ಗುಣಾತ್ಮಕ ಶಿಕ್ಷ ಣ ನೀಡಿ: ಚಕ್ರಸಾಲಿ
ರಟ್ಟೀಹಳ್ಳಿ: ಶಿಕ್ಷ ಣ ನಿಂತ ನೀರಲ್ಲ. ಅದು ಸದಾ ಪ್ರವಹಿಸುವ ವಾಹಿನಿಯಂತೆ, ಅದು ತನ್ನ ಒಡಲೊಳಗೆ ಅನೇಕ ತಂತ್ರಗಳು, ಯೋಜನೆಗಳು, ವಿಧಾನಗಳನ್ನು ಆವಿಷ್ಕರಿಸಿ ಅಳವಡಿಸಿಕೊಂಡು ಶಿಕ್ಷ ಣದ ಸಾರ್ವತ್ರಿಕರಣದ ಗುರಿಯತ್ತ ಸಾಗುತ್ತಿದೆ. ಗುಣಾತ್ಮಕ ಶಿಕ್ಷ ಣಕ್ಕಾಗಿ ನಡೆದಿರುವ ಹೊಸ ಪ್ರಯೋಗಗಳಲ್ಲಿ ನಲಿ-ಕಲಿ ಪದ್ಧತಿಯೂ ಒಂದು. ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆ ಗುರುತಿಸಿ ಗುಣಾತ್ಮಾಕ ಶಿಕ್ಷ ಣ ನೀಡಬೇಕೆಂದು ದೊಡ್ಡಗುಬ್ಬಿ ಸಿಆರ್ಪಿ ಸಿ.ಎಸ್.ಚಕ್ರಸಾಲಿ ಹೇಳಿದರು.
Vijaya Karnataka 29 Mar 2019, 5:00 am
ರಟ್ಟೀಹಳ್ಳಿ: ಶಿಕ್ಷ ಣ ನಿಂತ ನೀರಲ್ಲ. ಅದು ಸದಾ ಪ್ರವಹಿಸುವ ವಾಹಿನಿಯಂತೆ, ಅದು ತನ್ನ ಒಡಲೊಳಗೆ ಅನೇಕ ತಂತ್ರಗಳು, ಯೋಜನೆಗಳು, ವಿಧಾನಗಳನ್ನು ಆವಿಷ್ಕರಿಸಿ ಅಳವಡಿಸಿಕೊಂಡು ಶಿಕ್ಷ ಣದ ಸಾರ್ವತ್ರಿಕರಣದ ಗುರಿಯತ್ತ ಸಾಗುತ್ತಿದೆ. ಗುಣಾತ್ಮಕ ಶಿಕ್ಷ ಣಕ್ಕಾಗಿ ನಡೆದಿರುವ ಹೊಸ ಪ್ರಯೋಗಗಳಲ್ಲಿ ನಲಿ-ಕಲಿ ಪದ್ಧತಿಯೂ ಒಂದು. ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆ ಗುರುತಿಸಿ ಗುಣಾತ್ಮಾಕ ಶಿಕ್ಷ ಣ ನೀಡಬೇಕೆಂದು ದೊಡ್ಡಗುಬ್ಬಿ ಸಿಆರ್ಪಿ ಸಿ.ಎಸ್.ಚಕ್ರಸಾಲಿ ಹೇಳಿದರು.
ಇಲಾಖೆಯ ಆದೇಶದ ಮೆರೆಗೆ ನಲಿ-ಕಲಿ ಮ್ಯಾಕ್ರೊ ಅಧ್ಯಯನದ ಪ್ರಯುಕ್ತ ತಾಲೂಕಿನ ಹಿರೇಮತ್ತೂರು ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಗೆ ಭೇಟಿ ನೀಡಿದ್ದರು. ನಲಿಕಲಿ ಪದ್ದತಿಯು ಮಗುವಿಗೆ ಶಾಲಾ ಶಿಕ್ಷ ಣದ ಜತೆಗೆ ಜೀವನಕ್ಕೆ ಬೇಕಾದ ವಿವಿಧ ಮಾಲ್ಯಗಳನ್ನು ಬೆಳೆಸಲು ಸಹಕಾರಿಯಾಗಿದೆ ಎಂದ ಅವರು. ನಲಿಕಲಿ ತರಗತಿಯನ್ನು ವೀಕ್ಷಿಸಿ ಸೂಕ್ತ ಪರಿಹಾರೋಪಾಯ ಮತ್ತು ಮಾರ್ಗದರ್ಶನ ನೀಡಿ, ನಲಿಕಲಿ ತರಗತಿಯ ನಿರ್ವಹಣೆ ಮತ್ತು ಸುಧಾರಣೆ ಕುರಿತು ತರಗತಿ ಶಿಕ್ಷ ಕರಿಗೆ ಮತ್ತು ಮುಖ್ಯ ಶಿಕ್ಷ ಕರಿಗೆ ಸೂಕ್ತ ಸಲಹೆ ನೀಡಿದರು. ನಲಿ-ಕಲಿ ವಿಧಾನದ ಯಶಸ್ವಿಗೆ ಸಹಕರಿಸುವಂತೆ ಹಾಗೂ ಗುಣಾತ್ಮಕ ಶಿಕ್ಷ ಣ ನೀಡುವಂತೆ ಸಲಹೆ ನೀಡಿದರು. ಮುಖ್ಯ ಶಿಕ್ಷ ಕ ಎಚ್.ಆರ್.ಮಾದರ, ನಲಿ-ಕಲಿ ಶಿಕ್ಷ ಕಿ ಡಿ.ಎಚ್.ನಿಟ್ಟೂರ, ಜೆ.ಕೆ.ಸೋಮಕ್ಕಳವರ ಇದ್ದರು.
ಇಲಾಖೆಯ ಆದೇಶದ ಮೆರೆಗೆ ನಲಿ-ಕಲಿ ಮ್ಯಾಕ್ರೊ ಅಧ್ಯಯನದ ಪ್ರಯುಕ್ತ ತಾಲೂಕಿನ ಹಿರೇಮತ್ತೂರು ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಗೆ ಭೇಟಿ ನೀಡಿದ್ದರು. ನಲಿಕಲಿ ಪದ್ದತಿಯು ಮಗುವಿಗೆ ಶಾಲಾ ಶಿಕ್ಷ ಣದ ಜತೆಗೆ ಜೀವನಕ್ಕೆ ಬೇಕಾದ ವಿವಿಧ ಮಾಲ್ಯಗಳನ್ನು ಬೆಳೆಸಲು ಸಹಕಾರಿಯಾಗಿದೆ ಎಂದ ಅವರು. ನಲಿಕಲಿ ತರಗತಿಯನ್ನು ವೀಕ್ಷಿಸಿ ಸೂಕ್ತ ಪರಿಹಾರೋಪಾಯ ಮತ್ತು ಮಾರ್ಗದರ್ಶನ ನೀಡಿ, ನಲಿಕಲಿ ತರಗತಿಯ ನಿರ್ವಹಣೆ ಮತ್ತು ಸುಧಾರಣೆ ಕುರಿತು ತರಗತಿ ಶಿಕ್ಷ ಕರಿಗೆ ಮತ್ತು ಮುಖ್ಯ ಶಿಕ್ಷ ಕರಿಗೆ ಸೂಕ್ತ ಸಲಹೆ ನೀಡಿದರು. ನಲಿ-ಕಲಿ ವಿಧಾನದ ಯಶಸ್ವಿಗೆ ಸಹಕರಿಸುವಂತೆ ಹಾಗೂ ಗುಣಾತ್ಮಕ ಶಿಕ್ಷ ಣ ನೀಡುವಂತೆ ಸಲಹೆ ನೀಡಿದರು. ಮುಖ್ಯ ಶಿಕ್ಷ ಕ ಎಚ್.ಆರ್.ಮಾದರ, ನಲಿ-ಕಲಿ ಶಿಕ್ಷ ಕಿ ಡಿ.ಎಚ್.ನಿಟ್ಟೂರ, ಜೆ.ಕೆ.ಸೋಮಕ್ಕಳವರ ಇದ್ದರು.