ಸವಣೂರು: ಸಮರ್ಪಕವಾಗಿ ಉಳಿಮೆ, ಮುಂದಾಲೋಚನೆಯಿಂದ ಬಿತ್ತನೆ ಮಾಡಿ ಕಾಲಕ್ಕೆ ತಕ್ಕಂತೆ ಬೆಳವಣಿಗೆ ಹಂತದಲ್ಲಿಪೋಷಣೆ ಮಾಡಿದಾಗ ಉತ್ತಮ ಬೆಳೆ ಬೆಳೆಯಲು ಸಾಧ್ಯವಾಗುತ್ತದೆ ಎಂದು ಹತ್ತಿಮತ್ತೂರ ಗ್ರಾಮದ ರೈತ ಚಂದ್ರಶೇಖರ ಕುಂಬಾರ ಹೇಳಿದರು.
ಸವಣೂರು ತಾಲೂಕಿನ ಹತ್ತಿಮತ್ತೂರ ಗ್ರಾಮದ ಹೊಲದಲ್ಲಿಉತ್ತಮವಾಗಿ ಬೆಳೆದ ಬೆಳೆಯ ವೀಕ್ಷಣೆಗೆ ಬಂದ ವಿವಿಧ ತಾಲೂಕುಗಳ ಬೀಜ ವಿತರಕರನ್ನು ಹಾಗೂ ರೈತರನ್ನು ಉದ್ದೇಶಿಸಿ ಅವರು ಮಾತನಾಡಿದ ಅವರು, ರೈತರು ಮುಂಗಾರು ಮಳೆಗಾಲ ಹೆಚ್ಚಿನ ಪ್ರಮಾಣದಲ್ಲಿಆಗಿ ಹಾನಿಯಾಗಿದೆ ಎಂದು ಎದೆಗುಂದದೆ ಧೈರ್ಯದಿಂದ ಕಷ್ಟಗಳನ್ನು ಎದುರಿಸಿ ಗುಣಮಟ್ಟದ ಬೀಜಗಳನ್ನು ನುರಿತ ಅನುಭವಿ ಮಾರಾಟಗಾರರಿಂದ ಪಡೆದು ಸಮರ್ಪಕವಾಗಿ ಬಿತ್ತನೆಮಾಡಿ ಬೆಳೆಯನ್ನು ಬೆಳೆಯಬೇಕು.
ಇಂದಿನ ದಿನಮಾನದಲ್ಲಿಸಾಲಕ್ಕೆ ಎದೆಗುಂದಿ ಬಹಳಷ್ಟು ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಇಂತಹ ಕೃತ್ಯಗಳಿಗೆ ಮುಂದಾಗದೆ ಉಳುಮೆ ಮಾಡಿ ಫಸಲನ್ನು ಪಡೆಯಬೇಕು ಎಂದು ರೈತರಲ್ಲಿಮನವಿ ಮಾಡಿಕೊಂಡರು.
ಜಿಲ್ಲಾಕೃಷಿ ಪರಿಕರಗಳ ಮಾರಾಟಗಾರರ ಸಂಘದ ಅಧ್ಯಕ್ಷ ಮೋಹನ ಮೆಣಸಿನಕಾಯಿ ಮಾತನಾಡಿ, ಸಿಪಿ ಕಂಪನಿ ಕರ್ನಾಟಕ ರೈತರಿಗೆ ಉತ್ತಮವಾದ ಗೋವಿನಜೋಳದ ಬೀಜಗಳನ್ನು ಕಡಿಮೆ ದರದಲ್ಲಿನೀಡುವ ಮೂಲಕ ಹೆಚ್ಚಿನ ಇಳುವರಿ ಪಡೆಯುವಂತ ತಳಿಗಳನ್ನು ಸಹಕಾರಿಯಾಗಿದೆ ಎಂದರು.
ಮೃತ್ಯುಂಜಯ ಮೆಣಸಿನಕಾಯಿ, ಬಸವರಾಜ ಹುಲಗೂರ, ಬಸವರಾಜ ಗೌಳೇರ, ಸಹದೇವ ಹೊಸಮನಿ, ನಿಂಗಪ್ಪ ಕೊಳೂರ, ಬಲರಾಮ ಜ್ಯೋತಿರ್ಲಿಂಗ, ವೆಂಕಟೇಶ, ರಮೇಶ ಹೊನ್ನಳ್ಳಿ, ಸಿಪಿ ಕಂಪನಿ ಅಧಿಕಾರಿಗಳಾದ ಮೇಥಾರ, ಕಂತ್ರಾಕಾನ್, ಸಂಜೀವ ರೆಡ್ಡಿ ಸೇರಿದಂತೆ ವಿವಿಧ ಗ್ರಾಮಗಳ ರೈತರು ಉಪಸ್ಥಿತರಿದ್ದರು.
ಸವಣೂರು ತಾಲೂಕಿನ ಹತ್ತಿಮತ್ತೂರ ಗ್ರಾಮದ ಹೊಲದಲ್ಲಿಉತ್ತಮವಾಗಿ ಬೆಳೆದ ಬೆಳೆಯ ವೀಕ್ಷಣೆಗೆ ಬಂದ ವಿವಿಧ ತಾಲೂಕುಗಳ ಬೀಜ ವಿತರಕರನ್ನು ಹಾಗೂ ರೈತರನ್ನು ಉದ್ದೇಶಿಸಿ ಅವರು ಮಾತನಾಡಿದ ಅವರು, ರೈತರು ಮುಂಗಾರು ಮಳೆಗಾಲ ಹೆಚ್ಚಿನ ಪ್ರಮಾಣದಲ್ಲಿಆಗಿ ಹಾನಿಯಾಗಿದೆ ಎಂದು ಎದೆಗುಂದದೆ ಧೈರ್ಯದಿಂದ ಕಷ್ಟಗಳನ್ನು ಎದುರಿಸಿ ಗುಣಮಟ್ಟದ ಬೀಜಗಳನ್ನು ನುರಿತ ಅನುಭವಿ ಮಾರಾಟಗಾರರಿಂದ ಪಡೆದು ಸಮರ್ಪಕವಾಗಿ ಬಿತ್ತನೆಮಾಡಿ ಬೆಳೆಯನ್ನು ಬೆಳೆಯಬೇಕು.
ಇಂದಿನ ದಿನಮಾನದಲ್ಲಿಸಾಲಕ್ಕೆ ಎದೆಗುಂದಿ ಬಹಳಷ್ಟು ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಇಂತಹ ಕೃತ್ಯಗಳಿಗೆ ಮುಂದಾಗದೆ ಉಳುಮೆ ಮಾಡಿ ಫಸಲನ್ನು ಪಡೆಯಬೇಕು ಎಂದು ರೈತರಲ್ಲಿಮನವಿ ಮಾಡಿಕೊಂಡರು.
ಜಿಲ್ಲಾಕೃಷಿ ಪರಿಕರಗಳ ಮಾರಾಟಗಾರರ ಸಂಘದ ಅಧ್ಯಕ್ಷ ಮೋಹನ ಮೆಣಸಿನಕಾಯಿ ಮಾತನಾಡಿ, ಸಿಪಿ ಕಂಪನಿ ಕರ್ನಾಟಕ ರೈತರಿಗೆ ಉತ್ತಮವಾದ ಗೋವಿನಜೋಳದ ಬೀಜಗಳನ್ನು ಕಡಿಮೆ ದರದಲ್ಲಿನೀಡುವ ಮೂಲಕ ಹೆಚ್ಚಿನ ಇಳುವರಿ ಪಡೆಯುವಂತ ತಳಿಗಳನ್ನು ಸಹಕಾರಿಯಾಗಿದೆ ಎಂದರು.
ಮೃತ್ಯುಂಜಯ ಮೆಣಸಿನಕಾಯಿ, ಬಸವರಾಜ ಹುಲಗೂರ, ಬಸವರಾಜ ಗೌಳೇರ, ಸಹದೇವ ಹೊಸಮನಿ, ನಿಂಗಪ್ಪ ಕೊಳೂರ, ಬಲರಾಮ ಜ್ಯೋತಿರ್ಲಿಂಗ, ವೆಂಕಟೇಶ, ರಮೇಶ ಹೊನ್ನಳ್ಳಿ, ಸಿಪಿ ಕಂಪನಿ ಅಧಿಕಾರಿಗಳಾದ ಮೇಥಾರ, ಕಂತ್ರಾಕಾನ್, ಸಂಜೀವ ರೆಡ್ಡಿ ಸೇರಿದಂತೆ ವಿವಿಧ ಗ್ರಾಮಗಳ ರೈತರು ಉಪಸ್ಥಿತರಿದ್ದರು.