ಆ್ಯಪ್ನಗರ

ಕೃಷಿ ಕಚೇರಿ ಮುಂದೆ ರೈತರ ಪ್ರತಿಭಟನೆ

ಬ್ಯಾಡಗಿ: ಸಮಯಕ್ಕೆ ಸರಿಯಾಗಿ ಕರ್ತವ್ಯಕ್ಕೆ ಹಾಜರಾಗದ ಕೃಷಿ ಇಲಾಖೆ ಅಧಿಕಾರಿಗಳು ಹಾಗೂ ಕಚೇರಿ ಸಿಬ್ಬಂದಿ ವಿರುದ್ಧ ರೈತರು ಹಾಗೂ ಸಾರ್ವಜನಿಕರು ಕೃಷಿ ಇಲಾಖೆ ಕಚೇರಿ ಮುಂದೆ ಕುಳಿತು ಪ್ರತಿಭಟಿಸಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ಶನಿವಾರ ನಡೆಯಿತು.

Vijaya Karnataka 16 Jun 2019, 5:00 am
Vijaya Karnataka Web HVR-15BYD3A
ಬ್ಯಾಡಗಿ: ಸಮಯಕ್ಕೆ ಸರಿಯಾಗಿ ಕರ್ತವ್ಯಕ್ಕೆ ಹಾಜರಾಗದ ಕೃಷಿ ಇಲಾಖೆ ಅಧಿಕಾರಿಗಳು ಹಾಗೂ ಕಚೇರಿ ಸಿಬ್ಬಂದಿ ವಿರುದ್ಧ ರೈತರು ಹಾಗೂ ಸಾರ್ವಜನಿಕರು ಕೃಷಿ ಇಲಾಖೆ ಕಚೇರಿ ಮುಂದೆ ಕುಳಿತು ಪ್ರತಿಭಟಿಸಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ಶನಿವಾರ ನಡೆಯಿತು.

ಜೂನ್‌ ತಿಂಗಳು ಕಳೆಯುತ್ತ ಬಂದರೂ ವಾಡಿಕೆಯಂತೆ ಮುಂಗಾರು ಸಮರ್ಪಕವಾಗಿ ಆಗಿಲ್ಲ, ಬಿದ್ದ ಅಲ್ಪ ಸ್ವಲ್ಪ ಮಳೆಗೆ ಭೂಮಿಯನ್ನು ಹದ ಮಾಡಿಕೊಂಡು ಕೃಷಿ ಚಟುವಟಿಕೆಯಲ್ಲಿ ತೊಡಗಲು ಮುಂದಾಗಿರುವ ರೈತರಿಗೆ ಅಧಿಕಾರಿಗಳು ಇಲ್ಲ ಸಲ್ಲದ ಸಬೂಬು ಹೇಳಿ ಕರ್ತವ್ಯಕ್ಕೆ ಸಮಯಕ್ಕೆ ಸರಿಯಾಗಿ ಹಾಜರಾಗದೇ ಕಚೇರಿಗೆ ಅಲೆದಾಡುವಂತೆ ಮಾಡುತ್ತಿರುವುದು ರೈತರನ್ನು ಮತ್ತಷ್ಟು ಹೈರಾಣು ಮಾಡಿದೆ.

ಕಾದು ಕಾದು ಸುಸ್ತಾದ ರೈತರು: ಬಿತ್ತನೆ ಬೀಜ ಸೇರಿದಂತೆ ಕೃಷಿ ಪರಿಕರಗಳು ಹಾಗೂ ಇನ್ನಿತರ ಕಾರ‍್ಯಗಳಿಗೆ ಬೆಳಿಗ್ಗೆ 10.20 ಕ್ಕೆ ಕಚೇರಿಗೆ ಆಗಮಿಸಿದ್ದ ರೈತರಿಗೆ ಕಚೇರಿಯಲ್ಲಿ ಡಿ.ದರ್ಜೆ ನೌಕರರನ್ನು ಬಿಟ್ಟರೆ ಯಾರೊಬ್ಬರು ಇರದೇ ಇರುವುದು ಶಾಕ್‌ ನೀಡಿತ್ತು. ಈಗ ಬರುತ್ತಾರೆ ಆಗ ಬರುತ್ತಾರೆ ಎಂದು ಕಾದು ಕುಳಿತ ರೈತರಿಗೆ 11.40 ಗಂಟೆಯಾದರೂ ಕೃಷಿ ಅಧಿಕಾರಿ ಸೇರಿದಂತೆ ಯಾವೊಬ್ಬ ಅಧಿಕಾರಿಯು ಕಚೇರಿಗೆ ಬರದೇ ಇರುವುದು ಮತ್ತಷ್ಟು ಕೆರಳುವಂತೆ ಮಾಡಿತು. ದೂರವಾಣಿ ಮೂಲಕ ಕರೆ ಮಾಡಿ ವಿಚಾರಿಸಿದಾಗಲೂ ಒಬ್ಬೊಬ್ಬ ಅಧಿಕಾರಿಯೂ ಒಂದೊಂದು ಕಥೆ ಹೇಳಿದ್ದು ಮತ್ತು ಹಾರಿಕೆ ಉತ್ತರ ನೀಡಿದ್ದು ಕಾದು ಕಾದು ಸುಸ್ತಾಗಿದ್ದ ರೈತರ ಆಕ್ರೋಶ ಕಟ್ಟೆ ಒಡೆದಿತ್ತು.

ಸೂಕ್ತ ಕ್ರಮ ಕೈಗೊಳ್ಳಿ: ಈ ಸಂದರ್ಭದಲ್ಲಿ ಕೃಷಿ ಅಧಿಕಾರಿಗಳ ವಿರುದ್ಧ ಘೋಷಣೆಗಳನ್ನು ಕೂಗುತ್ತ ಕಚೇರಿ ಎದುರು ರೈತರು ಪ್ರತಿಭಟಿಸಿದರು.

ನಂತರ ಮಾತನಾಡಿದ ರೈತ ರಹಮತ ಹಿತ್ತಲಮನಿ, ಮುಂಗಾರು ಆರಂಭವಾದ ಕಾರಣ ಈಗಾಗಲೇ ಗೋವಿನಜೊಳ ಬಿತ್ತನೆ ಮಾಡಿದ್ದು ಉಳಿದ 3 ಎಕರೆಯಲ್ಲಿ ಶೇಂಗಾ ಬಿತ್ತಲು ಬೀಜಕ್ಕಾಗಿ ಕಳೆದ ಒಂದು ವಾರದಿಂದ ಅಲೆದಾಡುತ್ತಿದ್ದೇನೆ. ಆದರೆ ಕಳೆದ ಮೂರು ದಿನಗಳಿಂದ ಕಚೇರಿಗೆ 10.30 ಕ್ಕೆ ಬರುತ್ತಿದ್ದೇನೆ ಯಾವೊಬ್ಬ ಅಧಿಕಾರಿಯು ಸಮ ುಕ್ಕೆ ಸರಿಯಾಗಿ ಹಾಜರಾಗುತ್ತಿಲ್ಲ. ಇಂತಹ ಬೇಜವಾಬ್ದಾರಿ ಅಧಿಕಾರಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.

ಮಲ್ಲಿಕಾರ್ಜುನ ಬಳ್ಳಾರಿ ಮಾತನಾಡಿ, ಕೃಷಿ ಇಲಾಖೆ ಹಾಗೂ ಅಧಿಕಾರಿಗಳು ತಾಲೂ ಕಿನ ಪಾಲಿಗೆ ರೈತರ ಇದ್ದೂ ಇಲ್ಲ ದಂತಾಗಿದೆ. ಕೂಡಲೇ ಜಿಲ್ಲಾ ಕೃಷಿ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ಮಾಡುವುದಾಗಿ ಎಚ್ಚರಿಸಿದರು.

ಮಾತಿನ ಚಕಮಕಿ: ಆಕ್ರೋಶದ ಕಟ್ಟೆ ಒಡೆದ ನಂತರ ಮತ್ತು ಸುಮಾರು ಬಾರಿ ದೂರವಾಣಿ ಮೂಲಕ ಕರೆ ಮಾಡಿದ ನಂತರ ಕಚೇರಿಗೆ ಆಗಮಿಸಿದ ಕೃಷಿ ಅಧಿಕಾರಿ ಅಮೃತೇಶ, ರೈತರ ಪ್ರಶ್ನೆಗಳಿಗೆ ಸಮರ್ಪಕವಾಗಿ ಉತ್ತರಿಸದೆ ತಡವಾಗಿ ಬಂದಿದ್ದಕ್ಕೆ ರೈತರು ಹಾಗೂ ಅಧಿಕಾರಿ ನಡುವೆ ಮಾತಿನ ಚಕಮಕಿ ಉಂಟಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ