ಆ್ಯಪ್ನಗರ

‘ಕಿತ್ತೂರ ಕರ್ನಾಟಕ’ ಘೋಷಣೆಗೆ ಒತ್ತಾಯ

ಹಾನಗಲ್ಲ​: ಮುಂಬೈ ಕರ್ನಾಟಕ ಪ್ರದೇಶವನ್ನು 'ಕಿತ್ತೂರ ಕರ್ನಾಟಕ' ಎಂಬುದಾಗಿ ಸರಕಾರ ಘೋಷಿಸಬೇಕು ಎಂದು ಒತ್ತಾಯಿಸಿ ಬುಧವಾರ ಉತ್ತರ ಕರ್ನಾಟಕ ಹೋರಾಟ ಸಮಿತಿ ವತಿಯಿಂದ ತಹಸೀಲ್ದಾರ್‌ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

Vijaya Karnataka 17 Oct 2019, 5:00 am
ಹಾನಗಲ್ಲ: ಮುಂಬೈ ಕರ್ನಾಟಕ ಪ್ರದೇಶವನ್ನು 'ಕಿತ್ತೂರ ಕರ್ನಾಟಕ' ಎಂಬುದಾಗಿ ಸರಕಾರ ಘೋಷಿಸಬೇಕು ಎಂದು ಒತ್ತಾಯಿಸಿ ಬುಧವಾರ ಉತ್ತರ ಕರ್ನಾಟಕ ಹೋರಾಟ ಸಮಿತಿ ವತಿಯಿಂದ ತಹಸೀಲ್ದಾರ್‌ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
Vijaya Karnataka Web forced for announcement of karnataka telephone numbers
‘ಕಿತ್ತೂರ ಕರ್ನಾಟಕ’ ಘೋಷಣೆಗೆ ಒತ್ತಾಯ


ಈಗಾಗಲೇ ಹೈದರಾಬಾದ್‌ ಕರ್ನಾಟಕವನ್ನು 'ಕಲ್ಯಾಣ ಕರ್ನಾಟಕ' ಎಂದು ಸರಕಾರ ಘೋಷಿಸಿದ್ದು, ಇದೇ ರೀತಿ 7 ಜಿಲ್ಲೆಗಳನ್ನು ಒಳಗೊಂಡ ಕಿತ್ತೂರ ಕರ್ನಾಟಕ ಘೋಷಣೆಯಾಗಬೇಕು. ಉತ್ತರ ಕರ್ನಾಟಕದ ಹಿಂದುಳಿದ ಪ್ರದೇಶಗಳ ಅಭಿವೃದ್ಧಿಗಾಗಿ 'ಕಿತ್ತೂರ ಕರ್ನಾಟಕ ಅಭಿವೃದ್ಧಿ ಪ್ರಾಧಿಕಾರ' ಅಸ್ತಿತ್ವಕ್ಕೆ ಬರುವುದು ಅಗತ್ಯವಾಗಿದೆ ಎಂದು ಮನವಿಪತ್ರದಲ್ಲಿಆಗ್ರಹಿಸಲಾಗಿದೆ.

ಈ ಸಂದರ್ಭದಲ್ಲಿಮಾತನಾಡಿದ ಉತ್ತರ ಕರ್ನಾಟಕ ಹೋರಾಟ ಸಮಿತಿ ಅಧ್ಯಕ್ಷ ಸೋಮಶೇಖರ ಕೊತಂಬರಿ, ಮುಂಬೈ ಕರ್ನಾಟಕ ಭಾಗವು ಕಿತ್ತೂರ ಕರ್ನಾಟಕ ಆಗಬೇಕು ಎಂಬುದಾಗಿ ಇಲ್ಲಿನ ಸ್ವಾತಂತ್ರತ್ರ್ಯ ಹೋರಾಟಗಾರರು, ಪ್ರಗತಿಪರ ಚಿಂತಕರು, ಮಠಾಧೀಶರ ಹಕ್ಕೋತ್ತಾಯವಾಗಿದೆ. ಬಾಗಲಕೋಟೆ, ವಿಜಯಪೂರ, ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಉತ್ತರ ಕನ್ನಡ ಜಿಲ್ಲೆಗಳನ್ನು ಒಳಗೊಂಡ ಕಿತ್ತೂರ ಕರ್ನಾಟಕ ಘೋಷಣೆಯಾಗಬೇಕು. ವೀರರಾಣಿ ಕಿತ್ತೂರ ಚನ್ನಮ್ಮ ಬಳಸಿದ ವೀರಗತ್ತಿ, ರಕ್ಷಾ ಕವಚವನ್ನು ಇಂಗ್ಲೆಂಡ್‌ನಿಂದ ಭಾರತಕ್ಕೆ ತರಬೇಕು. ವಿಶ್ವ ವಿದ್ಯಾಲಯಗಳಲ್ಲಿಕಿತ್ತೂರ ಸಮಗ್ರ ಇತಿಹಾಸ ಅಧ್ಯಯನಕ್ಕಾಗಿ ರಾಣಿ ಚನ್ನಮ್ಮ ಅಧ್ಯಯನ ಪೀಠ ಆರಂಭಿಸಬೇಕು ಎಂದು ಒತ್ತಾಯಿಸಿದರು.

ಈ ಬಗ್ಗೆ 7 ಜಿಲ್ಲೆಗಳಲ್ಲಿಜನಾಂದೋಲನ ನಡೆಯಬೇಕು. ಸಂಘ, ಸಂಸ್ಥೆಗಳು ಸರಕಾರದ ಮೇಲೆ ಒತ್ತಡ ತರಬೇಕು. ಇದೇ 23 ರಂದು ಕಿತ್ತೂರ ಚನ್ನಮ್ಮಳ ವಿಜಯೋತ್ಸವದಂದು 'ಕಿತ್ತೂರ ಕರ್ನಾಟಕ' ಘೋಷಣೆಯಾಗಬೇಕು ಎಂದು ಸೋಮಶೇಖರ ಆಗ್ರಹಿಸಿದರು.

ಬಸವರಾಜ ಯಲಿ, ಶಿವಾನಂದ ಮನ್ನಂಗಿ, ಭರಮಣ್ಣ ವರ್ಧಿ, ಸುರೇಶ ನಾಯ್ಕ, ಎಸ್‌.ಎಲ್‌.ಬಣಕಾರ, ಮಲ್ಲೇಶಪ್ಪ ಕೊಣನಕೇರಿ, ಚನ್ನಬಸಪ್ಪ ಅಕ್ಕಿವಲ್ಳಿ, ಬಸವರಾಝ ಕಟ್ಟಿಮನಿ, ಕರಿಯಪ್ಪ ಗಂಟೇರ, ಸಂತೋಷ ದೊಡ್ಡಮನಿ, ಮಲ್ಲೇಶಪ್ಪ ಪರಪ್ಪನವರ ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ