ಶಿಗ್ಗಾವಿ : ಪರಿಶಿಷ್ಟ ಜಾತಿ ಮತ್ತು ಪರಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಎಸ್ಸಿ-ಎಸ್ಟಿ ಯೋನೆಯಡಿ ನೀಡುತ್ತಿದ್ದ ಉಚಿತ ಬಸ್ ಪಾಸ್ ಸೌಲಭ್ಯ ಸ್ಥಗಿತಗೊಳಿಸಲು ನಿರ್ಣಯಿಸಿರುವ ಸರಕಾರದ ವಿರುದ್ಧ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದ ಎಸ್ಎಫ್ಐ ಕಾರ್ಯಕರ್ತರು ಶುಕ್ರವಾರ ತಹಸೀಲ್ದಾರರಿಗೆ ಮನವಿ ಅರ್ಪಿಸಿದರು.
ಸ್ಥಳೀಯ ಪದವಿ ಪೂರ್ವ ಕಾಲೇಜಿನಿಂದ ಆರಂಭವಾದ ಪ್ರತಿಭಟನೆ ಮೆರವಣಿಗೆ, ಪ್ರಮುಕ ಬೀದಿಗಳಲ್ಲಿ ಸಂಚರಿಸಿತು. ನಂತರ ಪಿಎಲ್ಡಿ ಬ್ಯಾಂಕ್ ವೃತ್ತದಲ್ಲಿ ಪರಿವರ್ತನೆಗೊಂಡ ಸಭೆಯನ್ನುದ್ದೇಶಿಸಿ ಮಾತನಾಡಿದ ಎಸ್ಎಫ್ಐ ತಾಲೂಕು ಸಂಚಾಲಕಿ ಜ್ಯೋತಿ ದೊಡ್ಡಮನಿ, ಹೋರಾಟ ಮೂಲಕ ಬಸ್ ಪಾಸ್ ಸೌಲಭ್ಯ ಪಡೆದುಕೊಳ್ಳಲಾಗಿತ್ತು. ಇದನ್ನು ಈಗಿನ ಮುಖ್ಯಮಂತ್ರಿಗಳು ಈ ಸೌಲಭ್ಯ ಸ್ಥಗಿತಗೊಳಿಸಲು ನಿರ್ಣಯಿಸಿದ್ದಕ್ಕೆ ವಿರೋಧವಿದೆ. ಯಥಾ-ಸ್ಥಿತಿ ಮುಂದುವರಿಸಬೇಕು ಎಂದು ಆಗ್ರಹಿಸಿದರು.
ಎಸ್ಎಫ್ಐ ಮುಖಂಡ ಶಿವು ದೊಡ್ಡಮನಿ ಮಾತನಾಡಿ, ಒಂದು ವರ್ಗದ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡಿ ಉಳಿದ ವರ್ಗದ ವಿದ್ಯಾರ್ಥಿಗಳಿಗೆ ನೀಡದೆ ಇರುವುದು ವಿದ್ಯಾರ್ಥಿಗಳ ನಡುವೆ ಜಾತಿ ತಾರತಮ್ಯ ಭಾವನೆ ಮೂಡಿಸಿದಂತಾಗಿದೆ. ಉಚಿತ ಬಸ್ ಪಾಸ್ ಯೋಜನೆ ಮುಂದುವರಿಸುವಂತೆ ಸರಕಾರಕ್ಕೆ ಒತ್ತಾಯಿಸಿದರು.
ಪ್ರವೀಣ ಮಾಳವದೆ, ಮುತ್ತು ಕುಂಬಾರ, ಯೋಗೇಶ ಮಾವೂರು, ಮಂಜುನಾಥ, ಉಮೇಶ, ನೇತ್ರಾ ಹುಲಸೊಗ್ಗಿ, ಅಂಬಿಕಾ ಶಿಂದೆ, ವಿದ್ಯಾ ಮ್ಯಾಗಳಮನಿ, ಯಲ್ಲಮ್ಮ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಸ್ಥಳೀಯ ಪದವಿ ಪೂರ್ವ ಕಾಲೇಜಿನಿಂದ ಆರಂಭವಾದ ಪ್ರತಿಭಟನೆ ಮೆರವಣಿಗೆ, ಪ್ರಮುಕ ಬೀದಿಗಳಲ್ಲಿ ಸಂಚರಿಸಿತು. ನಂತರ ಪಿಎಲ್ಡಿ ಬ್ಯಾಂಕ್ ವೃತ್ತದಲ್ಲಿ ಪರಿವರ್ತನೆಗೊಂಡ ಸಭೆಯನ್ನುದ್ದೇಶಿಸಿ ಮಾತನಾಡಿದ ಎಸ್ಎಫ್ಐ ತಾಲೂಕು ಸಂಚಾಲಕಿ ಜ್ಯೋತಿ ದೊಡ್ಡಮನಿ, ಹೋರಾಟ ಮೂಲಕ ಬಸ್ ಪಾಸ್ ಸೌಲಭ್ಯ ಪಡೆದುಕೊಳ್ಳಲಾಗಿತ್ತು. ಇದನ್ನು ಈಗಿನ ಮುಖ್ಯಮಂತ್ರಿಗಳು ಈ ಸೌಲಭ್ಯ ಸ್ಥಗಿತಗೊಳಿಸಲು ನಿರ್ಣಯಿಸಿದ್ದಕ್ಕೆ ವಿರೋಧವಿದೆ. ಯಥಾ-ಸ್ಥಿತಿ ಮುಂದುವರಿಸಬೇಕು ಎಂದು ಆಗ್ರಹಿಸಿದರು.
ಎಸ್ಎಫ್ಐ ಮುಖಂಡ ಶಿವು ದೊಡ್ಡಮನಿ ಮಾತನಾಡಿ, ಒಂದು ವರ್ಗದ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡಿ ಉಳಿದ ವರ್ಗದ ವಿದ್ಯಾರ್ಥಿಗಳಿಗೆ ನೀಡದೆ ಇರುವುದು ವಿದ್ಯಾರ್ಥಿಗಳ ನಡುವೆ ಜಾತಿ ತಾರತಮ್ಯ ಭಾವನೆ ಮೂಡಿಸಿದಂತಾಗಿದೆ. ಉಚಿತ ಬಸ್ ಪಾಸ್ ಯೋಜನೆ ಮುಂದುವರಿಸುವಂತೆ ಸರಕಾರಕ್ಕೆ ಒತ್ತಾಯಿಸಿದರು.
ಪ್ರವೀಣ ಮಾಳವದೆ, ಮುತ್ತು ಕುಂಬಾರ, ಯೋಗೇಶ ಮಾವೂರು, ಮಂಜುನಾಥ, ಉಮೇಶ, ನೇತ್ರಾ ಹುಲಸೊಗ್ಗಿ, ಅಂಬಿಕಾ ಶಿಂದೆ, ವಿದ್ಯಾ ಮ್ಯಾಗಳಮನಿ, ಯಲ್ಲಮ್ಮ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.