ಆ್ಯಪ್ನಗರ

ಜಿ.ಪಂ. ಅಧ್ಯಕ್ಷಗಿರಿಗೆ ಪೈಪೋಟಿ

ರಾಜು ನದಾಫ ಹಾವೇರಿ: ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಸ್‌.ಕೆ.ಕರಿಯಣ್ಣನವರ ಅವರ ರಾಜೀನಾಮೆ ಜ.26 ರಂದೇ ಅಂಗೀಕಾರಗೊಂಡಿದ್ದು, ಆಕಾಂಕ್ಷಿಗಳ ಪೈಪೋಟಿ ಹೆಚ್ಚಾಗಿದೆ. ಜಿಲ್ಲೆಯ ಕೈಪಾಳೆಯದಲ್ಲಿ ರಾಜಕೀಯ ಬೆಳವಣಿಗೆ ಗರಿಗೆದರಿದೆ.

Vijaya Karnataka 30 Jan 2020, 5:00 am
ರಾಜು ನದಾಫ ಹಾವೇರಿ: ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಸ್‌.ಕೆ.ಕರಿಯಣ್ಣನವರ ಅವರ ರಾಜೀನಾಮೆ ಜ.26 ರಂದೇ ಅಂಗೀಕಾರಗೊಂಡಿದ್ದು, ಆಕಾಂಕ್ಷಿಗಳ ಪೈಪೋಟಿ ಹೆಚ್ಚಾಗಿದೆ. ಜಿಲ್ಲೆಯ ಕೈಪಾಳೆಯದಲ್ಲಿ ರಾಜಕೀಯ ಬೆಳವಣಿಗೆ ಗರಿಗೆದರಿದೆ.
Vijaya Karnataka Web g p compete for presidency
ಜಿ.ಪಂ. ಅಧ್ಯಕ್ಷಗಿರಿಗೆ ಪೈಪೋಟಿ


ಮೇ 2021 ರ ವೇಳೆಗೆ ಜಿಪಂ ಅಧ್ಯಕ್ಷರ ಅವಧಿ ಮುಕ್ತಾಯಗೊಳ್ಳಲಿದೆ. ಉಳಿದಿರುವ ಅವಧಿಗೆ ಆಕಾಂಕ್ಷಿಗಳ ಪೈಪೋಟಿ ಬಿರುಸುಗೊಂಡಿದೆ.

ಹಿಂದೆ ಮಾಜಿ ಸಿಎಂ ಸಿದ್ದರಾಮಯ್ಯ ಕೃಪಾಕಟಾಕ್ಷದಿಂದ ಮಾಸೂರ ಕ್ಷೇತ್ರದ ಎಸ್‌.ಕೆ.ಕರಿಯಣ್ಣನವರಿಗೆ ಅಧ್ಯಕ್ಷ ಪಟ್ಟ ಲಭಿಸಿತ್ತು. ಈಗ ಪಕ್ಷದ ಹೈಕಮಾಂಡ್‌, ಅಧ್ಯಕ್ಷರ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ಸೂಚನೆ ಮೇರೆಗೆ ಅಧ್ಯಕ್ಷ ಎಸ್‌.ಕೆ.ಕರಿಯಣ್ಣನವರ ಜ.11 ರಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಸಲ್ಲಿಸಿದ್ದ ರಾಜೀನಾಮೆ 15 ದಿನಗಳೊಳಗೆ ಹಿಂಪಡೆಯದ ಹಿನ್ನೆಲೆಯಲ್ಲಿಅಂಗೀಕಾರಗೊಂಡಿದೆ. ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯುವವರೆಗೂ ಉಪಾಧ್ಯಕ್ಷರೇ ಪ್ರಭಾರ ಅಧ್ಯಕ್ಷರಾಗಿ ಕಾರ್ಯಭಾರ ನಿರ್ವಹಿಸುವಂತೆ ಇಲಾಖೆ ಆದೇಶ ಹೊರಬಿದ್ದಿದೆ.

ಪ್ರಸ್ತುತ ಜಿಪಂನಲ್ಲಿಆಡಳಿತ ಪಕ್ಷ ಬಿಜೆಪಿ 12 ಸ್ಥಾನ ಮತ್ತು ಪ್ರತಿಪಕ್ಷ ಕಾಂಗ್ರೆಸ್‌ 22 ಸ್ಥಾನ ಬಲಾಬಲ ಹೊಂದಿದೆ. ಜಿ.ಪಂ. ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿರುವ ಹಿನ್ನೆಲೆಯಲ್ಲಿಈ ಚುನಾವಣೆ ಅತ್ಯಂತ ಕುತೂಹಲ ಕೆರಳಿಸಿದೆ.

ಸಾಧ್ಯತೆಗಳು: ಈ ಬಾರಿ ಜಿಪಂ ಅಧ್ಯಕ್ಷ ಸ್ಥಾನವನ್ನು ಆಡಳಿತ ಪಕ್ಷ ಬಿಜೆಪಿ ತನ್ನ ವಶಕ್ಕೆ ಪಡೆದುಕೊಳ್ಳುವ ಪ್ರಯತ್ನ ನಡೆಸಿದೆ. ಒಟ್ಟು 34 ಸ್ಥಾನಗಳ ಪೈಕಿ ಬಿಜೆಪಿ 18 ಸ್ಥಾನಗಳ ಬಲಾಬಲ ಪ್ರದರ್ಶಿಸಿದಲ್ಲಿಗೆಲುವು ಸುಲಭವಾಗಲಿದೆ. ಬಿಜೆಪಿ ಪ್ರಯತ್ನ ವಿಫಲಗೊಳಿಸಲು ಪ್ರತಿಪಕ್ಷ ಕಾಂಗ್ರೆಸ ಒಗ್ಗಟ್ಟನ್ನು ಪ್ರದರ್ಶಿಸುವುದು ಅನಿವಾರ್ಯವಾಗಿದೆ.

ಚುನಾವಣೆ ನಡೆದಲ್ಲಿಕಾಂಗ್ರೆಸ ಪಾಳೆಯದ 22 ಸದಸ್ಯರ ಪೈಕಿ 7 ರಿಂದ 8 ಸದಸ್ಯರನ್ನು ಗೈರು ಹಾಜರಾಗುವಂತೆ ಮಾಡಿದಲ್ಲಿಅಧ್ಯಕ್ಷ ಹುದ್ದೆ ಸುಲಭವಾಗಿ ಬಿಜೆಪಿ ವಶವಾಗಲಿದೆ. ಈ ನಿಟ್ಟಿನಲ್ಲಿಎರಡೂ ಪಕ್ಷಗಳ ಮುಂದಿನ ನಡೆ ಕುತೂಹಲ ಮೂಡಿಸಿದೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ