ಆ್ಯಪ್ನಗರ

ಉತ್ತಮ ಆಹಾರ ಪದ್ಧತಿಯಿಂದ ಆರೋಗ್ಯ

ಅಕ್ಕಿಆಲೂರು: ಇಂದಿನ ಬದಲಾದ ಆಹಾರ ಪದ್ಧತಿಯಿಂದ ಮನುಷ್ಯನನ್ನು ಹಲವಾರು ರೋಗಗಳು ಕಾಡುತ್ತಿವೆ. ಕೆಲವನ್ನು ತಕ್ಷಣವೇ ಗುರುತಿಸಿ, ಅಗತ್ಯ ಚಿಕಿತ್ಸೆ ನೀಡದಿದ್ದರೆ ಜೀವಹಾನಿಯಾಗುವ ಸಾಧ್ಯತೆ ಹೆಚ್ಚು. ಇದನ್ನು ತಪ್ಪಿಸುವ ನಿಟ್ಟಿನಲ್ಲಿಪ್ರತಿಯೊಬ್ಬರೂ ಕೂಡ ಆಹಾರ ಪದ್ಧತಿ ಬದಲಿಸಿಕೊಳ್ಳಬೇಕಿದೆ ಎಂದು ನೇತ್ರ ತಂತ್ರಜ್ಞ ಎಲ್‌.ರವಿಕುಮಾರ್‌ ಕಿವಿಮಾತು ಹೇಳಿದರು.

Vijaya Karnataka 10 Dec 2019, 5:00 am
ಅಕ್ಕಿಆಲೂರು: ಇಂದಿನ ಬದಲಾದ ಆಹಾರ ಪದ್ಧತಿಯಿಂದ ಮನುಷ್ಯನನ್ನು ಹಲವಾರು ರೋಗಗಳು ಕಾಡುತ್ತಿವೆ. ಕೆಲವನ್ನು ತಕ್ಷಣವೇ ಗುರುತಿಸಿ, ಅಗತ್ಯ ಚಿಕಿತ್ಸೆ ನೀಡದಿದ್ದರೆ ಜೀವಹಾನಿಯಾಗುವ ಸಾಧ್ಯತೆ ಹೆಚ್ಚು. ಇದನ್ನು ತಪ್ಪಿಸುವ ನಿಟ್ಟಿನಲ್ಲಿಪ್ರತಿಯೊಬ್ಬರೂ ಕೂಡ ಆಹಾರ ಪದ್ಧತಿ ಬದಲಿಸಿಕೊಳ್ಳಬೇಕಿದೆ ಎಂದು ನೇತ್ರ ತಂತ್ರಜ್ಞ ಎಲ್‌.ರವಿಕುಮಾರ್‌ ಕಿವಿಮಾತು ಹೇಳಿದರು.
Vijaya Karnataka Web from good eating habits to health
ಉತ್ತಮ ಆಹಾರ ಪದ್ಧತಿಯಿಂದ ಆರೋಗ್ಯ


ಇಲ್ಲಿನ ಕುಮಾರ ನಗರದ ಮನೋಹರ ಗೊಂದಿ ಅವರ ಮನೆಯಲ್ಲಿಶಿವಮೊಗ್ಗದ ಶಂಕರ ಕಣ್ಣಿನ ಆಸ್ಪತ್ರೆ ಮತ್ತು ಅಕ್ಕಿಆಲೂರಿನ ಸ್ನೇಹಮೈತ್ರಿ ನೇತ್ರದಾನಿಗಳ ಬಳಗದ ಆಶ್ರಯದಲ್ಲಿನೇತ್ರದಾನಿ ದಿ.ಗಂಗಾಧರಪ್ಪ ಕೋರಿಶೆಟ್ಟರ ಸ್ಮರಣಾರ್ಥ ಆಯೋಜಿಸಲಾಗಿದ್ದ ನೇತ್ರ ತಪಾಸಣೆ, ಶಸ್ತ್ರಚಿಕಿತ್ಸೆ ಮತ್ತು ನೇತ್ರದಾನ ಜಾಗೃತಿ ಶಿಬಿರದಲ್ಲಿಭಾಗವಹಿಸಿ ಅವರು ಮಾತನಾಡಿದರು. ಮರಣದ ಬಳಿಕ ನೇತ್ರಗಳನ್ನು ಮಣ್ಣಾಗಲು ಬಿಡದೇ ಇಬ್ಬರು ಅಂಧರ ಬಾಳಿಗೆ ಬೆಳಕಾಗಲು ನೇತ್ರದಾನಕ್ಕೆ ಮುಂದಾಗುವ ಅಗತ್ಯವಿದೆ. ನೇತ್ರದಾನದಿಂದ ಸಾವಿನಲ್ಲಿಯೂ ಸಾರ್ಥಕತೆ ಕಾಣಬಹುದಾಗಿದೆ ಎಂದರು.

ಶಿಬಿರದಲ್ಲಿ128 ಜನರ ನೇತ್ರ ತಪಾಸಣೆ ಕೈಗೊಳ್ಳಲಾಯಿತು. ಈ ಪೈಕಿ 51 ಜನ ಶಸ್ತ್ರಚಿಕಿತ್ಸೆಗೆ ಆಯ್ಕೆಯಾದರು. 5 ಜನ ಮರಣದ ಬಳಿಕ ನೇತ್ರದಾನಕ್ಕೆ ಒಪ್ಪಿಗೆ ಪತ್ರ ನೀಡಿದರು. ದಿ.ಗಂಗಾಧರಪ್ಪ ಕೋರಿಶೆಟ್ಟರ ಅವರ ಪತ್ನಿ ಗಿರಿಜಮ್ಮ ಕೋರಿಶೆಟ್ಟರ, ಪುತ್ರ ವೀರಣ್ಣ ಕೋರಿಶೆಟ್ಟರ ಅವರನ್ನು ಸನ್ಮಾನಿಸಲಾಯಿತು. ಕರಬಸಪ್ಪ ಗೊಂದಿ, ವೀರೇಶ್‌ ಎಸ್‌.ಎ., ಮನೋಹರ ಗೊಂದಿ, ಕುಸುಮಾ ಗೊಂದಿ ಈ ಸಂದರ್ಭದಲ್ಲಿಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ