ಆ್ಯಪ್ನಗರ

ಕೆರೆ ತುಂಬಿದರೆ ರೈತರಿಗೆ ಅನುಕೂಲ

ಗುತ್ತಲ: ಗುತ್ತಲದ ಐತಿಹಾಸಿಕ ದೊಡ್ಡ ಕೆರೆ ಮನ ಮೋಹಕವಾಗಿದೆ. ಈ ಕೆರೆ ತುಂಬಿರುವುದು ರೈತರಿಗೆ ವರದಾನವಾಗಿದೆ ಎಂದು ಮಾಜಿ ಸಚಿವ ಬಸವರಾಜ ಶಿವಣ್ಣನವರ ಹೇಳಿದರು.

Vijaya Karnataka 20 Oct 2019, 5:00 am
ಗುತ್ತಲ: ಗುತ್ತಲದ ಐತಿಹಾಸಿಕ ದೊಡ್ಡ ಕೆರೆ ಮನ ಮೋಹಕವಾಗಿದೆ. ಈ ಕೆರೆ ತುಂಬಿರುವುದು ರೈತರಿಗೆ ವರದಾನವಾಗಿದೆ ಎಂದು ಮಾಜಿ ಸಚಿವ ಬಸವರಾಜ ಶಿವಣ್ಣನವರ ಹೇಳಿದರು.
Vijaya Karnataka Web farmers benefit by filling the lake
ಕೆರೆ ತುಂಬಿದರೆ ರೈತರಿಗೆ ಅನುಕೂಲ


ದೊಡ್ಡ ಕೆರೆಗೆ ಶುಕ್ರವಾರ ಬಾಗಿನ ಅರ್ಪಿಸಿ ಮಾತನಾಡಿ, ಸಿದ್ದರಾಮಯ್ಯನವರ ಸರಕಾರ ಇದ್ದಾಗ ಈ ಕೆರೆಗೆ ತುಂಗಾ ಮೇಲ್ದಂಡೆ ಯೋಜನೆ ಕಾಲುವೆಯ ಹೆಚ್ಚುವರಿ ನೀರನ್ನು ಕಾಲುವೆಗಳ ಮೂಲಕ ಹರಿಸುವ ಯೋಜನೆ ಮಾಡಿದ್ದರ ಫಲವಾಗಿ ಪ್ರತಿ ವರ್ಷ ಈ ಕೆರೆ ತುಂಬುತ್ತಿದೆ. ಮಳೆಯ ಪ್ರಮಾಣ ವಾಡಿಕೆಗಿಂತ ಕಡಿಮೆಯಾದರೂ ಈ ಕೆರೆ ಸದಾ ತುಂಬುವಂತಹ ಕಾಂಗ್ರೆಸ್‌ನ ಮಹತ್ವಕಾಂಕ್ಷಿ ಯೋಜನೆ ಇದಾಗಿದೆ ಎಂದರು. ಈ ಕೆರೆ ತುಂಬುತ್ತಿರುವ ಕಾರಣ ಅಂತರ್ಜಲ ಮಟ್ಟ ಹೆಚ್ಚಿಗೆ ಆಗಿ ಗುತ್ತಲ ಪಟ್ಟಣದ ಅನೇಕ ಬೋರ್‌ವೆಲ್‌ಗಳು ತುಂಬಿ ತುಳುಕುತ್ತವೆ ಎಂದರು.

ಜಿಲ್ಲಾಬಂಜಾರ ಸಂಘದ ಅಧ್ಯಕ್ಷ ಈರಪ್ಪ ಲಮಾಣಿ ಮಾತನಾಡಿ, ಈ ಕೆರೆ ತುಂಬಲಿಕ್ಕೆ ಮುಖ್ಯ ಕಾರಣ ಬಸಾಪುರ ಗ್ರಾಮದ ರೈತರ ತ್ಯಾಗ. ರೈತರ ಜಮೀನುಗಳನ್ನು ಸ್ವಾಧೀನ ಪಡಿಸಿಕೊಂಡು ಕಾಲುವೆ ನಿರ್ಮಾಣ ಮಾಡಿ ನೀರನ್ನು ಕೆರೆಗೆ ತುಂಬಿಸಲಾಗುತ್ತಿದೆ ಎಂದರು.

ಭೂಮಿ ಕಳೆದುಕೊಂಡ ರೈತರಿಗೆ ತುಂಗಾ ಮೇಲ್ದಂಡೆ ಯೋಜನೆಯಿಂದ ಪರಿಹಾರ ಇನ್ನೂ ಸಿಕ್ಕಿಲ್ಲ. ಈ ಬಗ್ಗೆ ಮುಂದಿನ ದಿನಗಳಲ್ಲಿಹೋರಾಟ ಮಾಡಲಾಗುವುದೆಂದರು.

ಪಪಂ ಸದಸ್ಯರಾದ ನಾಗರಾಜ ಎರಿಮನಿ, ಲಿಂಗೇಶ ಬೆನ್ನೂರ, ರಮೇಶ ಮಠದ, ಪ್ರೇಮಾ ಸಾಲಗೇರಿ, ಅನ್ನಪೂರ್ಣ ಬಂಡಿವಡ್ಡರ, ಕೋಟೆಪ್ಪ ಬನ್ನಿಮಟ್ಟಿ, ಲಿಂಗರಾಜ ನಾಯಕ, ಗುಡ್ಡಪ್ಪ ಗೊರವರ, ಪ್ರಕಾಶ ಪಠಾಡೆ, ತಾ.ಪಂ ಮಾಜಿ ಸದಸ್ಯ ಬಸಣ್ಣ ಕಂಬಳಿ, ವಿಎಸ್‌ಎಸ್‌ ಬ್ಯಾಂಕ್‌ ಅಧ್ಯಕ್ಷ ಅಜ್ಜಪ್ಪ ತರ್ಲಿ, ಶಿವಣ್ಣ ಬಂಡಿವಡ್ಡರ, ಯುವ ಕಾಂಗ್ರೆಸ್‌ನ ಹನುಮಂತ ಅಗಸಿಬಾಗಿಲದ, ಶಿವನಗರದ ಲಕ್ಷತ್ರ್ಮಣ ಲಮಾಣಿ, ರಮೇಶ ಲಮಾಣಿ, ರಾಮಪ್ಪ ಲಮಾಣಿ ಸೇರಿದಂತೆ ಅನೇಕರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ