ಆ್ಯಪ್ನಗರ

ಪೊಲೀಸ್‌ ವೇತನ ತಾರತಮ್ಯ ಸರಿಪಡಿಸಿ

ಹಾವೇರಿ: ಪೊಲೀಸರ ವೇತನ ತಾರತಮ್ಯವನ್ನು ಕೂಡಲೇ ಸರಿಪಡಿಸಬೇಕೆಂದು ಅಖಿಲ ಕರ್ನಾಟಕ ಪೊಲೀಸ್‌ ಮಹಾಸಭಾದ ಅಧ್ಯಕ್ಷ ಶಶಿಧರ ವೇಣುಗೋಪಾಲ ರಾಜ್ಯ ಸರಕಾರಕ್ಕೆ ಆಗ್ರಹಿಸಿದರು.

Vijaya Karnataka 30 Dec 2019, 5:00 am
ಹಾವೇರಿ: ಪೊಲೀಸರ ವೇತನ ತಾರತಮ್ಯವನ್ನು ಕೂಡಲೇ ಸರಿಪಡಿಸಬೇಕೆಂದು ಅಖಿಲ ಕರ್ನಾಟಕ ಪೊಲೀಸ್‌ ಮಹಾಸಭಾದ ಅಧ್ಯಕ್ಷ ಶಶಿಧರ ವೇಣುಗೋಪಾಲ ರಾಜ್ಯ ಸರಕಾರಕ್ಕೆ ಆಗ್ರಹಿಸಿದರು.
Vijaya Karnataka Web fix police wage discrimination
ಪೊಲೀಸ್‌ ವೇತನ ತಾರತಮ್ಯ ಸರಿಪಡಿಸಿ


ನಗರದ ಪ್ರವಾಸಿ ಮಂದಿರದಲ್ಲಿಭಾನುವಾರ ಸುದ್ದಿಗೋಷ್ಠಿಯಲ್ಲಿಮಾತನಾಡಿದ ಅವರು, ರಾಘವೇಂದ್ರ ಔರಾದಕರ ವರದಿಯಂತೆ ಜಾರಿ ಮಾಡದೆ ಪೊಲೀಸರ ಸೇವಾ ವೇತನ ತಾರತಮ್ಯ ಹೆಚ್ಚಿಸಿದೆ. ಕಳೆದ ಏಂಟು ವರ್ಷದಿಂದ ಸೇವೆ ಸಲ್ಲಿಸುತ್ತಿರುವ ಕಾನ್‌ಸ್ಟೇಬಲ್‌ಗೂ ಈ ವರ್ಷ ಕರ್ತವ್ಯಕ್ಕೆ ಹಾಜರಾದವರಿಗೂ ಒಂದೇ ಮೂಲ ವೇತನ ನಿಗದಿ ಮಾಡುವ ಮೂಲಕ ರಾಜ್ಯ ಸರಕಾರ ಸೇವಾ ಹಿರಿತನದಲ್ಲಿತಾರತಮ್ಯ ಮಾಡುತ್ತಿದೆ ಎಂದು ಆರೋಪಿಸಿದರು.

ಬೇರೆ ರಾಜ್ಯಗಳಿಗೆ ಹೋಲಿಕೆ ಮಾಡಿದರೆ, ರಾಜ್ಯ ಪೊಲೀಸರ ವೇತನ ಬಹಳ ಕಡಿಮೆ ಇದೆ. ವೇತನದಲ್ಲಿದೇಶದಲ್ಲಿಯೇ ತೆಲಂಗಾಣ ಮೊದಲ ಸ್ಥಾನದಲ್ಲಿದೆ. ಕರ್ನಾಟಕ ಏಂಟನೇ ಸ್ಥಾನದಲ್ಲಿದೆ. ತೆಲಂಗಾಣ ಮಾದರಿಯಲ್ಲಿಪೊಲೀಸ್‌ ಸಿಬ್ಬಂದಿಗಳಿಗೆ ವೇತನ ನೀಡಬೇಕು ಎಂದು ಒತ್ತಾಯಿಸಿದರು.

ಸಂವಿಧಾನದ ಅಡಿಯಲ್ಲಿಕೆಲಸ ನಿರ್ವಹಿಸಬೇಕಾದ ಐಎಎಸ್‌ ಹಾಗೂ ಐಪಿಎಸ್‌ ಅಧಿಕಾರಿಗಳು ರಾಜಕಾರಣಿಗಳ ಮಾತು ಕೇಳಿ ಇಲಾಖೆಯನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆಂದು ಬೇಸರ ವ್ಯಕ್ತಪಡಿಸಿದರು.

2016ರಲ್ಲಿಅಂದಿನ ಉಪಮುಖ್ಯಮಂತ್ರಿ ಪರಮೇಶ್ವರ ಅವರು ಪೊಲೀಸರ ವೇತನವನ್ನು ಶೇ.30 ರಿಂದ ಶೇ.35 ನಷ್ಟು ಹೆಚ್ಚಿಸುವುದಾಗಿ ಭರವಸೆ ನೀಡಿದ್ದರು. ಆದರೆ ಇಂದಿಗೂ ಅದು ಜಾರಿಗೆ ಬಂದಿಲ್ಲ. ಅಲ್ಲದೆ ಪೊಲೀಸರು ಸ್ವತಂತ್ರವಾಗಿ ಕೆಲಸ ಮಾಡಲು ಇಂದಿನ ರಾಜಕಾರಣಿಗಳು ಬಿಡುತ್ತಿಲ್ಲ. ಬದಲಾಗಿ ನಮ್ಮನ್ನು ಬಹಳ ಕೆಟ್ಟ ರೀತಿಯಲ್ಲಿನಡೆಸಿಕೊಳ್ಳುತ್ತಾರೆ ಎಂದರು.

ಔರಾದಕರ ವರದಿಯ ಶಿಫಾರಸ್ಸಿನಂತೆ ಪೊಲೀಸರ ವೇತನ ಜಾರಿಯಾಗಿಲ್ಲ. ಸೂಕ್ತ ಪರಿಶೀಲನೆ ನಡೆಸಿ ತಿಂಗಳೊಳಗೆ ವೇತನ ತಾರತಮ್ಯ ಸರಿಪಡಿಸಬೇಕು ಇಲ್ಲದಿದ್ದರೆ 3 ಹಂತದಲ್ಲಿಹೋರಾಟ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಈ ಸುದ್ದಿಗೋಷ್ಠಿಯಲ್ಲಿರೈತ ಮುಖಂಡರಾದ ಹನುಮಂತಪ್ಪ ಕಬ್ಬೂರ, ದೀಪಕ ಗಂಟಿಸಿದ್ದಪ್ಪನವರ, ಹನುಮಂತಪ್ಪ ಕೆರೂರ, ನಿಂಗಪ್ಪ ಕಡೂರ, ಎಚ್‌.ಎಂ. ತಾಳಿಕೋಟಿ, ಬೀರಪ್ಪ ಮುದಕ್ಕಣ್ಣವರ ಇದ್ದರು.

ವರ್ಗಾವಣೆಯಲ್ಲೂನಿಯಮ ಉಲ್ಲಂಘನೆ
ಪೊಲೀಸರ ವರ್ಗಾವಣೆ ಪಾರದರ್ಶಕವಾಗಿರಬೇಕು. ಯಾವುದೇ ರಾಜಕೀಯ ವ್ಯಕ್ತಿಯ ಹಸ್ತಕ್ಷೇಪವಿರಬಾರದು ಎಂದು ಸುಪ್ರೀಂ ಕೋರ್ಟ ಆದೇಶ ನೀಡಿದೆ. ಆದರೆ ಇಂದು ಆದೇಶವನ್ನು ಗಾಳಿಗೆ ತೂರಿ ವರ್ಗಾವಣೆಯನ್ನು ದಂಧೆಯಾಗಿ ರಾಜಕಾರಣಿಗಳು ಮಾಡಿಕೊಂಡಿದ್ದಾರೆ. ನಾವು ಮೊದಲಿನಿಂದಲೂ ರಾಜಕೀಯ ಪ್ರೇರಿತ ಪೊಲೀಸ್‌ ವರ್ಗಾವಣೆಯನ್ನು ಖಂಡಿಸುತ್ತಾ ಬಂದಿದ್ದೇವೆ. ಕೂಡಲೇ ರಾಜ್ಯ ಸರಕಾರ ಪೊಲೀಸ್‌ ವೇತನ ತಾರತಮ್ಯ ಸರಿಪಡಿಸಬೇಕು ಎಂದು ವೇಣುಗೋಪಾಲ ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ