ಆ್ಯಪ್ನಗರ

ಅಕ್ರಮ ಕಲ್ಲುಕ್ವಾರಿ ಬಂದ್‌ ಮಾಡಿಸಿದ ಅರಣ್ಯ ಇಲಾಖೆ

ಕಾಕೋಳ: ರಾಣೇಬೆನ್ನೂರ ತಾಲೂಕಿನ ವ್ಯಾಪ್ತಿಯಲ್ಲಿಬರುವ ಅಳಲಗೇರಿ ಶಾಖೆಯ ಮೋಟೆಬೆನ್ನೂರ ಬೀಟ್‌ನ ಹತ್ತಿರವಿರುವ ಛತ್ರ ಗ್ರಾಮದ ಬಳಿ ಅಕ್ರಮವಾಗಿ ನಡೆಸುತ್ತಿದ್ದ ಕಲ್ಲುಕ್ವಾರಿಗಳನ್ನು ತಡೆದು, ಜೆಸಿಬಿ ಯಂತ್ರದ ಮೂಲಕ ಮಣ್ಣು ಹಾಕಿ ಶನಿವಾರ ಬೆಳಗ್ಗೆ ದಾರಿ ಬಂದ್‌ ಮಾಡಲಾಯಿತು.

Vijaya Karnataka 15 Sep 2019, 5:00 am
ಕಾಕೋಳ: ರಾಣೇಬೆನ್ನೂರ ತಾಲೂಕಿನ ವ್ಯಾಪ್ತಿಯಲ್ಲಿಬರುವ ಅಳಲಗೇರಿ ಶಾಖೆಯ ಮೋಟೆಬೆನ್ನೂರ ಬೀಟ್‌ನ ಹತ್ತಿರವಿರುವ ಛತ್ರ ಗ್ರಾಮದ ಬಳಿ ಅಕ್ರಮವಾಗಿ ನಡೆಸುತ್ತಿದ್ದ ಕಲ್ಲುಕ್ವಾರಿಗಳನ್ನು ತಡೆದು, ಜೆಸಿಬಿ ಯಂತ್ರದ ಮೂಲಕ ಮಣ್ಣು ಹಾಕಿ ಶನಿವಾರ ಬೆಳಗ್ಗೆ ದಾರಿ ಬಂದ್‌ ಮಾಡಲಾಯಿತು.
Vijaya Karnataka Web forest department of illegal kalukwari bund
ಅಕ್ರಮ ಕಲ್ಲುಕ್ವಾರಿ ಬಂದ್‌ ಮಾಡಿಸಿದ ಅರಣ್ಯ ಇಲಾಖೆ


ರಾಣೇಬೆನ್ನೂರ ವನ್ಯ ಜೀವಿ ವಿಭಾಗದ ವಲಯ ಅರಣ್ಯಾಧಿಕಾರಿ ಮಹಾಂತೇಶ ನ್ಯಾಮ್ತಿ ಹಾಗೂ ಎಸಿಎಫ್‌ ಅವರ ನೇತೃತ್ವದ ತಂಡ ಕಳೆದೊಂದು ವಾರದಿಂದದಲೂ ಗಸ್ತು ಕಾರ್ಯಾಚರಣೆಯಲ್ಲಿತೊಡಗಿದ್ದು, ಇಲಾಖೆಯ ಭಯದಿಂದ ಕಲ್ಲುಕ್ವಾರಿಯಲ್ಲಿಕೆಲಸ ಮಾಡಲು ಯಾರೂ ಬರದಿರುವುದನ್ನು ಗಮನಿಸಿ ಶನಿವಾರ ಬೆಳಗ್ಗೆ ಸರ್ವೆ ನಂ. 21 ರಲ್ಲಿನ ಜಾಗವನ್ನು ಇಲಾಖೆ ಬಂದ್‌ ಮಾಡಿ ಸುತ್ತಲೂ ಬೌಂಡರಿ ಹಾಕುವ ಕೆಲಸ ಮಾಡುತ್ತಿದೆ.

ಕಲ್ಲುಕ್ವಾರಿಗಳು ಅರಣ್ಯಕ್ಕೆ ಹತ್ತಿರವಿದ್ದು, ಕ್ವಾರಿ ಕೆಲಸ ಅತೀಯಾದ ಶಬ್ದಗಳಿಂದಾಗಿ ಇಲ್ಲಿನ ಪ್ರಾಣಿಗಳಿಗೆ ಹಾನಿಯುಂಟಾಗುತ್ತಿದ್ದು, ಕೃಷ್ಣ ಮೃಗಗಳ ಸಂತತಿಗೆ ಧಕ್ಕೆಯಾಗುತ್ತಿರುವುದನ್ನು ಗಮನಿಸಿ ಎಚ್ಚೆತ್ತ ಇಲಾಖೆಯ ಸಿಬ್ಬಂದಿ, ಅರಣ್ಯ ಇಲಾಖೆಯ ವ್ಯಾಪ್ತಿಯಲ್ಲಿನ ಮೂರು ಅಕ್ರಮ ಕಲ್ಲುಕ್ವಾರಿಗಳನ್ನು ಬಂದ್‌ ಮಾಡಿಸುವಲ್ಲಿಯಶಸ್ವಿಯಾಗಿದ್ದಾರೆ, ಸಿಬ್ಬಂದಿಗಳ ಕಾರ್ಯ ಕ್ಷಮತೆಗೆ ಅರಣ್ಯಾಧಿಗಳು ಅಭಿನಂದನೆ ಸಲ್ಲಿಸಿದ್ದಾರೆ.

ಅಷ್ಟೇ ಅಲ್ಲದೇ ಬಂದ್‌ ಮಾಡಿದ ಜಾಗವನ್ನು ಪುನಹ ಕೆಲಸ ಆರಂಭಿಸಿದರೆ ಅರಣ್ಯ ಇಲಾಖೆಯ ಕಾಯ್ದೆಯಡಿ ಆರೋಪಿಯನ್ನು ಬಂಧಿಸಿ ನ್ಯಾಯಾಲಕ್ಕೆ ಒಪ್ಪಿಸುವುದಾಗಿ ಸೂಚನಾ ಫಲಕ ಅಳವಡಿಸಲಾಗಿದೆ. ಕಡ್ಡಾಯವಾಗಿ ಅಕ್ರಮವಾಗಿ ಕಲ್ಲುಕ್ವಾರಿಗಳನ್ನು ವೀಕ್ಷಣೆ ಮಾಡಿಕೊಳ್ಳುವಂತೆ ಅಲ್ಲಿನ ವೀಕ್ಷಕರಿಗೆ ಅರಣ್ಯಾಧಿಕಾರಿಗಳು ಸೂಚಿಸಿದ್ದಾರೆ.

ಉಪವಲಯ ಅರಣ್ಯಾಧಿಕಾರಿ ಕೆ.ಬಿ ಕಲ್ಲನಗೌಡರ, ಅರಣ್ಯ ರಕ್ಷಕ ಮಲ್ಲನಗೌಡ ಪಾಟೀಲ, ರಾಜು ಉಜನಿ ಹಾಗೂ ಅರಣ್ಯ ವೀಕ್ಷಕರು ಕಾರ್ಯಾಚರಣೆಯಲ್ಲಿಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ