ಆ್ಯಪ್ನಗರ

ಉಚಿತ ಹೃದಯ ಆರೋಗ್ಯ ತಪಾಸಣಾ ಶಿಬಿರ

ರಾಣೇಬೆನ್ನೂರ: ಇತ್ತೀಚಿನ ವರ್ಷಗಳಲ್ಲಿ ಆಧುನಿಕ ಜೀವನ ಶೈಲಿಯಿಂದಾಗಿ ಮನುಷ್ಯನಲ್ಲಿಹೃದಯ ಸಂಬಂಧಿ ರೋಗಗಳು ಹೆಚ್ಚಾಗುತ್ತಿದ್ದು ಆರೋಗ್ಯದಲ್ಲಿ ವ್ಯತ್ಯಾಸವಾದಲ್ಲಿ ತಕ್ಷಣವೇ ವೈದ್ಯರನ್ನು ಕಂಡು ಚಿಕಿತ್ಸೆ ಪಡೆಯಬೇಕು ಎಂದು ಲಯನ್ಸ್‌ ಕ್ಲಬ್‌ ಅಧ್ಯಕ್ಷ ಬಸವರಾಜ ಬಡಿಗೇರ ಹೇಳಿದರು.

Vijaya Karnataka 26 Jan 2020, 5:00 am
ರಾಣೇಬೆನ್ನೂರ: ಇತ್ತೀಚಿನ ವರ್ಷಗಳಲ್ಲಿ ಆಧುನಿಕ ಜೀವನ ಶೈಲಿಯಿಂದಾಗಿ ಮನುಷ್ಯನಲ್ಲಿಹೃದಯ ಸಂಬಂಧಿ ರೋಗಗಳು ಹೆಚ್ಚಾಗುತ್ತಿದ್ದು ಆರೋಗ್ಯದಲ್ಲಿ ವ್ಯತ್ಯಾಸವಾದಲ್ಲಿ ತಕ್ಷಣವೇ ವೈದ್ಯರನ್ನು ಕಂಡು ಚಿಕಿತ್ಸೆ ಪಡೆಯಬೇಕು ಎಂದು ಲಯನ್ಸ್‌ ಕ್ಲಬ್‌ ಅಧ್ಯಕ್ಷ ಬಸವರಾಜ ಬಡಿಗೇರ ಹೇಳಿದರು.
Vijaya Karnataka Web free heart health checkup camp
ಉಚಿತ ಹೃದಯ ಆರೋಗ್ಯ ತಪಾಸಣಾ ಶಿಬಿರ


ನಗರದ ಮೆಡ್ಲೇರಿ ರಸ್ತೆ ಲಯನ್ಸ್‌ ಶಾಲೆಯಲ್ಲಿಶನಿವಾರ ಸ್ಥಳೀಯ ಲಯನ್ಸ್‌ ಕ್ಲಬ್‌ಗಳು, ದಾವಣಗೆರೆಯ ಎಸ್‌.ಎಸ್‌. ನಾರಾಯಣ ಹಾರ್ಟ ಸೆಂಟರ್‌ ಸಂಯುಕ್ತಾಶ್ರಯದಲ್ಲಿಏರ್ಪಡಿಸಲಾಗಿದ್ದ ಉಚಿತ ಹೃದಯ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.

ದಾವಣಗೆರೆ ಎಸ್‌.ಎಸ್‌. ನಾರಾಯಣ ಹಾರ್ಟ ಸೆಂಟರ್‌ ವೈದ್ಯ ಡಾ. ಗುರುರಾಜ ಮಾತನಾಡಿ, ತಂಬಾಕು ಪದಾರ್ಥಗಳು ಮತ್ತು ಮದ್ಯ ಸೇವನೆಯಿಂದ ಹೃದಯ ಸಂಬಂಧಿ ಕಾಯಿಲೆಗಳು ಬರುತ್ತವೆ. ಎದೆ ಉರಿತವಾದಾಗ ಎಸಿಡಿಟಿ ಎಂದುಕೊಂಡು ವೈದ್ಯರ ಬಳಿ ತೋರಿಸದೆ ಔಷಧಿ ತೆಗೆದುಕೊಳ್ಳುವುದು ಸರಿಯಲ್ಲ. ಪ್ರತಿ ದಿನ ಒಂದು ಗಂಟೆ ವಾಕಿಂಗ್‌ ಮತ್ತು ಯೋಗಾಸನ ಮಾಡಬೇಕು. ಆಹಾರದಲ್ಲಿಉಪ್ಪು ಕಡಿಮೆ ಉಪಯೋಗಿಸಬೇಕು ಹಾಗೂ ತರಕಾರಿ, ಹಣ್ಣು ಹೆಚ್ಚು ಉಪಯೋಗಿಸಬೇಕು ಎಂದರು.

ಶಿಬಿರದಲ್ಲಿಸುಮಾರು 250 ಜನರು ತಪಾಸಣೆಗೆ ಒಳಗಾದರು. ಎಂ. ಎಸ್‌ ಅರಕೇರಿ, ಬಿ.ಎನ್‌. ಪಾಟೀಲ, ಎಲ್‌. ಜಿ. ಶೆಟ್ರ, ಬಿ.ಬಿ. ನಂದ್ಯಾಲ, ಸ್ವಪ್ನಾ ಮುದ್ದಿಯವರ, ರಜಿನಿ ಕುಲಕರ್ಣಿ ಹಾಗೂ ಎಸ್‌.ಎಸ್‌.ಹಾರ್ಟ್‌ ಸೆಂಟರ್‌ ಸಿಬ್ಬಂದಿ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ