ಆ್ಯಪ್ನಗರ

ಗುತ್ತಿಗೆದಾರರಿಂದಲೇ ಜಿ.ಎಂ.ಶುಗರ್ಸ್‌ ದುರ್ಬಳಕೆ

ಹಾವೇರಿ: 'ಜಿ.ಎಂ.ಶುಗರ್ಸ್‌ಗೆ ಗುತ್ತಿಗೆ ನೀಡಿದ ಸಂದರ್ಭದಲ್ಲಿಹಾಕಿದ ಷರತ್ತುಗಳನ್ನು ರೈತರು ಪಾಲಿಸುತ್ತಿದ್ದಾರೆ. ಆದರೆ ಗುತ್ತಿಗೆದಾರನೇ ಅದನ್ನು ಉಲ್ಲಂಘಿಸುತ್ತಲೇ ಬಂದಿರುವುದು ಖಂಡನೀಯ'. ಈ ಬಗ್ಗೆ ಎಚ್ಚರಿಸಬೇಕು ಎಂದು ಆಡಳಿತ ಮಂಡಳಿಗೆ ರೈತ ಮುಖಂಡ ಶಿವಾನಂದ ಗುರುಮಠ ಸೂಚಿಸಿದರು.

Vijaya Karnataka 24 Sep 2019, 5:00 am
ಹಾವೇರಿ: 'ಜಿ.ಎಂ.ಶುಗರ್ಸ್‌ಗೆ ಗುತ್ತಿಗೆ ನೀಡಿದ ಸಂದರ್ಭದಲ್ಲಿಹಾಕಿದ ಷರತ್ತುಗಳನ್ನು ರೈತರು ಪಾಲಿಸುತ್ತಿದ್ದಾರೆ. ಆದರೆ ಗುತ್ತಿಗೆದಾರನೇ ಅದನ್ನು ಉಲ್ಲಂಘಿಸುತ್ತಲೇ ಬಂದಿರುವುದು ಖಂಡನೀಯ'. ಈ ಬಗ್ಗೆ ಎಚ್ಚರಿಸಬೇಕು ಎಂದು ಆಡಳಿತ ಮಂಡಳಿಗೆ ರೈತ ಮುಖಂಡ ಶಿವಾನಂದ ಗುರುಮಠ ಸೂಚಿಸಿದರು.
Vijaya Karnataka Web 23 HAVERI 17_23


ಹಾವೇರಿ ತಾಲೂಕ ಸಂಗೂರ ಸಕ್ಕರೆ ಕಾರ್ಖಾನೆಯಲ್ಲಿಸೋಮವಾರ ನಡೆದ ವಾರ್ಷಿಕ ಸಾಮಾನ್ಯ ಸಭೆಯಲ್ಲಿಪಾಲ್ಗೊಂಡು ಮಾತನಾಡಿದ ಅವರು, ಕಾರ್ಖಾನೆ 20 ಸಾವಿರ ಷೇರುದಾರರ ಆಸ್ತಿಯಾಗಿದ್ದು, ಅದನ್ನು ಗುತ್ತಿಗೆದಾರ ದುರ್ಬಳಕೆ ಮಾಡಿಕೊಂಡಿದ್ದು, ರಾಜಕೀಯ ಉದ್ದೇಶಕ್ಕೆ ಕಾರ್ಖಾನೆಯ ಆಡಳಿತ ಮಂಡಳಿ ಬಳಸಿಕೊಳ್ಳಬಾರದು ಎಂದು ಆಡಳಿತ ಮಂಡಳಿಗೆ ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿಭಾಗವಹಿಸಿದ್ದ ಬಹುತೇಕ ಕಬ್ಬು ಬೆಳೆಗಾರರು, ಜಿ.ಎಂ.ಶುಗರ್ಸ್‌ ಕಂಪನಿ ಗುತ್ತಿಗೆ ಪಡೆದಾಗಿಂದ ರೈತರಿಗೆ ಅನ್ಯಾಯ ಮಾಡುತ್ತಲೇ ಬಂದಿದೆ. ಕಾರ್ಖಾನೆಯನ್ನೂ ದಕ್ಷಿಣ ಕರ್ನಾಟಕ ವ್ಯಾಪ್ತಿಗೆ ಗುತ್ತಿಗೆದಾರ ಸೇರ್ಪಡೆ ಮಾಡಿಸುವ ಮೂಲಕ ಅನ್ಯಾಯ ಮಾಡಿದ್ದಾರೆ. ಇದು ಉತ್ತರ ಕರ್ನಾಟಕಕ್ಕೆ ಸೇರಬೇಕು ಎಂದು ಹೈಕೋರ್ಟ್‌ ಕೂಡ ತೀರ್ಪು ನೀಡಿದೆ ಎನ್ನುವ ಬಗ್ಗೆ ಷೇರುದಾರರು ಸಭೆಗೆ ಮಾಹಿತಿ ನೀಡಿದರು.

ಸಂಗೂರ ಸಕ್ಕರೆ ಕಾರ್ಖಾನೆಯನ್ನು ದಕ್ಷಿಣ ಕರ್ನಾಟಕದ ಕಾರ್ಖಾನೆ ಎಂದು ಗುತ್ತಿಗೆದಾರ ಮಾಡಿಕೊಂಡಿದ್ದು, ಅದನ್ನು ಉತ್ತರ ಕರ್ನಾಟಕ ಎಂದು ಪರಿಗಣಿಸಿ ಠರಾವು ಪಾಸು ಮಾಡುವಂತೆ ಆಗ್ರಹಿಸಿದರು.

ರೈತ ಮುಖಂಡ ವೀರೇಶ ಮತ್ತಿಹಳ್ಳಿ ಮಾತನಾಡಿ, ಕಾರ್ಖಾನೆಗೆ ಹಿರಿಯರ ಅನುಭವ ಅವಶ್ಯಕತೆ ಇದೆ. ಆಡಳಿತ ಮಂಡಳಿ ಸಭೆ ನಡೆಸುವಾಗ ಶಿವಾನಂದ ಗುರುಮಠ, ಕೋರಿಶೆಟ್ಟರ ಹಿರಿಯನ್ನೊಳಗೊಂಡು ರೈತರ ಮುಖಂಡರನ್ನು ವಿಶೇಷ ಆಹ್ವಾನಿತರನ್ನಾಗಿ ನೇಮಿಸಬೇಕು. ಕಬ್ಬು ಬೆಳೆಗಾರರು ಯಾವುದೇ ಹೋರಾಟಗಳಿಗೆ ಎಲ್ಲಒಗ್ಗಟ್ಟಿನಿಂದ ಇರಬೇಕು ಎಂದರು.

ಕಾರ್ಖಾನೆ ಕಾರ್ಮಿಕರಿಗೆ ನೀಡಬೇಕಾದ ಬಾಕಿ ಹಣವನ್ನು ಬಡ್ಡಿ ಸಮೇತ ನೀಡಬೇಕು. ಈ ಪ್ರಸ್ತಾವಕ್ಕೆ ರೈತ ಮುಖಂಡರಾದ ಭುವನೇಶ್ವರ ಶಿಡ್ಲಾಪುರ, ರಾಜಶೇಖರ, ದೀಪಕ ಘಂಟಿಸಿದ್ದಪ್ಪನವರ ಮತ್ತಿತರರು ಆಗ್ರಹಿಸಿದರು. ಮುಖಂಡ ಎಂ.ಎಸ್‌.ಕೋರಿಶೆಟ್ಟರ ಮಾತನಾಡಿ, ಕಳೆದ ಬಾರಿ ಸಭೆಯಲ್ಲಿತೆಗೆದುಕೊಂಡ ನಿರ್ಣಯ ಮತ್ತು ಠರಾವಿನ ಸ್ಥಿತಿ ಏನು ಎಂಬುದನ್ನು ತಿಳಿಸಬೇಕು ಎಂದು ಸಭೆಗೆ ಆಗ್ರಹಿಸಿದರು.

ಆಡಳಿತ ಮಂಡಳಿ ಅಧ್ಯಕ್ಷ ಜಿ.ಎಸ್‌.ದೇಶಪಾಂಡೆ ಮಾತನಾಡಿ, ನಾವು ಆಡಳಿತ ಮಂಡಳಿ ಸ್ಥಾನಕ್ಕೆ ಆಯ್ಕೆಯಾಗಿ ಈಗ ಎರಡು ತಿಂಗಳ ಕಳೆದಿದೆ. ಗುತ್ತಿಗೆ ಬಗ್ಗೆ ಎಲ್ಲವನ್ನು ತಿಳಿಯಲು ಸ್ವಲ್ಪ ಸಮಯಾವಕಾಶ ಬೇಕು. ನಾವು ಆಯ್ಕೆಯಾದಾಗಿಂದ ಕಬ್ಬಿನ ಬಾಕಿ ಹಣವನ್ನು ನೀಡಲಾಗುತ್ತಿದೆ. ಈ ಸಭೆಯಲ್ಲಿತೆಗೆದುಕೊಂಡ ಠರಾವನ್ನು ಕಾರ್ಯಗತಗೊಳಿಸಲು ಮುಂದಾಗುತ್ತೆವೆ ಎಂದು ತಿಳಿಸಿದರು. ಸಭೆಯಲ್ಲಿಮಲ್ಲಿಕಾರ್ಜುನ ಸಾತೇನಹಳ್ಳಿ, ವ್ಯವಸ್ಥಾಪಕ ನಿರ್ದೇಶಕಿ ಶಶಿಕಲಾ ಪಾಳೇದ, ಸೇರಿದಂತೆ ನಾನಾ ರೈತ ಸಂಘಟನೆಗಳ ರೈತ ಮುಖಂಡರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ