ಆ್ಯಪ್ನಗರ

ಬೆಂಕಿ ದುರಂತ: ಮಳಿಗೆ, ಅಂಗಡಿ ಭಸ್ಮ

ಹಾನಗಲ್ಲ : ತಾಲೂಕಿನ ಮಾಸನಕಟ್ಟಿ ಗ್ರಾಮದಲ್ಲಿ ಮಂಗಳವಾರ ಬೆಳಗ್ಗೆ ಬೆಂಕಿ ಅವಘಡ ಸಂಭವಿಸಿದ್ದು, ಬಸ್‌ ನಿಲ್ದಾಣ ಭಾಗದ ಕಿರಾಣಿ ಅಂಗಡಿ ಸಂಪೂರ್ಣವಾಗಿ ಭಸ್ಮಗೊಂಡಿದೆ.

Vijaya Karnataka 6 Mar 2019, 5:00 am
ಹಾನಗಲ್ಲ : ತಾಲೂಕಿನ ಮಾಸನಕಟ್ಟಿ ಗ್ರಾಮದಲ್ಲಿ ಮಂಗಳವಾರ ಬೆಳಗ್ಗೆ ಬೆಂಕಿ ಅವಘಡ ಸಂಭವಿಸಿದ್ದು, ಬಸ್‌ ನಿಲ್ದಾಣ ಭಾಗದ ಕಿರಾಣಿ ಅಂಗಡಿ ಸಂಪೂರ್ಣವಾಗಿ ಭಸ್ಮಗೊಂಡಿದೆ.
Vijaya Karnataka Web HVR-05HGL3
ಹಾನಗಲ್ಲ ತಾಲೂಕಿನ ಮಾಸನಕಟ್ಟಿ ಗ್ರಾಮದಲ್ಲಿ ಮಂಗಳವಾರ ನಸುಕಿನಲ್ಲಿ ಕಿರಾಣಿ ಅಂಗಡಿಗೆ ಬೆಂಕಿ ಬಿದ್ದು, ದಿನಸಿ ಸಾಮಗ್ರಿ ಭಸ್ಮಗೊಂಡಿವೆ,


ಗ್ರಾಮದ ಚಿಕ್ಕಯ್ಯ ಹಿರೇಮಠ ಎಂಬುವವರಿಗೆ ಸೇರಿದ ಕಿರಾಣಿ ಅಂಗಡಿಗೆ ಆಕಸ್ಮಿಕವಾಗಿ ಬೆಂಕಿ ಬಿದ್ದು, ಸುಮಾರು 3 ಲಕ್ಷ ರೂ. ಹಾನಿ ಸಂಭವಿಸಿದೆ. ಅಂಗಡಿಯಲ್ಲಿದ್ದ ದಿನಸಿ ಆಹಾರ ಸಾಮಗ್ರಿಗಳು, ವಿವಿಧ ಕಾಸ್ಮೆಟಿಕ್ಸ್‌ ಮತ್ತು ಒಂದು ಫ್ರಿಡ್ಜ್‌, ಜರಾಕ್ಸ್‌ ಮೆಷಿನ್‌, ಕಂಪ್ಯೂಟರ್‌, ಕ್ಯಾಮೆರಾ ಮತ್ತಿತರ ಬೆಲೆಬಾಳುವ ವಸ್ತುಗಳು ಬೆಂದು ಹೋಗಿವೆ.

ನಸುಕಿನ ವೇಳೆ ನಡೆದ ಬೆಂಕಿ ದುರಂತವನ್ನು ತಪ್ಪಿಸಲು ಹಾನಗಲ್ಲಿನಿಂದ ಅಗ್ನಿಶಾಮಕ ವಾಹನ ಆಗಮಿಸಿತ್ತು. ಸ್ಥಳೀಯರು ಬೆಂಕಿ ನಂದಿಸುವಲ್ಲಿ ಸಹಕರಿಸಿದರು. ಅಗ್ನಿ ಅನಾಹುತಕ್ಕೆ ಕಾರಣ ತಿಳಿದು ಬಂದಿಲ್ಲ, ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ನಂದಿನಿಗೆ ಬೆಂಕಿ:

ಹಾನಗಲ್ಲ ಕೇಂದ್ರ ಬಸ್‌ ನಿಲ್ದಾಣದಲ್ಲಿನ ನಂದಿನಿ ಮಿಲ್ಕ್‌ ಅಂಗಡಿಯಲ್ಲಿ ಮಂಗಳವಾರ ಬೆಳಗಿನ ಜಾವ 2 ಗಂಟೆ ಸುಮಾರಿಗೆ ಬೆಂಕಿ ಹೊತ್ತಿಕೊಂಡು ಬೆಲೆಬಾಳುವ ನಂದಿನಿ ಪ್ರಾಡೆಕ್ಟ್ಗಳು ಹಾನಿಗೊಂಡಿವೆ, ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಸಫಲರಾಗಿದ್ದಾರೆ. ವಿದ್ಯುತ್‌ ಶಾರ್ಟ್‌ ಸಕ್ರ್ಯೂಟ್‌ ಬೆಂಕಿ ದುರಂತಕ್ಕೆ ಕಾರಣ ಎಂದು ಶಂಕಿಸಲಾಗಿದೆ, ಸುಮಾರು 2 ಲಕ್ಷ ಹಾನಿಗೊಂಡ ಬಗ್ಗೆ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ