ರಾಜು ನದಾಫ
ಹಾವೇರಿ : ಈ ಬಾರಿಯ ಸ್ವಾತಂತ್ರ್ಯೋತ್ಸವಕ್ಕೆ ಫಕ್ಕೀರನಂದಿಹಳ್ಳಿ ಜನ ಕಪ್ಪುಪಟ್ಟಿ ಕಟ್ಕೊಂಡು ಶಾಲೆಗೆ ಬೀಗ ಹಾಕೋ ನಿರ್ಧಾರ ಕೈಗೊಂಡಿದ್ದಾರೆ. ದೇಶಪ್ರೇಮ ಮೆರೆಯುವ ರಾಷ್ಟ್ರೀಯ ಹಬ್ಬವನ್ನು ಕರಾಳ ದಿನವನ್ನಾಗಿ ಆಚರಿಸಲು ಮನಸ್ಸಿಲ್ಲದಿದ್ದರೂ ಶಾಲೆ ದುರಸ್ತಿಗೆ ಇಂಥ ಕಠಿಣ ನಿರ್ಣಯ ಕೈಗೊಂಡಿದ್ದಾರೆ.
ಮಳೆಗಾಲ ಬಂತೆಂದರೆ ಮಕ್ಕಳನ್ನು ಹೇಗೆ ಶಾಲೆಗೆ ಕಳಿಸಬೇಕೆನ್ನುವ ಚಿಂತೆ ಈ ಗ್ರಾಮಸ್ಥರನ್ನು ಕಾಡುತ್ತಿದೆ. ಮಳೆಗಾಲದಲ್ಲಿ ಶಾಲೆಯ ಗೋಡೆಗಳು ಮಕ್ಕಳ ಮೇಲೆ ಬಿದ್ದರೆ ಗತಿ ಏನು? ಅನ್ನೋ ಆತಂಕದಲ್ಲೇ ದಿನ ನೂಕುವಂತಾಗಿದೆ.
ಎಲ್ಲಿದೆ ಫಕ್ಕೀರನಂದಿಹಳ್ಳಿ?
ಜಿಲ್ಲೆಯ ಸವಣೂರ ತಾಲೂಕಿನ ಫಕ್ಕೀರನಂದಿಹಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪರಿಸ್ಥಿತಿ ದೇವರಿಗೇ ಪ್ರೀತಿ. 1 ರಿಂದ 8 ರ ವರೆಗೆ ಒಟ್ಟು ಸುಮಾರು 135-140 ಮಕ್ಕಳು ಇಲ್ಲಿ ಕಲಿಯುತ್ತಿದ್ದಾರೆ. 3 ಹೆಂಚು, 3 ಕಾಂಕ್ರೀಟ್ ಕೊಠಡಿಗಳ ಜತೆಗೆ ಸ್ಟಾಫ್ರೂಮ್, ಲ್ಯಾಬ್ ಮತ್ತು ಬಿಸಿ ಊಟದ ಕೊಠಡಿ ಸೇರಿದಂತೆ ಅಂದಾಜು 10 ಕೊಠಡಿಗಳ ಈ ಶಾಲೆ ಗುಣಮಟ್ಟದ ಶಿಕ್ಷಣಕ್ಕೆ ಪ್ರಸಿದ್ಧಿಯಾಗಿದೆ. ಪಕ್ಕದ ಸವೂರು ಮತ್ತು ಬೂದಿಹಾಳದ ಮಕ್ಕಳು ಸಹ ಈ ಶಾಲೆಗೆ ಬರುತ್ತಾರೆ.
ಮಳೆಗಾಲದಲ್ಲೂ ಹೆಂಚಿನ ಕೊಠಡಿಗಳು ಸೋರುವುದಿಲ್ಲ ಎನ್ನುವುದು ಸಮಾಧಾನ ತಂದರೆ. ಕಾಂಕ್ರೀಟ್ ಕೊಠಡಿಗಳು ಮಾತ್ರ ಸ್ಪ್ಯಾಬ್ ಬಿರುಕು ಬಿಟ್ಟ ಪರಿಣಾಮ ನಿರಂತರವಾಗಿ ತಟ ತಟ ಹನಿಗಳು ಮಕ್ಕಳ ಮೇಲೆ ಬೀಳುವುದು ತಪ್ಪಿಲ್ಲ. ಇದರಿಂದ ಮಕ್ಕಳು ಅನಾರೋಗ್ಯಕ್ಕೆ ಈಡಾಗುತ್ತಿದ್ದರೆ.
ಕರಾಳ ದಿನ ಯಾಕೆ?
ಈ ಸಮಸ್ಯೆ ಇಂದು ನಿನ್ನೆಯದಲ್ಲ. ಕಳೆದೊಂದು ವರ್ಷದಿಂದ ಶಾಲಾ ಗೋಡೆಗಳು ಬಿರುಕು ಬಿಡುವ ಜತೆಗೆ ಈ ಬಾರಿಯ ಮುಂಗಾರು ಮಳೆಗೆ ಮೇಲ್ಚಾವಣಿ ಸಹ ಸೋರಲಾರಂಭಿಸಿದೆ. ಈ ಬಗ್ಗೆ ಮುಖ್ಯೋಪಾಧ್ಯಾಯರು ಸವಣೂರ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗೆ ಪತ್ರ ಬರೆದು ಗಮನ ಸೆಳೆದಿದ್ದಾರೆ. ಎಸ್ಡಿಎಂಸಿ ಅಧ್ಯಕ್ಷ-ಉಪಾಧ್ಯಕ್ಷ ಸೇರಿದಂತೆ ಸದಸ್ಯರೂ ಸಹ ದುರಸ್ತಿ ಕೈಗೊಳ್ಳುವಂತೆ ಗ್ರಾಪಂ/ ತಾಪಂ ಮತ್ತು ಜಿ.ಪಂಗೂ ಒತ್ತಾಯಿಸಿದ್ದಾರೆ. ಇಲಾಖೆ ಮಾತ್ರ ಈವರೆಗೂ ಸ್ಪಂದಿಸಿಲ್ಲ ಎನ್ನುತ್ತಾರೆ ಗ್ರಾಮಸ್ಥರು.
ಶಾಲಾ ಕೊಠಡಿಗಳ ದುರಸ್ತಿಗೆ ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆಯೊಳಗೆ ಕ್ರಮ ಕೈಗೊಳ್ಳದಿದ್ದರೆ ಶಾಲೆಗೆ ಬೀಗ ಹಾಕಿ, ಕಪ್ಪುಪಟ್ಟಿ ಕಟ್ಟಿಕೊಂಡು ಪ್ರತಿಭಟನೆ ಕೈಗೊಳ್ಳುವುದಾಗಿ ಊರಿನ ಮುಖಂಡರು, ಎಸ್ಡಿಎಂಸಿ ಮಂಡಳಿ ಜತೆಗೆ ರೈತ ಸಂಘದ ಗ್ರಾಮೀಣ ಘಟಕದ ಅಧ್ಯಕ್ಷರು, ಕಾರ್ಯಕರ್ತರು ಹಾಗೂ ಸಂಘ-ಸಂಸ್ಥೆಗಳ ಮುಖಂಡರು ಎಚ್ಚರಿಕೆ ನೀಡಿದ್ದಾರೆ.
ಶಾಲೆಗೆ ಕಳಿಸೋದಿಲ್ಲ
ಸೋರುವ ಕೊಠಡಿಗಳಲ್ಲಿ ಮಕ್ಕಳಿಗೆ ರಕ್ಷಣೆ ನೀಡುವುದು ಸಹ ಶಿಕ್ಷಕರ ನಿತ್ಯದ ಗೋಳಾಗಿದೆ. ಜತೆಗೆ ಬಿರುಕು ಬಿಟ್ಟಿರುವ ಗೋಡೆಗಳು ಭಯ ಹುಟ್ಟಿಸುತ್ತಿವೆ. ಇಂಥ ಶಾಲೆಗೆ ನಮ್ಮ ಮಕ್ಕಳನ್ನು ಕಳಿಸುವುದಿಲ್ಲ ಎಂದು ಪೋಷಕರು ಪಟ್ಟು ಹಿಡಿದಿದ್ದಾರೆ.
ಒಟ್ಟಾರೆ ಬಡ ಹಾಗೂ ಕೃಷಿ ಕಾರ್ಮಿಕರ ಮಕ್ಕಳೇ ಸರಕಾರಿ ಶಾಲೆಯಲ್ಲಿ ಕಲಿಯುತ್ತಿರುವ ಕಾರಣಕ್ಕೆ ಕಾಲ ಕಾಲಕ್ಕೆ ಎಸ್ಡಿಎಂಸಿ ಅಧ್ಯಕ್ಷರು ಮತ್ತು ಆಡಳಿತ ಮಂಡಳಿ ಮೇಲೆ ಪಾಲಕರು ಹರಿ ಹಾಯುವುದು ತಪ್ಪಿಲ್ಲ. ಈಗಲಾದರೂ ಬಿಇಒ ಮತ್ತು ಡಿಡಿಪಿಐ ಇತ್ತ ಗಮನ ಹರಿಸಬೇಕೆನ್ನುವುದು ಗ್ರಾಮದ ಮುಂಖಡರ ಒತ್ತಾಸೆಯಾಗಿದೆ.
ಹಾವೇರಿ : ಈ ಬಾರಿಯ ಸ್ವಾತಂತ್ರ್ಯೋತ್ಸವಕ್ಕೆ ಫಕ್ಕೀರನಂದಿಹಳ್ಳಿ ಜನ ಕಪ್ಪುಪಟ್ಟಿ ಕಟ್ಕೊಂಡು ಶಾಲೆಗೆ ಬೀಗ ಹಾಕೋ ನಿರ್ಧಾರ ಕೈಗೊಂಡಿದ್ದಾರೆ. ದೇಶಪ್ರೇಮ ಮೆರೆಯುವ ರಾಷ್ಟ್ರೀಯ ಹಬ್ಬವನ್ನು ಕರಾಳ ದಿನವನ್ನಾಗಿ ಆಚರಿಸಲು ಮನಸ್ಸಿಲ್ಲದಿದ್ದರೂ ಶಾಲೆ ದುರಸ್ತಿಗೆ ಇಂಥ ಕಠಿಣ ನಿರ್ಣಯ ಕೈಗೊಂಡಿದ್ದಾರೆ.
ಮಳೆಗಾಲ ಬಂತೆಂದರೆ ಮಕ್ಕಳನ್ನು ಹೇಗೆ ಶಾಲೆಗೆ ಕಳಿಸಬೇಕೆನ್ನುವ ಚಿಂತೆ ಈ ಗ್ರಾಮಸ್ಥರನ್ನು ಕಾಡುತ್ತಿದೆ. ಮಳೆಗಾಲದಲ್ಲಿ ಶಾಲೆಯ ಗೋಡೆಗಳು ಮಕ್ಕಳ ಮೇಲೆ ಬಿದ್ದರೆ ಗತಿ ಏನು? ಅನ್ನೋ ಆತಂಕದಲ್ಲೇ ದಿನ ನೂಕುವಂತಾಗಿದೆ.
ಎಲ್ಲಿದೆ ಫಕ್ಕೀರನಂದಿಹಳ್ಳಿ?
ಜಿಲ್ಲೆಯ ಸವಣೂರ ತಾಲೂಕಿನ ಫಕ್ಕೀರನಂದಿಹಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪರಿಸ್ಥಿತಿ ದೇವರಿಗೇ ಪ್ರೀತಿ. 1 ರಿಂದ 8 ರ ವರೆಗೆ ಒಟ್ಟು ಸುಮಾರು 135-140 ಮಕ್ಕಳು ಇಲ್ಲಿ ಕಲಿಯುತ್ತಿದ್ದಾರೆ. 3 ಹೆಂಚು, 3 ಕಾಂಕ್ರೀಟ್ ಕೊಠಡಿಗಳ ಜತೆಗೆ ಸ್ಟಾಫ್ರೂಮ್, ಲ್ಯಾಬ್ ಮತ್ತು ಬಿಸಿ ಊಟದ ಕೊಠಡಿ ಸೇರಿದಂತೆ ಅಂದಾಜು 10 ಕೊಠಡಿಗಳ ಈ ಶಾಲೆ ಗುಣಮಟ್ಟದ ಶಿಕ್ಷಣಕ್ಕೆ ಪ್ರಸಿದ್ಧಿಯಾಗಿದೆ. ಪಕ್ಕದ ಸವೂರು ಮತ್ತು ಬೂದಿಹಾಳದ ಮಕ್ಕಳು ಸಹ ಈ ಶಾಲೆಗೆ ಬರುತ್ತಾರೆ.
ಮಳೆಗಾಲದಲ್ಲೂ ಹೆಂಚಿನ ಕೊಠಡಿಗಳು ಸೋರುವುದಿಲ್ಲ ಎನ್ನುವುದು ಸಮಾಧಾನ ತಂದರೆ. ಕಾಂಕ್ರೀಟ್ ಕೊಠಡಿಗಳು ಮಾತ್ರ ಸ್ಪ್ಯಾಬ್ ಬಿರುಕು ಬಿಟ್ಟ ಪರಿಣಾಮ ನಿರಂತರವಾಗಿ ತಟ ತಟ ಹನಿಗಳು ಮಕ್ಕಳ ಮೇಲೆ ಬೀಳುವುದು ತಪ್ಪಿಲ್ಲ. ಇದರಿಂದ ಮಕ್ಕಳು ಅನಾರೋಗ್ಯಕ್ಕೆ ಈಡಾಗುತ್ತಿದ್ದರೆ.
ಕರಾಳ ದಿನ ಯಾಕೆ?
ಈ ಸಮಸ್ಯೆ ಇಂದು ನಿನ್ನೆಯದಲ್ಲ. ಕಳೆದೊಂದು ವರ್ಷದಿಂದ ಶಾಲಾ ಗೋಡೆಗಳು ಬಿರುಕು ಬಿಡುವ ಜತೆಗೆ ಈ ಬಾರಿಯ ಮುಂಗಾರು ಮಳೆಗೆ ಮೇಲ್ಚಾವಣಿ ಸಹ ಸೋರಲಾರಂಭಿಸಿದೆ. ಈ ಬಗ್ಗೆ ಮುಖ್ಯೋಪಾಧ್ಯಾಯರು ಸವಣೂರ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗೆ ಪತ್ರ ಬರೆದು ಗಮನ ಸೆಳೆದಿದ್ದಾರೆ. ಎಸ್ಡಿಎಂಸಿ ಅಧ್ಯಕ್ಷ-ಉಪಾಧ್ಯಕ್ಷ ಸೇರಿದಂತೆ ಸದಸ್ಯರೂ ಸಹ ದುರಸ್ತಿ ಕೈಗೊಳ್ಳುವಂತೆ ಗ್ರಾಪಂ/ ತಾಪಂ ಮತ್ತು ಜಿ.ಪಂಗೂ ಒತ್ತಾಯಿಸಿದ್ದಾರೆ. ಇಲಾಖೆ ಮಾತ್ರ ಈವರೆಗೂ ಸ್ಪಂದಿಸಿಲ್ಲ ಎನ್ನುತ್ತಾರೆ ಗ್ರಾಮಸ್ಥರು.
ಶಾಲಾ ಕೊಠಡಿಗಳ ದುರಸ್ತಿಗೆ ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆಯೊಳಗೆ ಕ್ರಮ ಕೈಗೊಳ್ಳದಿದ್ದರೆ ಶಾಲೆಗೆ ಬೀಗ ಹಾಕಿ, ಕಪ್ಪುಪಟ್ಟಿ ಕಟ್ಟಿಕೊಂಡು ಪ್ರತಿಭಟನೆ ಕೈಗೊಳ್ಳುವುದಾಗಿ ಊರಿನ ಮುಖಂಡರು, ಎಸ್ಡಿಎಂಸಿ ಮಂಡಳಿ ಜತೆಗೆ ರೈತ ಸಂಘದ ಗ್ರಾಮೀಣ ಘಟಕದ ಅಧ್ಯಕ್ಷರು, ಕಾರ್ಯಕರ್ತರು ಹಾಗೂ ಸಂಘ-ಸಂಸ್ಥೆಗಳ ಮುಖಂಡರು ಎಚ್ಚರಿಕೆ ನೀಡಿದ್ದಾರೆ.
ಶಾಲೆಗೆ ಕಳಿಸೋದಿಲ್ಲ
ಸೋರುವ ಕೊಠಡಿಗಳಲ್ಲಿ ಮಕ್ಕಳಿಗೆ ರಕ್ಷಣೆ ನೀಡುವುದು ಸಹ ಶಿಕ್ಷಕರ ನಿತ್ಯದ ಗೋಳಾಗಿದೆ. ಜತೆಗೆ ಬಿರುಕು ಬಿಟ್ಟಿರುವ ಗೋಡೆಗಳು ಭಯ ಹುಟ್ಟಿಸುತ್ತಿವೆ. ಇಂಥ ಶಾಲೆಗೆ ನಮ್ಮ ಮಕ್ಕಳನ್ನು ಕಳಿಸುವುದಿಲ್ಲ ಎಂದು ಪೋಷಕರು ಪಟ್ಟು ಹಿಡಿದಿದ್ದಾರೆ.
ಒಟ್ಟಾರೆ ಬಡ ಹಾಗೂ ಕೃಷಿ ಕಾರ್ಮಿಕರ ಮಕ್ಕಳೇ ಸರಕಾರಿ ಶಾಲೆಯಲ್ಲಿ ಕಲಿಯುತ್ತಿರುವ ಕಾರಣಕ್ಕೆ ಕಾಲ ಕಾಲಕ್ಕೆ ಎಸ್ಡಿಎಂಸಿ ಅಧ್ಯಕ್ಷರು ಮತ್ತು ಆಡಳಿತ ಮಂಡಳಿ ಮೇಲೆ ಪಾಲಕರು ಹರಿ ಹಾಯುವುದು ತಪ್ಪಿಲ್ಲ. ಈಗಲಾದರೂ ಬಿಇಒ ಮತ್ತು ಡಿಡಿಪಿಐ ಇತ್ತ ಗಮನ ಹರಿಸಬೇಕೆನ್ನುವುದು ಗ್ರಾಮದ ಮುಂಖಡರ ಒತ್ತಾಸೆಯಾಗಿದೆ.