ಹಾವೇರಿ :ಮೃದು ಮಾತು ಮತ್ತು ತೀಕ್ಷಣ ವಿಮರ್ಶೆಯ ಹಿರಿಯ ಸಾಹಿತಿ ಗಿರಡ್ಡಿ ಗೋವಿಂದರಾಜ ಇಂದು ನಮ್ಮೊಂದಿಗಿಲ್ಲ. ಭೌತಿಕವಾಗಿ ಅವರು ನಮ್ಮ ಜತೆ ಇಲ್ಲ ಎನ್ನುವ ಕೊರಗು ಮತ್ತು ನೋವು ಬಿಟ್ಟರೆ ದಾರ್ಶನಿಕರ ಬೀಡು ಮತ್ತು ಏಲಕ್ಕಿ ಕಂಪಿನ ಹಾವೇರಿ ಜತೆಗಿನ ಅವರ ಸಾಂಸ್ಕೃತಿಕ ಅವಿನಾಭಾವದ ನಂಟು ಇಂದು ಹಾಗೇ ಇದೆ ಎಂದರೆ ತಪ್ಪಾಗದು.
83ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ರಾಗಿದ್ದ ಪ್ರೊ.ಚಂದ್ರಶೇಖರ ಪಾಟೀಲ (ಚಂಪಾ) ಗಿರಡ್ಡಿ ಅವರ ಆಪ್ತ ಮಿತ್ರ. ಸಮ್ಮೇಳನಾಧ್ಯಕ್ಷರಾಗಿ ನಿಯೋಜನೆಗೊಳ್ಳುತ್ತಿದ್ದಂತೆ ಗೆಳೆಯನ ಜತೆ ಸವಣೂರು ಮತ್ತು ಹತ್ತಿಮತ್ತೂರಿಗೆ ಭೇಟಿ ನೀಡಿದ್ದೇ ಹಾವೇರಿ ಜಿಲ್ಲೆಯ ಕೊನೆಯ ನಂಟು ಎನ್ನಬಹುದು. ಸವಣೂರ ಪ್ರವಾಸ ಮಂದಿರದಲ್ಲಿ ನಡೆದ ಪುಟ್ಟ ಸನ್ಮಾನ ಜತೆಗೆ ಭಾಷಣವೂ ಹಾವೇರಿ ಮಟ್ಟಿಗೆ ಕೊನೆಯದ್ದೇ!
ಸವಣೂರ ತಾಲೂಕು ಹತ್ತಿಮತ್ತೂರಲ್ಲಿ ತಡರಾತ್ರಿ ನಡೆದ ಭವ್ಯ ಸಮಾರಂಭದಲ್ಲಿ ಗೆಳೆಯ ಪ್ರೊ.ಚಂಪಾ ಕುರಿತು ಅದ್ಭುತವಾಗಿ ಮಾತನಾಡಿದ್ದರು. ಚಂಪಾ ಈಗ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದಾರೆ. ನಾಳೆ ನಾವ್ಯಾರೋ ಸಮ್ಮೇಳನಾಧ್ಯಕ್ಷ ರ ಸರದಿಯಲ್ಲಿ ಇರಬಹುದೇನೊ! ಎಂದ ಹಾಸ್ಯ ಚಟಾಕಿ ಹಾರಿಸಿದ್ದರು. 60ರ ದಶಕದಲ್ಲಿ ಹತ್ತಿಮತ್ತೂರಿನ ಬಸವಣ್ಣ ದೇವರ ಗುಡಿಯಲ್ಲಿ ನಡೆದ ಚಂಪಾ ಮದುವೆಗೆ ಡಾ.ಎಂ.ಎಂ.ಕಲಬುರ್ಗಿ, ಚನ್ನವೀರ ಕಣವಿ, ಡಾ.ಸೋಮಶೇಖರ ಇಮ್ರಾಪೂರ, ಸಿದ್ಧಲಿಂಗ ಪಟ್ಟಣಶೆಟ್ಟಿ ಮುಂತಾದವರು ಬಂದದ್ದನ್ನು ಕೂಡ ಸ್ಮರಿಸಿದ್ದರು.
ಡಾ.ಗಿರಡ್ಡಿ ಗೋವಿಂದರಾಜರಿಗೆ ಹಾವೇರಿ ನೆಲದ ಕಾದಂಬರಿಗಳ ಪಿತಾಮಹ ಗಳಗನಾಥರ ಬಗ್ಗೆ ವಿಶೇಷವಾದ ಪ್ರೀತಿಯಿತ್ತು. ಅವರ ಅಪ್ರಕಟಿತ ಸಮಗ್ರ ಸಾಹಿತ್ಯವು ಪ್ರಕಟವಾಗಬೇಕೆಂಬ ಹಂಬಲವೂ ಇತ್ತು. ಈ ಕಾರಣಕ್ಕೆ ಡಾ.ಎಂ.ಎಂ.ಕಲಬುರ್ಗಿ, ಪ್ರಕಾಶಕ ರಮಾಕಾಂತ ಜೋಶಿ, ಪ್ರೊ.ದುಶ್ಯಂತ ನಾಡಗೌಡ ಅವರೊಡನೆ ಮೂರು ನಾಲ್ಕು ಬಾರಿ ಹಾವೇರಿಗೆ ಬಂದಿದ್ದರು. ಹಾವೇರಿ ವಿದ್ಯಾನಗರದಲ್ಲಿರುವ ಗಳಗನಾಥರ ಮೊಮ್ಮಗ ವೆಂಕಟೇಶ ಗಳಗನಾಥರಿಂದ ಹಸ್ತ ಪ್ರತಿಗಳನ್ನು ಸಂಗ್ರಹಿಸಿ ತೆಗೆದುಕೊಂಡು ಹೋಗಿದ್ದರು.
ಅಗಡಿ ಆನಂದ ವನದಿಂದ ಗಳಗನಾಥರು ಪ್ರಕಟಿಸುತ್ತಿದ್ದ ಸದ್ಭೋಧ ಚಂದ್ರಿಕೆ ಪತ್ರಿಕೆಯ ಕಾರ್ಯಾಲಯಕ್ಕೂ ಭೇಟಿ ನೀಡಿ ನೂರು ವರ್ಷದ ಮುದ್ರಣ ಟ್ರೇಡಲ್ ಯಂತ್ರವನ್ನು ನೋಡಿ ಕೈಮುಗಿದು ಸಾಹಿತ್ಯಿಕ ಪ್ರೀತಿಯನ್ನು ವ್ಯಕ್ತಪಡಿಸಿದ್ದರು.
ಹತ್ತಾರು ಬಾರಿ ಹಾವೇರಿ ನಂಟಿನ ಸಹೃದಯಿ ಸಾಹಿತಿ ಡಾ.ಗಿರಡ್ಡಿ ಗೋವಿಂದರಾಜರು ನಮಗೆಲ್ಲ ಈಗ ನೆನಪು ಮಾತ್ರ ಎಂದು ಹಿರಿಯ ಸಾಹಿತಿ ಸತೀಶ ಕುಲಕರ್ಣಿ ನೆನಪಿಸಿದ್ದಾರೆ.
83ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ರಾಗಿದ್ದ ಪ್ರೊ.ಚಂದ್ರಶೇಖರ ಪಾಟೀಲ (ಚಂಪಾ) ಗಿರಡ್ಡಿ ಅವರ ಆಪ್ತ ಮಿತ್ರ. ಸಮ್ಮೇಳನಾಧ್ಯಕ್ಷರಾಗಿ ನಿಯೋಜನೆಗೊಳ್ಳುತ್ತಿದ್ದಂತೆ ಗೆಳೆಯನ ಜತೆ ಸವಣೂರು ಮತ್ತು ಹತ್ತಿಮತ್ತೂರಿಗೆ ಭೇಟಿ ನೀಡಿದ್ದೇ ಹಾವೇರಿ ಜಿಲ್ಲೆಯ ಕೊನೆಯ ನಂಟು ಎನ್ನಬಹುದು. ಸವಣೂರ ಪ್ರವಾಸ ಮಂದಿರದಲ್ಲಿ ನಡೆದ ಪುಟ್ಟ ಸನ್ಮಾನ ಜತೆಗೆ ಭಾಷಣವೂ ಹಾವೇರಿ ಮಟ್ಟಿಗೆ ಕೊನೆಯದ್ದೇ!
ಸವಣೂರ ತಾಲೂಕು ಹತ್ತಿಮತ್ತೂರಲ್ಲಿ ತಡರಾತ್ರಿ ನಡೆದ ಭವ್ಯ ಸಮಾರಂಭದಲ್ಲಿ ಗೆಳೆಯ ಪ್ರೊ.ಚಂಪಾ ಕುರಿತು ಅದ್ಭುತವಾಗಿ ಮಾತನಾಡಿದ್ದರು. ಚಂಪಾ ಈಗ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದಾರೆ. ನಾಳೆ ನಾವ್ಯಾರೋ ಸಮ್ಮೇಳನಾಧ್ಯಕ್ಷ ರ ಸರದಿಯಲ್ಲಿ ಇರಬಹುದೇನೊ! ಎಂದ ಹಾಸ್ಯ ಚಟಾಕಿ ಹಾರಿಸಿದ್ದರು. 60ರ ದಶಕದಲ್ಲಿ ಹತ್ತಿಮತ್ತೂರಿನ ಬಸವಣ್ಣ ದೇವರ ಗುಡಿಯಲ್ಲಿ ನಡೆದ ಚಂಪಾ ಮದುವೆಗೆ ಡಾ.ಎಂ.ಎಂ.ಕಲಬುರ್ಗಿ, ಚನ್ನವೀರ ಕಣವಿ, ಡಾ.ಸೋಮಶೇಖರ ಇಮ್ರಾಪೂರ, ಸಿದ್ಧಲಿಂಗ ಪಟ್ಟಣಶೆಟ್ಟಿ ಮುಂತಾದವರು ಬಂದದ್ದನ್ನು ಕೂಡ ಸ್ಮರಿಸಿದ್ದರು.
ಡಾ.ಗಿರಡ್ಡಿ ಗೋವಿಂದರಾಜರಿಗೆ ಹಾವೇರಿ ನೆಲದ ಕಾದಂಬರಿಗಳ ಪಿತಾಮಹ ಗಳಗನಾಥರ ಬಗ್ಗೆ ವಿಶೇಷವಾದ ಪ್ರೀತಿಯಿತ್ತು. ಅವರ ಅಪ್ರಕಟಿತ ಸಮಗ್ರ ಸಾಹಿತ್ಯವು ಪ್ರಕಟವಾಗಬೇಕೆಂಬ ಹಂಬಲವೂ ಇತ್ತು. ಈ ಕಾರಣಕ್ಕೆ ಡಾ.ಎಂ.ಎಂ.ಕಲಬುರ್ಗಿ, ಪ್ರಕಾಶಕ ರಮಾಕಾಂತ ಜೋಶಿ, ಪ್ರೊ.ದುಶ್ಯಂತ ನಾಡಗೌಡ ಅವರೊಡನೆ ಮೂರು ನಾಲ್ಕು ಬಾರಿ ಹಾವೇರಿಗೆ ಬಂದಿದ್ದರು. ಹಾವೇರಿ ವಿದ್ಯಾನಗರದಲ್ಲಿರುವ ಗಳಗನಾಥರ ಮೊಮ್ಮಗ ವೆಂಕಟೇಶ ಗಳಗನಾಥರಿಂದ ಹಸ್ತ ಪ್ರತಿಗಳನ್ನು ಸಂಗ್ರಹಿಸಿ ತೆಗೆದುಕೊಂಡು ಹೋಗಿದ್ದರು.
ಅಗಡಿ ಆನಂದ ವನದಿಂದ ಗಳಗನಾಥರು ಪ್ರಕಟಿಸುತ್ತಿದ್ದ ಸದ್ಭೋಧ ಚಂದ್ರಿಕೆ ಪತ್ರಿಕೆಯ ಕಾರ್ಯಾಲಯಕ್ಕೂ ಭೇಟಿ ನೀಡಿ ನೂರು ವರ್ಷದ ಮುದ್ರಣ ಟ್ರೇಡಲ್ ಯಂತ್ರವನ್ನು ನೋಡಿ ಕೈಮುಗಿದು ಸಾಹಿತ್ಯಿಕ ಪ್ರೀತಿಯನ್ನು ವ್ಯಕ್ತಪಡಿಸಿದ್ದರು.
ಹತ್ತಾರು ಬಾರಿ ಹಾವೇರಿ ನಂಟಿನ ಸಹೃದಯಿ ಸಾಹಿತಿ ಡಾ.ಗಿರಡ್ಡಿ ಗೋವಿಂದರಾಜರು ನಮಗೆಲ್ಲ ಈಗ ನೆನಪು ಮಾತ್ರ ಎಂದು ಹಿರಿಯ ಸಾಹಿತಿ ಸತೀಶ ಕುಲಕರ್ಣಿ ನೆನಪಿಸಿದ್ದಾರೆ.