ಆ್ಯಪ್ನಗರ

ಮಕ್ಕಳೊಂದಿಗೆ ಭೋಜನ-ಸಂವಾದ ನಡೆಸಿದ ಜಿಪಂ ಸಿಇಒ

ಹಾವೇರಿ: ನಗರದ ನಾಗೇಂದ್ರನಮಟ್ಟಿಯ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್‌ ಪೂರ್ವ ವಸತಿ ನಿಲಯಕ್ಕೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಲೀಲಾವತಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

Vijaya Karnataka 10 Jul 2019, 5:00 am
ಹಾವೇರಿ: ನಗರದ ನಾಗೇಂದ್ರನಮಟ್ಟಿಯ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್‌ ಪೂರ್ವ ವಸತಿ ನಿಲಯಕ್ಕೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಲೀಲಾವತಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
Vijaya Karnataka Web HVR-30 HAVERI 1 (10)


ಸೋಮವಾರ ರಾತ್ರಿ ಮೆಟ್ರಿಕ್‌ ನಂತರದ ಗಂಡು ಮಕ್ಕಳ ವಸತಿ ನಿಲಯಕ್ಕೆ ಭೇಟಿ ನೀಡಿದ ಸಿಇಓ ಕೆ. ಲೀಲಾವತಿ ಅವರು ವಿದ್ಯಾರ್ಥಿ ನಿಲಯದ ಸ್ವಚ್ಛತೆ, ಆಹಾರ ತಯಾರಿಕೆ ಗುಣಮಟ್ಟ ಹಾಗೂ ವಿದ್ಯಾರ್ಥಿಗಳಿಗೆ ಒದಗಿಸಿರುವ ಸೌಲಭ್ಯ ಹಾಗೂ ಶೈಕ್ಷ ಣಿಕ ಚಟುವಟಿಕೆಗೆ ಅಗತ್ಯ ವ್ಯವಸ್ಥೆಗಳ ಕುರಿತಂತೆ ಪರಿಶೀಲನೆ ನಡೆಸಿ, ವಿವರವಾದ ಮಾಹಿತಿ ಪಡೆದರು.

ಆಹಾರ ಗುಣಮಟ್ಟದ ಪರಿಶೀಲನೆಗೆ ವಿದ್ಯಾರ್ಥಿಗಳೊಟ್ಟಿಗೆ ಕುಳಿತು ರಾತ್ರಿ ಊಟ ಮಾಡುವುದರ ಮೂಲಕ ಆಹಾರದ ರುಚಿ, ಶುಚಿ ಹಾಗೂ ಗುಣಮಟ್ಟದ ಕುರಿತಂತೆ ಖಾತ್ರಿಪಡಿಸಿಕೊಂಡರು. ಮಕ್ಕಳೊಂದಿಗೆ ಆತ್ಮೀಯವಾಗಿ ಮಾತನಾಡಿ ವಿವರ ಪಡೆದುಕೊಂಡರು. ಓದಿನ ಬಗ್ಗೆ ಮಾರ್ಗದರ್ಶನ ಮಾಡಿದರು.

ಆರಂಭದಲ್ಲಿ ಅಳುಕಿನಿಂದಲೇ ಮಹಿಳಾ ಐ.ಎ.ಎಸ್‌.ಅಧಿಕಾರಿಯೊಂದಿಗೆ ಮಾತನಾಡಿದ ವಿದ್ಯಾರ್ಥಿಗಳು ಕೆ.ಲೀಲಾವತಿ ಅವರ ಸರಳವಾದ ನಡೆ, ವಾತ್ಸಲ್ಯ ತುಂಬಿದ ಮಾತುಗಾರಿಕೆಗೆ ಕರಗಿ ಧೈರ್ಯದಿಂದ ಮಾತಿಗೆ ತೊಡಗಿ ಸಂಭ್ರಮಿಸಿದರು. ಕೆಲವತ್ತು ವಿದ್ಯಾರ್ಥಿಗಳ ಸಿಇಒ ಜೊತೆಗೆ ಸಂವಾದ ನಡೆಸಿದರು. ವ್ಯಾಸಂಗಕ್ಕಾಗಿ ಪೋಷಕರ ತೊರೆದು ವಸತಿ ನಿಲಯದಲ್ಲಿ ವಾಸಿಸುತ್ತಿರುವ ಮಕ್ಕಳಿಗೆ ಅಕ್ಕರೆಯ ಮಾತುಗಳನ್ನಾಡುತ್ತ ಜೊತೆಯಾಗಿ ಊಟ ಸವಿದು ಮಕ್ಕಳ ಮನಗೆದ್ದ ಸಿಇಒ ಅವರ ನಡೆಗೆ ನಿಲಯದ ಸಿಬ್ಬಂದಿ ಮೆಚ್ಚುಗೆಯ ಮಾತಗಳನ್ನಾಡಿದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ