ಆ್ಯಪ್ನಗರ

ಜನಸ್ಪಂದನದಲ್ಲಿ ಜನಾಕ್ರೋಶ

ಬ್ಯಾಡಗಿ: ಕಳೆದ ಒಂದು ವರ್ಷದ ಹಿಂದೆ ಬೆಳಕೇರಿ ಗ್ರಾಮದ ರೈತನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದು, ಅವರ ಕುಟುಂಬಕ್ಕೆ ಈವರೆಗೂ ಯಾವುದೇ ಪರಿಹಾರ ಒದಗಿಸದ ತಾಲೂಕಾಡಳಿತ ಹಾಗೂ ಕೃಷಿ ಇಲಾಖೆಯ ಕಾರ್ಯವೈಖರಿ ಪ್ರಶ್ನಿಸಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ ಘಟನೆ ತಾಲೂಕಿನ ಬೆಳಕೇರಿ ಗ್ರಾಮದಲ್ಲಿ ಶನಿವಾರ ನಡೆದ ಜನಸ್ಪಂದನ ಕಾರ್ಯಕ್ರಮದಲ್ಲಿ ನಡೆಯಿತು.

Vijaya Karnataka 17 Jun 2019, 5:00 am
ಬ್ಯಾಡಗಿ: ಕಳೆದ ಒಂದು ವರ್ಷದ ಹಿಂದೆ ಬೆಳಕೇರಿ ಗ್ರಾಮದ ರೈತನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದು, ಅವರ ಕುಟುಂಬಕ್ಕೆ ಈವರೆಗೂ ಯಾವುದೇ ಪರಿಹಾರ ಒದಗಿಸದ ತಾಲೂಕಾಡಳಿತ ಹಾಗೂ ಕೃಷಿ ಇಲಾಖೆಯ ಕಾರ್ಯವೈಖರಿ ಪ್ರಶ್ನಿಸಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ ಘಟನೆ ತಾಲೂಕಿನ ಬೆಳಕೇರಿ ಗ್ರಾಮದಲ್ಲಿ ಶನಿವಾರ ನಡೆದ ಜನಸ್ಪಂದನ ಕಾರ್ಯಕ್ರಮದಲ್ಲಿ ನಡೆಯಿತು.
Vijaya Karnataka Web HVR-16BYD10


ಬ್ಯಾಡಗಿ ಹೋಬಳಿ ಮಟ್ಟದ ಜನಸ್ಪಂದನಾ ಸಭೆಯಲ್ಲಿ ರೈತ ಕುಟುಂಬಕ್ಕೆ ಅನ್ಯಾಯವಾದ ಬಗ್ಗೆ ಗ್ರಾಮದ ದ್ಯಾಮನಗೌಡ್ರ ಚಿಕ್ಕನಗೌಡ್ರ ಪ್ರಸ್ತಾಪಿಸಿ ಕಳೆದ ವರ್ಷ ಗ್ರಾಮದ ಶೇಖಪ್ಪ ಭರಮಪ್ಪ ಪೂಜಾರ ಎಂಬ ರೈತ ಸಾಲಬಾಧೆ ಯಿಂದ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು, ಇಲ್ಲಿಯವರೆಗೂ ಸರಕಾರದಿಂದ ಯಾವುದೇ ಪರಿಹಾರ ಬರದೇ ಆತನ ಕುಟುಂಬವು ದಯನೀಯ ಸ್ಥಿತಿಯಲ್ಲಿದೆ. ತಾಲೂಕಾಡಳಿತವಾಗಲಿ ಇಲ್ಲವೇ ಕೃಷಿ ಇಲಾಖೆಯಾಗಲಿ ಯಾವುದೇ ಸ್ಪಂದನೆ ನೀಡುತ್ತಿಲ್ಲ. ಇದು ಅಧಿಕಾರಿಗಳ ಬೇಜವಾಬ್ದರಿತನಕ್ಕೆ ಹಿಡಿದ ಕನ್ನಡಿಯಾಗಿದ್ದು ಇನ್ನಾದರೂ ತಾಲೂಕಾಡಳಿತ ಮೃತ ರೈತನ ಕುಟುಂಬಕ್ಕೆ ಪರಿಹಾರ ಒದಗಿಸಲು ಮುಂದಾಗಬೇಕೆಂದು ಆಗ್ರಹಿಸಿದರು.

ತಿಪ್ಪೆ ಸ್ಥಳಾಂತರಿಸಿಕೊಳ್ಳಿ: ಲೋಕೋಪಯೋಗಿ ಇಲಾಖೆಯ ಸಹಾಯಕ ಅಭಿಯಂತರ ಕೆ.ರಾಜಪ್ಪ ರಸ್ತೆ ಗ್ರಾಮಗಳಲ್ಲಿ ಅಕ್ಕಪಕ್ಕದಲ್ಲಿ ತಿಪ್ಪೆ ರಾಶಿಗಳು ತುಂಬಿಕೊಂಡಿದ್ದು, ಸಂಬಂಧಪಟ್ಟ ತಿಪ್ಪೆಗಳ ಮಾಲೀಕರು ತಮ್ಮ ತಿಪ್ಪೆರಾಶಿಗಳನ್ನು ರಸ್ತೆಯ ಪಕ್ಕದಿಂದ ತೆರವುಗೊಳಿಸಬೇಕು. ಇಲ್ಲದಿದ್ದಲ್ಲಿ ಇಲಾಖೆ ವತಿಯಿಂದ ತಿಪ್ಪೆಗಳನ್ನು ವಶಕ್ಕೆ ಪಡೆದು ಸ್ಥಳಾಂತರಿಸುವುದಾಗಿ ಎಚ್ಚರಿಸಿದರು.

ಸಭೆಯಲ್ಲಿ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಪರಶುರಾಮ ಪೂಜಾರ, ತಾ.ಪಂ.ಸದಸ್ಯ ಗುಡ್ಡಪ್ಪ ಕೋಳೂರ, ಗ್ರಾ.ಪಂ. ಸದಸ್ಯರಾದ ಬಸವರಾಜ ಹಲಗೇರಿ, ಪುಷ್ಪಾ ಗಾಣಗೇರ, ವನಿತಾ ಗದ್ಲೆಪ್ಪನವರ, ಬಸಮ್ಮ ಅಂಬಲಿ ವಿವಿಧ ಇಲಾಖಾಧಿಕಾರಿಗಳಾದ ಕೆ.ನಟರಾಜ್‌, ವೈ.ಎಂ.ಮಟಗಾರ, ಬಿ.ಕೆ.ರುದ್ರಮನಿ, ಗೀತಾ ಕುಂದಾಪುರ, ವೈ.ಎನ್‌.ಹಿರಿಯಕ್ಕನವರ, ಕೆ.ಎಚ್‌.ಪೂಜಾರ, ಡಾ.ಗೋಪಿನಾಥ, ಟಿ.ವಿಜಯಲಕ್ಷ್ಮಿ, ಮಾಲತೇಶ ಹುಣಿಸಿಮರದ, ಆರೀಫ ಅಹ್ಮದ್‌, ರಾಮಲಿಂಗ್ಪಪ, ಎಸ್‌.ಸಿ.ದ್ಯಾಮನಗೌಡ್ರ, ಪಿಡಿಓ ಲತಾ ತಬರಡ್ಡಿ, ಶಿದ್ಲಿಂಗಪ್ಪ ಮಲ್ಲಾಡದ, ಶೋಭಾ ಹುಣಿಸಿಮರದ, ವಿಜಯಕುಮಾರ ಪತ್ತಾರ,ಎಚ್‌.ಗುಂಡಪ್ಪ ಸೇರಿದಂತೆ ಇನ್ನಿತರರಿದ್ದರು.

ಸಭೆಯಲ್ಲಿ ಅಂಗನವಾಡಿ ಸ್ಥಳಾಂತರ, ಆಧಾರ ಕಾರ್ಡ ಅವ್ಯವಸ್ಥೆ, ಕುಡಿಯುವ ನೀರಿನ ಸಮಸ್ಯೆ, ಬಸ್‌ ವ್ಯವಸ್ಥೆ, ಶಾಲಾ ಮೈದಾನ, ಬಸ್‌ಶೆಲ್ಟರ್‌ ನಿರ್ಮಾಣ, ಜಮೀನುಗಳಿಗೆ ದಾರಿ ಸೇರಿದಂತೆ ವಿವಿಧ ಸಮಸ್ಯೆಗಳ ಬಗ್ಗೆ ಚರ್ಚಿಸಲಾಯಿತು.

ವಿದ್ಯುತ್‌ ವ್ಯವಸ್ಥೆ ಸರಿಪಡಿಸಿ: ಗ್ರಾ.ಪಂ.ಅಧ್ಯಕ್ಷ ಮಹಬೂಬಸಾಬ ನದಾಫ ಮಾತನಾಡಿ, ಗ್ರಾಮದಲ್ಲಿ ಕಳೆದ 8-10 ದಿನಗಳಿಂದ ಭಾರಿ ಗಾಳಿಮಳೆಯಿಂದ ವಿದ್ಯುತ್‌ ವ್ಯವಸ್ಥೆ ಅಸ್ತವ್ಯಸ್ಥಗೊಂಡಿದ್ದು, ಎಲ್ಲೆಂದರಲ್ಲೆ ವಿದ್ಯುತ್‌ ತಂತಿಗಳು ನೇತಾಡುತ್ತಿವೆಯಲ್ಲದೇ ಕಂಬಗಳು ಸಹ ನೆಲಕ್ಕೆ ಉರುಳಿವೆ. ಈ ಕುರಿತು ಕೆಇಬಿ ಅಧಿಕಾರಿಗಳಿಗೆ ತಿಳಿಸಿದರೂ ಸ್ಪಂದನೆ ಇಲ್ಲದಾಗಿದೆ. ಜನಪ್ರತಿನಿಧಿಗಳಿಗಂತೂ ಕಿಮ್ಮತ್ತಿಲ್ಲದಂತೆ ವರ್ತಿಸುತ್ತಿದ್ದಾರೆ. ಇನ್ನೊಂದು ವಾರದಲ್ಲಿ ಈ ಅವ್ಯವಸ್ಥೆ ಸರಿ ಮಾಡದಿದ್ದಲ್ಲಿ ಅಧಿಕಾರಿಗಳಿಗೆ ಘೇರಾವ್‌ ಹಾಕಲಾಗುವುದೆಂದು ಎಚ್ಚರಿಸಿದರು.

ಯೋಧನ ಸ್ಮಾರಕ ನಿರ್ಮಾಣ: ಕಳೆದ ವರ್ಷ ಗ್ರಾಮದ ಯೋಧ ಸಣ್ಣಗೌಡ ಚಿಕ್ಕನಗೌಡ್ರ ಹುತಾತ್ಮರಾಗಿದ್ದು, ಗ್ರಾಮದಲ್ಲಿ ಅವರ ನೆನಪಿನಾರ್ಥವಾಗಿ ಸ್ಮಾರಕ ನಿರ್ಮಿಸಲು ಗ್ರಾಮಸ್ಥರು ಮನವಿ ಮಾಡಿದ್ದೇವು. ಆದರೆ ಇಲ್ಲಿಯವರೆಗೂ ಮಾಹಿತಿ ನೀಡಿಲ್ಲ ಎಂದು ತಹಶೀಲ್ದಾರ ಕೆ.ಗುರುಬಸವರಾಜ ಅವರನ್ನು ಗ್ರಾಮಸ್ಥರು ಪ್ರಶ್ನಿಸಿದರು. ಇದಕ್ಕೆ ಸ್ಪಂದಿಸಿದ ತಹಶೀಲ್ದಾರ ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಸ್ಮಾರಕ ನಿರ್ಮಾಣಕ್ಕೆ ಕ್ರಮವಹಿಸುವುದಾಗಿ ಭರವಸೆ ನೀಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ