ಆ್ಯಪ್ನಗರ

ಬಂಕಾಪುರ ಮಹಾಗಣಪತಿಗೆ ವಿದಾಯ

ಬಂಕಾಪುರ: ಪಟ್ಟಣದ ಬಸ್‌ ನಿಲ್ದಾಣ ಬಳಿ ನೆಹರೂ ಉದ್ಯಾನದಲ್ಲಿಪ್ರತಿಷ್ಠಾಪಿಸಲಾಗಿದ್ದ ಹಿಂದು ಮಹಾಗಣಪತಿ ವಿರ್ಸಜನಾ ಅದ್ಧೂರಿ ಮೆರವಣಿಗೆ ಭಾನುವಾರ ಪಟ್ಟಣದಲ್ಲಿನಡೆಯಿತು. ಮೆರವಣಿಗೆ ಉದ್ದಕ್ಕೂ ರಾರಾಜಿಸಿದ ಬೃಹತ್‌ ಗಾತ್ರದ ಕೇಸರಿ ಬಾವುಟುಗಳು ಗಮನ ಸೆಳೆದವು.

Vijaya Karnataka 23 Sep 2019, 5:00 am
ಬಂಕಾಪುರ: ಪಟ್ಟಣದ ಬಸ್‌ ನಿಲ್ದಾಣ ಬಳಿ ನೆಹರೂ ಉದ್ಯಾನದಲ್ಲಿಪ್ರತಿಷ್ಠಾಪಿಸಲಾಗಿದ್ದ ಹಿಂದು ಮಹಾಗಣಪತಿ ವಿರ್ಸಜನಾ ಅದ್ಧೂರಿ ಮೆರವಣಿಗೆ ಭಾನುವಾರ ಪಟ್ಟಣದಲ್ಲಿನಡೆಯಿತು. ಮೆರವಣಿಗೆ ಉದ್ದಕ್ಕೂ ರಾರಾಜಿಸಿದ ಬೃಹತ್‌ ಗಾತ್ರದ ಕೇಸರಿ ಬಾವುಟುಗಳು ಗಮನ ಸೆಳೆದವು.
Vijaya Karnataka Web 22SGN-4A_23


ಬೆಳಿಗ್ಗೆ 11ಕ್ಕೆ ಅರಳಲೆಮಠದ ರೇವಣಸಿದ್ದೇಶ್ವರ ಶ್ರೀಗಳ ನೇತೃತ್ವದಲ್ಲಿಕೆಂಡದಮಠದ ಬಸಯ್ಯ ಮತ್ತು ಸಿದ್ದಯ್ಯ ಶ್ರೀಗಳಿಂದ ಚಾಲನೆ ಪಡೆದುಕೊಂಡ ಮೆರವಣಿಗೆ, ಆಸಾರ ರಸ್ತೆ ಮೂಲಕ ಹೊರಟು ಪಟ್ಟಣದ ವಿವಿಧ ಗಲ್ಲಿಗಳ ಹಾಯ್ದು ಸೋಮವಾರ ಬೆಳಗ್ಗೆ ಗುಡ್ಡದಚನ್ನಾಪುರ ಕೆರೆಯಲ್ಲಿವಿಸರ್ಜನೆಗೊಳ್ಳಲಿದೆ.

ಡಿಜೆ ಹಾಡಿಗೆ ಬೃಹತ್‌ ಗಾತ್ರದ ಕೇಸರಿ ಬಾವುಟುಗಳನ್ನು ಹಿಡಿದು ವಿವಿಧ ಜಿಲ್ಲೆಗಳಿಂದ ಆಗಮಿಸಿ, ಕುಣಿದು ಕುಪ್ಪಳಿಸಿದ ಸಾವಿರಾರು ಸಂಖ್ಯೆಯ ಯುವಕರಿಗೆ ದಾರಿ ಉದ್ದಕ್ಕೂ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಸ್ವಯಂ ಪ್ರೇರಿತರಾಗಿ ನೀರು, ಊಟ, ಉಪಹಾರದ ವ್ಯವಸ್ಥೆ ಕಲ್ಪಿಸಿದ್ದರು. ತಲೆಗೆ ಕೇಸರಿ ಟೋಪಿ, ಹಣೆಗೆ ಕುಂಕುಮ ತಿಲಕವಿಟ್ಟು ಡಿಜೆ ತಾಳಕ್ಕೆ ಹೆಜ್ಜೆ ಹಾಕುತ್ತಲೆ ಮುಂದೆ ಸಾಗುತ್ತಿದ್ದ ಯುವಕರ ದೃಶ್ಯ ಗಮನ ಸೆಳೆಯಿತು.

ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಕಾಂಗ್ರೆಸ್‌ ಮುಖಂಡ ಎಸ್‌.ಎಸ್‌.ಶಿವಳ್ಳಿ, ಆರ್‌ಎಸ್‌ಎಸ್‌ ಮುಖಂಡ ಗಂಗಾಧರ ಮಾಮ್ಲೆಪಟ್ಟಣಶೆಟ್ಟರ, ಜಿಪಂ.ಸದಸ್ಯ ಮಲತೇಶ ಸೊಪ್ಪಿನ, ಈರಪ್ಪ ಬಳಿಗಾರ, ಎಂ.ಎನ್‌.ಹೊನಕೇರಿ, ಅಶೋಕ ಪಟ್ಟಣಶೆಟ್ಟರ, ಹೊನ್ನಪ್ಪ ಹೂಗಾರ, ಮಹೇಶ ಸಾಲಿಮಠ, ಶಿವಾನಂದ ದೇವಸೂರ, ವಿಶ್ವನಾಥ ಹರವಿ, ಮಂಜುನಾಥ ರೆಡ್ಡಿ, ಉಮೇಶ ಅಂಗಡಿ, ಯಲ್ಲಪ್ಪ ನರಗುಂದ, ಸೋಮಶೇಖರ ಗೌರಿಮಠ, ಸತೀಶ ನಾಗನೂರ, ಚಂದ್ರು ಕರಿಗೌಡ್ರ, ರಾಮನಗೌಡ ಪಾಟೀಲ, ಎಸ್‌.ಕ.ಎಸಕ್ರಿ, ಸತೀಶ ವನಹಳ್ಳಿ, ಶಿವಾನಂದ ಮ್ಯಾಗೇರಿ, ಪ್ರಲ್ಹಾದ ರಾಯ್ಕರ, ಬಸವಣ್ಣೆಪ್ಪ ಯಲಿಗಾರ, ಲಿಂಗರಾಜ ಹಳವಳ್ಳಿ, ಗುಡ್ಡಪ್ಪ ಮತ್ತೂರು, ರಾಜು ಸುಲಾಖೆ, ಎನ್‌.ವಿ.ಪದ್ಮಾ, ಲಲಿತಾ ಹಂಜಗಿ, ವಿಜಯಲಕ್ಷಿತ್ರ್ಮೕ ದೇವಸೂರು ಸೇರಿದಂತೆ ಸಾವಿರಾರು ಜನರು ಮೆರವಣಿಗೆಯಲ್ಲಿಪಾಲ್ಗೊಂಡಿದ್ದರು.

ಬಂದೋಬಸ್‌್ತ: ಎಸ್ಪಿ ದೇವರಾಜ, ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ನೇತೃತ್ವದಲ್ಲಿ7 ಡಿವೈಎಸ್ಪಿ, 23 ಸಿಪಿಐ, 44 ಪಿಎಸ್‌ಐ, 81 ಎಎಸ್‌ಐ, 841 ಪೊಲೀಸ್‌, 105 ಗೃಹ ರಕ್ಷಕ ದಳ, 16 ಜಿಲ್ಲಾಮೀಸಲು ಪಡೆ ತುಕಡಿ, 4 ಕೆಎಸ್‌ಆರ್‌ಪಿ ತುಕಡಿಗಳು ಜತೆಗೆ 5 ಪೊಲೀಸ್‌ ವಿಕ್ಷಣಾಗೋಪುರ, 3 ಸಂಚಾರಿ ವಿಕ್ಷಣಾಗೋಪುರ, ಎರಡು ದ್ರೋಣಕ್ಯಾಮರಾ, 3 ದಿವ್ಯ ದೃಷ್ಟಿಕ್ಯಾಮರಾ, 6 ಹೈವೆ ಪೆಟ್ರೋಲ್‌ ವಾಹನ, 6 ಇಂಟರ್‌ಸೆಪ್ಟರ ವಾಹನ, 4 ಕ್ಯಾಮರಾಮನ್‌, 40ಕ್ಕೂ ಅಧಿಕ ಸಿಸಿ ಕ್ಯಾಮರಾ ಸೇರಿದಂತೆ ಬಾರಿ ಬಂದೋಬಸ್‌್ತಗೆ ನಿಯೋಜಿಸಲಾಗಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ