ಆ್ಯಪ್ನಗರ

ಗೋದಾಮಿಗೆ ಬೆಂಕಿ: ಲಕ್ಷಾಂತರ ರೂ. ನಷ್ಟ

ರಾಣೇಬೆನ್ನೂರ: ಆಟೋಮೊಬೈಲ್ಸ್‌ಗೆ ಸೇರಿದ ಗೋದಾಮಿಗೆ ಆಕಸ್ಮಿಕ ಬೆಂಕಿ ತಗುಲಿ ಲಕ್ಷಾಂತರ ರೂಪಾಯಿ ಮೌಲ್ಯದ ಆಸ್ತಿಪಾಸ್ತಿಗೆ ಹಾನಿ ಸಂಭವಿಸಿದ ಘಟನೆ ಗುರುವಾರ ಮಧ್ಯಾಹ್ನ ಇಲ್ಲಿನ ಮೃತ್ಯಂಜಯನಗರದ ಹಳೆ ಎಲ್‌ಐಸಿ ಕಚೇರಿ ನಡೆದಿದೆ.

Vijaya Karnataka 31 Jan 2020, 5:00 am
ರಾಣೇಬೆನ್ನೂರ: ಆಟೋಮೊಬೈಲ್ಸ್‌ಗೆ ಸೇರಿದ ಗೋದಾಮಿಗೆ ಆಕಸ್ಮಿಕ ಬೆಂಕಿ ತಗುಲಿ ಲಕ್ಷಾಂತರ ರೂಪಾಯಿ ಮೌಲ್ಯದ ಆಸ್ತಿಪಾಸ್ತಿಗೆ ಹಾನಿ ಸಂಭವಿಸಿದ ಘಟನೆ ಗುರುವಾರ ಮಧ್ಯಾಹ್ನ ಇಲ್ಲಿನ ಮೃತ್ಯಂಜಯನಗರದ ಹಳೆ ಎಲ್‌ಐಸಿ ಕಚೇರಿ ನಡೆದಿದೆ.
Vijaya Karnataka Web fire to warehouse rs loss
ಗೋದಾಮಿಗೆ ಬೆಂಕಿ: ಲಕ್ಷಾಂತರ ರೂ. ನಷ್ಟ


ವಿಷಯ ತಿಳಿಯುತ್ತಿದ್ದಂತೆ ಸ್ಥಳೀಯ ಅಗ್ನಿಶಾಮಕದಳದ ಮೂರು ಹಾಗೂ ಬ್ಯಾಡಗಿಯ ಒಂದು ಸೇರಿದಂತೆ ಒಟ್ಟು ನಾಲ್ಕು ವಾಹನಗಳು ಆಗಮಿಸಿ ಮೂರೂವರೆ ತಾಸು ಕಾರ್ಯಾಚರಣೆ ಮಾಡಿ ಬೆಂಕಿ ನಂದಿಸುವಲ್ಲಿಯಶಸ್ವಿಯಾದವು. ಘಟನೆಯಲ್ಲಿಗೋದಾಮಿನಲ್ಲಿಇಟ್ಟಿದ್ದ ಆಟೋಮೋಬೈಲ್‌ ಬಿಡಿಬಾಗಗಳು ಸಂಪೂರ್ಣ ಸುಟ್ಟು ಭಸ್ಮವಾಗಿವೆ.

ಚಂದ್ರಶೇಖರ ಅಂದರಗಟ್ಟಿ ಎಂಬುವರಿಗೆ ಸೇರಿದ ಪೂಜಾ ಆಟೋಮೊಬೈಲ್ಸ್‌ ಗೋದಾಮು ಇದಾಗಿದ್ದು, ಈ ಅವಘಡದಲ್ಲಿಸುಮಾರು 30 ಲಕ್ಷ ರೂಪಾಯಿ ಮೌಲ್ಯದ ಆಟೋಮೊಬೈಲ್‌ ಬಿಡಿಭಾಗಗಳ ಸುಟ್ಟು ಕರಲಾಗಿವೆ.

ಬೆಂಕಿ ಆಕಸ್ಮಿಕದ ವಿಷಯ ಹರಡುತ್ತಿದ್ದಂತೆ ಸಾರ್ವಜನಿಕರು ಗುಂಪು ಗುಂಪಾಗಿ ಬಂದು ವೀಕ್ಷಣೆ ಮಾಡುವ ಜತೆಯಲ್ಲಿಅವಘಡದ ದೃಶ್ಯವನ್ನು ಮೊಬೈಲ್‌ನಲ್ಲಿಸೆರೆ ಹಿಡಿಯಲು ಮುಗಿಬಿದ್ದರು. ಈ ಸಮಯದಲ್ಲಿಸ್ಥಳದಲ್ಲಿಪೊಲೀಸರು ಇಲ್ಲದ ಕಾಣದ ಅಗ್ನಿಶಾಮಕ ಸಿಬ್ಬಂದಿ ಜನರಿಂದ ಸಾಕಷ್ಟು ಕಿರಿಕಿರಿ ಅನುಭವಿಸುವಂತಾಗಿತ್ತು. ನಂತರ ಪೊಲೀಸರು ಸ್ಥಳಕ್ಕೆ ಆಗಮಿಸಿದ ಮೇಲೆ ಪರಿಸ್ಥಿತಿ ಹತೋಟಿಗೆ ಬಂದಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ