ಆ್ಯಪ್ನಗರ

ಗಾಂಧಿ ಸ್ಥಬ್ದಚಿತ್ರ ಸಂಚಾರ ಇಂದಿನಿಂದ

ಹಾವೇರಿ: ಮಹಾತ್ಮಾಗಾಂಧೀಜಿ ಅವರ 150ನೇ ಜನ್ಮ ವರ್ಷಾಚರಣೆ ಅಂಗವಾಗಿ ಮಹಾತ್ಮಾಗಾಂಧೀಜಿ ಅವರ ಸಂದೇಶಗಳನ್ನು ನಾಡಿಗೆ ತಲುಪಿಸುವ ನಿಟ್ಟಿನಲ್ಲಿ ಮಾನ್ಯ ಮುಖ್ಯಮಂತ್ರಿಗಳ ಆಶಯದಂತೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ತಾಲೂಕಾ ಆಡಳಿತಗಳ ಸಹಯೋಗದಲ್ಲಿ ಗಾಂಧಿ ಸ್ಥಬ್ಧ ಚಿತ್ರ ಮೆರವಣಿಗೆ ಆರಂಭಗೊಳ್ಳಲಿದೆ.

Vijaya Karnataka 19 Dec 2018, 5:00 am
ಹಾವೇರಿ: ಮಹಾತ್ಮಾಗಾಂಧೀಜಿ ಅವರ 150ನೇ ಜನ್ಮ ವರ್ಷಾಚರಣೆ ಅಂಗವಾಗಿ ಮಹಾತ್ಮಾಗಾಂಧೀಜಿ ಅವರ ಸಂದೇಶಗಳನ್ನು ನಾಡಿಗೆ ತಲುಪಿಸುವ ನಿಟ್ಟಿನಲ್ಲಿ ಮಾನ್ಯ ಮುಖ್ಯಮಂತ್ರಿಗಳ ಆಶಯದಂತೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ತಾಲೂಕಾ ಆಡಳಿತಗಳ ಸಹಯೋಗದಲ್ಲಿ ಗಾಂಧಿ ಸ್ಥಬ್ಧ ಚಿತ್ರ ಮೆರವಣಿಗೆ ಆರಂಭಗೊಳ್ಳಲಿದೆ.
Vijaya Karnataka Web gandhi streaming traffic from today
ಗಾಂಧಿ ಸ್ಥಬ್ದಚಿತ್ರ ಸಂಚಾರ ಇಂದಿನಿಂದ


ಡಿ.19 ರಂದು ಗದಗ ಜಿಲ್ಲೆ ಶಿರಹಟ್ಟಿಯಿಂದ ಬೆಳಿಗ್ಗೆ 8 ಗಂಟೆಗೆ ಹೊರಟು ಹಾವೇರಿ ಜಿಲ್ಲೆಯ ಸವಣೂರ ತಾಲೂಕಿಗೆ ಬೆಳಿಗ್ಗೆ 11 ಗಂಟೆಗೆ ಸ್ಥಬ್ದಚಿತ್ರ ಪ್ರವೇಶಿಸಲಿದೆ. ಮಧ್ಯಾಹ್ನ 1 ಗಂಟೆಗೆ ಸವಣೂರಿನಿಂದ ಹೊರಟು ಮಧ್ಯಾಹ್ನ 2 ಗಂಟೆಗೆ ಶಿಗ್ಗಾಂವಿಗೆ ಆಗಮಿಸಲಿದೆ. ಸಂಜೆ 4 ಗಂಟೆಗೆ ಹಾನಗಲ್‌ ತಾಲೂಕಿಗೆ ಪ್ರವೇಶ ಮಾಡಿ ಮೆರವಣಿಗೆ ನಂತರ ವಾಸ್ತವ್ಯ ಮಾಡಲಿದೆ. ತಾಲೂಕಾ ಆಡಳಿತಗಳಿಂದ ಸ್ವಾಗತಿಸಿ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ.

ಡಿಸೆಂಬರ್‌ 20ರ ಬೆಳಿಗ್ಗೆ 8 ಗಂಟೆಗೆ ಹಾನಗಲ್‌ನಿಂದ ಹೊರಟು ಬೆಳಿಗ್ಗೆ 11 ಗಂಟೆಗೆ ಬ್ಯಾಡಗಿ ತಾಲೂಕು ಪ್ರವೇಶ ಮಾಡಲಿದೆ. ಮಧ್ಯಾಹ್ನ 12 ಗಂಟೆಗೆ ಬ್ಯಾಡಗಿಯಿಂದ ಹೊರಟು ಮಧ್ಯಾಹ್ನ 2 ಗಂಟೆಗೆ ಹಿರೇಕೆರೂರ ತಾಲೂಕಿಗೆ ಪ್ರವೇಶ ಮಾಡಲಿದೆ. ಮಧ್ಯಾಹ್ನ 3 ಗಂಟೆಗೆ ಹಿರೇಕೆರೂರಿನಿಂದ ದಾವಣಗೆರೆ ಜಿಲ್ಲೆ ಹೊನ್ನಾಳಿಗೆ ತೆರಳಲಿದೆ. ಆಯಾ ತಾಲೂಕಾ ಆಡಳಿತ ಸ್ಥಬ್ಧಚಿತ್ರವನ್ನು ಆಹ್ವಾನಿಸಿ ಬೀಳ್ಕೊಡಲಿವೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಕೋರಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ