಾತ್ರಾ ಮಹೋತ್ಸವವು ಸೋಮವಾರ ಸಂಭ್ರಮದಿಂದ ಜರುಗಿತು.
Vijaya Karnataka Web excitement mantra celebration chariot
ಸುಕ್ಷೇತ್ರ ಮಂತ್ರವಾಡಿ ಸಂಭ್ರಮದ ರಥೋತ್ಸವ


ಶ್ರೀ ಸಿದ್ದರಾಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳ ನೇತೃತ್ವದಲ್ಲಿ ಸೋಮವಾರ ಬೆಳಗ್ಗೆ 6 ಗಂಟೆಗೆ ಶ್ರೀ ಗುರುಗಳ ಗದ್ದುಗೆಗೆ ರುದ್ರಾಭಿಷೇಕ ಹಾಗೂ ಶ್ರೀ ಲಿಂ. ಕೆಂಜಡೇಶ್ವರ ಪುಣ್ಯತಿಥಿ ಮತ್ತು ಅನ್ನದಾಸೋಹ ಕಾರ್ಯಕ್ರಮಗಳು ನಡೆದವು.

ಮಧ್ಯಾಹ್ನ 3 ಘಂಟೆಗೆ ಶ್ರೀ ಮಠದಿಂದ ರೇವಣಸಿದ್ದೇಶ್ವರ ಬೆಳ್ಳಿಮೂರ್ತಿ ಹಾಗೂ ಪಲ್ಲಕ್ಕಿ ಉತ್ಸವವು ವಾದ್ಯ ವೈಭವಗಳೊಂದಿಗೆ ಬೆಟ್ಟವನ್ನು ತಲುಪಿತು.

ನಂತರ ಸಂಜೆ 5 ಗಂಟೆಗೆ ಕೆಂಜಡೇಶ್ವರ ಬೆಟ್ಟದಲ್ಲಿ ಸೇರಿದ್ದ ಸಾವಿರಾರು ಭಕ್ತರು, ಗ್ರಾಮಸ್ಥರ ಮಧ್ಯ ರಥೋತ್ಸವ ಮತ್ತು ಸಿದ್ದರಾಮೇಶ್ವರ ಮಹಾಸ್ವಾಮಿಗಳ ಅಡ್ಡಪಲ್ಲಕ್ಕಿ ಮಹೋತ್ಸವವು ಜರುಗಿತು. ರಾತ್ರಿ ಜರುಗಿದ ಶಿವಾನುಭವ ಗೋಷ್ಠಿ ಕಾರ್ಯಕ್ರಮವು ಜರುಗಿತು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ