ಆ್ಯಪ್ನಗರ

ಅರಳೇಶ್ವರದಲ್ಲಿ ಹುಣ್ಣಿಮೆ ಸಂಭ್ರಮ

ಅಕ್ಕಿಆಲೂರು: ವರುಣ ದೇವನ ಕಣ್ಣಾಮುಚ್ಚಾಲೆ ನಡುವೆಯೇ ಬಿತ್ತನೆ ಕಾರ್ಯ ಪೂರ್ಣಗೊಳಿಸಿರುವ ರೈತ ಸಮೂಹದಲ್ಲೀಗ ಕಾರ ಹುಣ್ಣಿಮೆ ಸಂಭ್ರಮ ಗರಿಗೆದರಿದ್ದು ಅರಳೇಶ್ವರ ಗ್ರಾಮದಲ್ಲಿ ಸೋಮವಾರ ಹುಣ್ಣಿಮೆ ಆಚರಣೆಯ ಸಡಗರ ಕಂಡು ಬಂದಿತು.

Vijaya Karnataka 2 Jul 2019, 5:00 am
ಅಕ್ಕಿಆಲೂರು: ವರುಣ ದೇವನ ಕಣ್ಣಾಮುಚ್ಚಾಲೆ ನಡುವೆಯೇ ಬಿತ್ತನೆ ಕಾರ್ಯ ಪೂರ್ಣಗೊಳಿಸಿರುವ ರೈತ ಸಮೂಹದಲ್ಲೀಗ ಕಾರ ಹುಣ್ಣಿಮೆ ಸಂಭ್ರಮ ಗರಿಗೆದರಿದ್ದು ಅರಳೇಶ್ವರ ಗ್ರಾಮದಲ್ಲಿ ಸೋಮವಾರ ಹುಣ್ಣಿಮೆ ಆಚರಣೆಯ ಸಡಗರ ಕಂಡು ಬಂದಿತು.
Vijaya Karnataka Web HVR-1AKR2


ರೈತರು ಬೆಳಿಗ್ಗೆಯಿಂದಲೇ ಜಾನುವಾರುಗಳ ಮೈತೊಳೆದು ಅವುಗಳನ್ನು ವಿಶೇಷವಾಗಿ ಸಿಂಗರಿಸಿ ಆರಾಸುತ್ತಿದ್ದ ದೃಶ್ಯ ಕಂಡು ಬಂದಿತು. ಬಣ್ಣ ಬಣ್ಣದ ರಿಬ್ಬನ್ನು, ಗೆಜ್ಜೆ, ಜೂಲ ಸೇರಿದಂತೆ ಇನ್ನಿತರ ಅಲಂಕಾರಿಕ ವಸ್ತುಗಳೊಂದಿಗೆ ಜಾನುವಾರುಗಳನ್ನು ಸಿಂಗರಿಸಲಾಗಿತ್ತು. ಬಳಿಕ ಎತ್ತುಗಳನ್ನು ಬೆದರಿಸಿ ಓಡಿಸಿ ರೈತರು ಖುಷಿಪಟ್ಟರು.

ಅಖಾಡಕ್ಕೆ ಎತ್ತುಗಳನ್ನು ಕರೆತಂದು ಕೈಬಿಟ್ಟಾಗ ಅವು ಯಾರ ಕೈಗೂ ಸಿಗದೇ ಭರ್ರನೇ ಓಡಿದಾಗ ರೈತರು ಸಂಭ್ರಮದಿಂದ ನಲಿದಾಡಿದರು. ಬಿರುಸಾಗಿ ಓಡುತ್ತಿದ್ದ ಎತ್ತುಗಳನ್ನು ಹಿಡಿದು ನಿಲ್ಲಿಸುವಲ್ಲಿ ಕೆಲ ಯುವಕರು ಶ್ರಮ ಪಡುತ್ತಿದ್ದರು. ನೆರೆದ ಜನಸ್ತೋಮದ ಮಧ್ಯೆ ಸಿಳ್ಳೆ, ಕೇಕೆಯಲ್ಲಿ ಸಾಗಿದ ಕಾರ್ಯಕ್ರಮದಲ್ಲಿ ಎತ್ತುಗಳ ಕಲರವ ಕಂಡು ಬಂದಿತು.

ಇದಕ್ಕೂ ಮೊದಲಿಗೆ ರೈತ ಸಮೂಹ ಬಿತ್ತನೆ ಕಾರ್ಯಕ್ಕೆ ಬಳಸುವ ಕೂರಿಗೆಗೆ ವಿಶೇಷ ಪೂಜೆ ಸಲ್ಲಿಸಿ ಮಳೆ-ಬೆಳೆಗೆ ಪ್ರಾರ್ಥನೆ ಸಲ್ಲಿಸಿದರು. ಮಧ್ಯಾಹ್ನ ರೈತ ಕುಟುಂಬಗಳಲ್ಲಿ ಅಪ್ಪಟ ಉತ್ತರ ಕರ್ನಾಟಕ ಶೈಲಿಯ ಊಟ ತಯಾರಿಸಿ ದೇವರಿಗೆ ನೈವೇಧ್ಯ ಸಲ್ಲಿಸಲಾಯಿತು. ಒಡೆ, ಹೋಳಿಗೆ, ಅಕ್ಕಿ ಪಾಯಸಾ, ಬದ್ನಿಕಾಯಿ ಪಲ್ಯೆ ಸೇರಿದಂತೆ ಇನ್ನಿತರ ಖಾಧ್ಯಗಳು ಕಾರ ಹುಣ್ಣಿಮೆಗಾಗಿಯೇ ವಿಶೇಷವಾಗಿ ಸಿದ್ಧಗೊಂಡಿದ್ದವು. ಸಂಜೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಎತ್ತುಗಳ ಮೆರವಣಿಗೆ ನಡೆಸಲಾಯಿತು.

ಕಾರ ಹುಣ್ಣಿಮೆ ಆಚರಣೆ ಕುರಿತು ಪ್ರತಿಕ್ರಿಯಿಸಿದ ಅರಳೇಶ್ವರ ಗ್ರಾಮದ ರೈತ ಬಸವರಾಜ ಪೂಜಾರ, ಬಿತ್ತನೆ ಚಟುವಟಿಕೆ ಪೂರ್ಣಗೊಂಡ ಬಳಿಕವೇ ಕಾರ ಹುಣ್ಣಿಮೆಯನ್ನು ಆಚರಿಸುವ ಸಂಪ್ರದಾಯವನ್ನು ಮೊದಲಿನಿಂದಲೂ ಪಾಲಿಸಿಕೊಂಡು ಬರಲಾಗಿದೆ. ವರ್ಷದ ಕ್ಯಾಲೆಂಡರ್‌ ಪ್ರಕಾರ ಈಗಾಗಲೇ ಕಾರ ಹುಣ್ಣಿಮೆ ಮುಗಿದಿದ್ದು ಗ್ರಾಮೀಣ ಭಾಗದಲ್ಲಿ ರೈತ ಸಮೂಹ ಮಾತ್ರ ಬಿತ್ತನೆ ಪೂರ್ಣಗೊಂಡ ಬಳಿಕವಷ್ಟೇ ಆಚರಿಸಿ ಸಂಭ್ರಮಿಸುತ್ತಾರೆ ಎಂದರು.

ಸಕಾಲಕ್ಕೆ ಉತ್ತಮ ಮಳೆ ಸುರಿದು ಬೆಳೆ ಚೆನ್ನಾಗಿ ದೊರಕಲಿ ಎಂಬ ಸದಾಶಯದಲ್ಲಿ ಕಾರ ಹುಣ್ಣಿಮೆ ಆಚರಣೆ ನಡೆದಿದ್ದು ರೈತ ಸಮೂಹದ ಬಯಕೆ ಈ ಬಾರಿಯಾದರೂ ಈಡೇರಬೇಕಿದೆಯಲ್ಲವೇ?


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ