ಆ್ಯಪ್ನಗರ

ಉದ್ಯಾನ ಅಧ್ವಾನ

ಹಾವೇರಿ: ಜಿಲ್ಲಾ ಕೇಂದ್ರ ಹಾವೇರಿ ನಗರದಲ್ಲಿ ನಾಯಿ ಕೊಡೆಗಳಂತೆ ಲೇಔಟ್‌ಗಳು ಬೆಳೆದು ನಿಂತಿದ್ದು, ಈ ಎಲ್ಲಾ ಲೇಔಟ್‌ಗಳಿಗೆ ಅನುಮೋದನೆ ಕೊಡುವ ಸಂದರ್ಭದಲ್ಲಿ ಮೀಸಲಾಗಿಟ್ಟ ಉದ್ಯಾನ ವನ ಜಾಗೆಯೂ ಹೆಸರಿಗೆ ಅಷ್ಟೇ ಸೀಮಿತವಾಗಿದೆ.

Vijaya Karnataka 27 May 2019, 5:00 am
ಹಾವೇರಿ: ಜಿಲ್ಲಾ ಕೇಂದ್ರ ಹಾವೇರಿ ನಗರದಲ್ಲಿ ನಾಯಿ ಕೊಡೆಗಳಂತೆ ಲೇಔಟ್‌ಗಳು ಬೆಳೆದು ನಿಂತಿದ್ದು, ಈ ಎಲ್ಲಾ ಲೇಔಟ್‌ಗಳಿಗೆ ಅನುಮೋದನೆ ಕೊಡುವ ಸಂದರ್ಭದಲ್ಲಿ ಮೀಸಲಾಗಿಟ್ಟ ಉದ್ಯಾನ ವನ ಜಾಗೆಯೂ ಹೆಸರಿಗೆ ಅಷ್ಟೇ ಸೀಮಿತವಾಗಿದೆ.
Vijaya Karnataka Web garden defeat
ಉದ್ಯಾನ ಅಧ್ವಾನ


ನಗರಸಭೆ ಅಂದಾಜಿನ ಪ್ರಕಾರ, ನಗರದಲ್ಲಿ 50 ರಿಂದ 60 ಉದ್ಯಾನವನಗಳಿದ್ದು, ಅವುಗಳು ಎಲ್ಲವೂ ಸರಿಯಾಗಿ ನಿರ್ವಹಣೆ ಇಲ್ಲದೆ ಸಂಪೂರ್ಣ ಹಾಳಾಗಿವೆ. ನಿತ್ಯ ವಾಯು ವಿಹಾರ ಮಾಡುವ ಜನರಿಗೆ ಸೂಕ್ತ ಸ್ಥಳ ಅವಕಾಶವಿಲ್ಲದ ಕಾರಣ. ರಸ್ತೆಯಲ್ಲಿ ವಿಹಾರ ಮಾಡುವ ಪರಸ್ಥಿತಿ ನಿರ್ಮಾಣವಾಗಿದೆ.

ವಿಷ ಜಂತುಗಳ ತಾಣ:
ಉದ್ಯಾನ ನಿರ್ಮಾಣಕ್ಕಾಗಿ ಮೀಸಲಿರಿಸಿದ ಜಾಗಗಳು ಅಭಿವೃದ್ಧಿಗೊಳ್ಳದೆ ಗಿಡ ಗಂಟೆ ಬೆಳೆದಿದ್ದು, ಹಂದಿ, ವಿಷ ಜಂತುಗಳ ತಾಣವಾಗಿವೆ. ಲಕ್ಷಾಂತರ ರೂ. ಖರ್ಚು ಮಾಡಿ 10ಕ್ಕೂ ಅಧಿಕ ಉದ್ಯಾನ ವನಗಳನ್ನು ನಿರ್ಮಿಸಿದ್ದಾರೆ. ಅವುಗಳು ಸರಿಯಾಗಿ ಅಭಿವೃದ್ಧಿಯಾಗಿಲ್ಲ. ಇದಕ್ಕೆ ವಿದ್ಯಾನಗರದ ಪಶ್ಚಿಮ ಭಾಗದ ನಗರಾಭಿವೃದ್ಧಿ ಪ್ರಾಧಿಕಾರದಿಂದ ನಿರ್ಮಿಸಿದ್ದ ಉದ್ಯಾನವನ ತಾಜಾ ಉದಾಹರಣೆಯಾಗಿದೆ.

ನಿರ್ವಹಣೆ ಕೊರತೆ: ಅಶ್ವಿನಿ ನಗರದ ಮಹಿಳಾ ಹಾಸ್ಟೆಲ್‌ ಪಕ್ಕದ ಉದ್ಯಾನ ವನ, ಅಶ್ವಿನಿ ನಗರದ ಓವರ್‌ ಹೆಡ್‌ ಟ್ಯಾಂಕ್‌ (ಉರ್ದು ಶಾಲೆಯ ಹಿಂಭಾಗ) ಉದ್ಯಾನವನ ಎಂದು ಗುರುತಿಸಿ ಜಾಗವನ್ನು ಮೀಸಲಾಗಿಟ್ಟಿದ್ದು ಅಭಿವೃದ್ಧಿಗೊಳಿಸದೆ ಗಿಡಗಂಟೆಗಳು ಬೆಳೆದು ವಿಷಜಂತುಗಳ ತಾಣಗಳಾಗಿ ಪರಿಣಮಿಸಿವೆ.

ಶಿವಾಜಿನ ನಗರದ 1ನೇ ಕ್ರಾಸ್‌, ಶಿವಾಜಿ ನಗರದ ಶಾರದ ಲೇಔಟ್‌ ಮುಂಭಾಗದ ಉದ್ಯಾನವನಗಳು ಅಭಿವೃದ್ಧಿಗೊಳಿಸಿ ವಾಯು ವಿಹಾರಕ್ಕೆ ವಿಶ್ರಾಂತಿಗೆ ಆಸನಗಳ ವ್ಯವಸ್ಥೆ ಮಾಡಲಾಗಿದೆ. ಆದರೆ, ಸರಿಯಾಗಿ ನಿರ್ವಹಣೆ ಇಲ್ಲದ ಕಾರಣ ಮುಳ್ಳು ಕಂಟಿ, ಕಲ್ಲು, ಮಣ್ಣು ತುಂಬಿ ಆಸನಗಳು ಎಲ್ಲಾ ಒಡೆದುಹೋಗಿ ಬಳಕೆಗೆ ಬಾರದಂತೆ ಆಗಿವೆ.

ಬೇಸಿಗೆಯಲ್ಲಿ ನೀರಿನ ಕೊರತೆಯಿಂದ ಕೆಲ ಉದ್ಯಾನ ವನಗಳಲ್ಲಿನ ಸಸಿಗಳು, ಹುಲ್ಲು ಒಣಗುತ್ತಿದ್ದು, ಆಸನಗಳು ಇತರೆ ವಸ್ತುಗಳು ಕೂಡ ಹಾಳಾಗುವ ಮೂಲಕ ತಮ್ಮ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿವೆ. ಇನ್ನಾದರೂ ಉದ್ಯಾನವನಗಳನ್ನು ನಗರಸಭೆಯ ಕಾಪಾಡಿಕೊಳ್ಳಬೇಕು ಎನ್ನುವುದು ಜನರ ಒತ್ತಾಯವಾಗಿದೆ.

ಅಧಿಕಾರಿಗಳ ನಿರ್ಲಕ್ಷ್ಯ: ನಗರದ 50 ರಿಂದ 60 ಉದ್ಯಾನವನಗಳ ಅಭಿವೃದ್ಧಿಗೆ ನಗರಸಭೆ ಅಧಿಕಾರಿಗಳು ಮುಂದಾಗಿಲ್ಲ. ಇತ್ತ ಚೆನ್ನಾಗಿ ಇರುವ ಉದ್ಯಾನವನಗಳನ್ನು ಸರಿಯಾಗಿ ನಿರ್ವಹಿಸದ ಕಾರಣ ಅವುಗಳು ಕೂಡ ಹಾಳಾಗುತ್ತಿವೆ. ಇದಕ್ಕೆ ಎಲ್ಲಾ ನಗರಸಭೆ ಅಧಿಕಾರಿಗಳ ಇಚ್ಛಾಶಕ್ತಿ ಕೊರತೆ ಕಾರಣ ಎನ್ನುತ್ತಾರೆ ಕರಬಸಪ್ಪ.

ಕೈಗೆ ಸಿಗದ ಅಧಿಕಾರಿಗಳು: ನಗರಸಭೆ ಕಚೇರಿಗೆ ಹೋದರೆ ಅವರು ಮೀಟಿಂಗ್‌ಗೆ ಹೋಗಿದ್ದಾರೆ ಎನ್ನುತ್ತಾರೆ ಸಿಬ್ಬಂದಿಗಳು. ಮೋಬೈಲ್‌ ಪೋನ್‌ಗೆ ಕರೆ ಮಾಡಿದರೆ ಆಯುಕ್ತರ ಪೋನ್‌ ಸ್ವೀಚ್‌ ಆಫ್‌. ಕಾಲ ರಿಂಗ್‌ ಆದರೂ ರೀಸಿವ್‌ ಮಾಡದ ಪರಿಸರ ಅಭಿಯಂತರ ಅಧಿಕಾರಿ. ಹೀಗೆ ನಗರಸಭೆಯಲ್ಲಿ ಆಡಳಿತ ನಡೆದರೆ ಜನಸಾಮಾನ್ಯ ಗತಿ ಏನು..? ಎಂಬ ಪ್ರಶ್ನೆ ಉದ್ಬವಿಸಿದೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ