ಆ್ಯಪ್ನಗರ

ರೈತ ಹುತಾತ್ಮ ದಿನ: ಪೂರ್ವಭಾವಿ ಸಭೆ

ಹಾನಗಲ್ಲ : ಹಾವೇರಿಯಲ್ಲಿ ನಡೆಯುವ ರೈತ ಹುತಾತ್ಮ ದಿನಾಚರಣೆಗೆ ತಾಲೂಕಿನ ರೈತ ಸಮೂಹ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಕುರಿತು ಇಲ್ಲಿನ ಪ್ರವಾಸಿ ಮಂದಿರದಲ್ಲಿ ರೈತ ಸಂಘದ ತಾಲೂಕು ಘಟಕದ ಪದಾಧಿಕಾರಿಗಳ ಪೂರ್ವಭಾವಿ ಸಭೆ ನಡೆಯಿತು.

Vijaya Karnataka 10 Jun 2019, 5:00 am
ಹಾನಗಲ್ಲ : ಹಾವೇರಿಯಲ್ಲಿ ನಡೆಯುವ ರೈತ ಹುತಾತ್ಮ ದಿನಾಚರಣೆಗೆ ತಾಲೂಕಿನ ರೈತ ಸಮೂಹ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಕುರಿತು ಇಲ್ಲಿನ ಪ್ರವಾಸಿ ಮಂದಿರದಲ್ಲಿ ರೈತ ಸಂಘದ ತಾಲೂಕು ಘಟಕದ ಪದಾಧಿಕಾರಿಗಳ ಪೂರ್ವಭಾವಿ ಸಭೆ ನಡೆಯಿತು.
Vijaya Karnataka Web HVR-09HGL3
ಹಾನಗಲ್ಲನಲ್ಲಿ ರವಿವಾರ ರೈತ ಸಂಘದ ಪ್ರಮುಖರ ಸಭೆಯಲ್ಲಿ ತಾಲೂಕು ಅಧ್ಯಕ್ಷ ಮರಿಗೌಡ ಪಾಟೀಲ ಮಾತನಾಡಿದರು.


ಸಭೆಯ ನೇತೃತ್ವ ವಹಿಸಿದ್ದ ರೈತ ಸಂಘದ ತಾಲೂಕು ಘಟಕದ ಅಧ್ಯಕ್ಷ ಮರಿಗೌಡ ಪಾಟೀಲ ಮಾತನಾಡಿ, ರೈತ ಹುತಾತ್ಮ ದಿನವನ್ನು ರೈತ ಪರ ಹೋರಾಟದ ದಿನಾಚರಣೆಯಾಗಿ ಕಳೆದ 2 ವರ್ಷಗಳಿಂದ ಮಾಡುತ್ತಿದ್ದೇವೆ. ಜೂನ್‌ 10 ರಂದು ಹಾವೇರಿ ಸಿದ್ಧಪ್ಪ ವೃತ್ತದಲ್ಲಿ ನಡೆಯುವ ದಿನಾಚರಣೆಯಲ್ಲಿ ತಾಲೂಕಿನ 34 ಗ್ರಾಮ ಘಟಕಗಳ ಸದಸ್ಯರು ಪಾಲ್ಗೊಳ್ಳಬೇಕು. ಈ ನಿಟ್ಟಿನಲ್ಲಿ ಸಂಘದ ಪದಾಧಿಕಾರಿಗಳು ಜವಾಭ್ದಾರಿ ವಹಿಸಬೇಕು ಎಂದರು.

ತಾಲೂಕಿನ ಬಹುದಿನಗಳ ಬೇಡಿಕೆಯಾದ ಬಾಳಂಬೀಡ ಏತ ನೀರಾವರಿ, ಶಿರಗೋಡ ಏತ ನೀರಾವರಿ ಯೋಜನೆ ಅನುಷ್ಠಾನಕ್ಕೆ ತರಬೇಕು. ಕಳೆದ ವರ್ಷ ಧರ್ಮಾ ಜಲಾಶಯದ ನೀರಿಗಾಗಿ ಅಕ್ಕಿಆಲೂರಿನಲ್ಲಿ ನಡೆಸಿದ್ದ ಪ್ರೆತಿಭಟನೆಯಲ್ಲಿ ಭಾಗಿಯಾಗಿದ್ದ ರೈತರ ಮೇಲೆ ಹಾಕಲಾಗಿರುವ ಆಧಾರ ರಹಿತ ಪ್ರಕರಣವನ್ನು ಹಿಂಪಡೆಯಬೇಕು. ಕಂದಾಯ ಇಲಾಖೆ ಪ್ರಕಾರ ಕೆಲವು ರೈತರ ಜಮೀನುಗಳು ದಾಖಲಾತಿಗಳು ಸರಿಯಾಗಿವೆ. ಆದರೆ ಸರ್ವೆ ಇಲಾಖೆ ಪ್ರಕಾರ ಬ ಖರಾಬ್‌ ಅಂತಾ ಇರುವುದರಿಂದ ರೈತರಿಗೆ ಆಗುತ್ತಿರುವ ಹಲವಾರು ತೊಂದರೆಗಳನ್ನು ಸರಿಪಡಿಸಲು ರೈತ ದಿನಾಚರಣೆಯಲ್ಲಿ ಹಕ್ಕೊತ್ತಾಯ ಮಾಡಲಾಗುವುದು ಎಂದರು.

ಸಭೆಯಲ್ಲಿ ಜಿಲ್ಲಾ ಘಟಕದ ಉಪಾಧ್ಯಕ್ಷ ಅಡಿವೆಪ್ಪ ಆಲದಕಟ್ಟಿ, ಮಾಲತೇಶ ಪರಪ್ಪನವರ, ಮಹಲಿಂಗಪ್ಪ ಅಕ್ಕಿವಳ್ಳಿ, ವಾಸುದೇವ ಕಮಾಟಿ, ರುದ್ರಗೌಡ್ರ ಕಾಡನಗೌಡ್ರ ಮತ್ತಿತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ