ಆ್ಯಪ್ನಗರ

ಪಿವಿಎಸ್‌ ಪಬ್ಲಿಕ್‌ ಶಾಲೆಯಲ್ಲಿ ಸದ್ಭಾವನಾ ದಿನಾಚರಣೆ

ರಟ್ಟೀಹಳ್ಳಿ: ರಟ್ಟೀಹಳ್ಳಿ ಪಟ್ಟಣದ ಪಿವಿಎಸ್‌ ಪಬ್ಲಿಕ್‌ ಶಾಲೆಯ ಆವರಣದಲ್ಲಿ ಸದ್ಭಾವನಾ ದಿನಾಚರಣೆ ಆಚರಿಸಲಾಯಿತು.

Vijaya Karnataka 27 Aug 2019, 5:00 am
ರಟ್ಟೀಹಳ್ಳಿ: ರಟ್ಟೀಹಳ್ಳಿ ಪಟ್ಟಣದ ಪಿವಿಎಸ್‌ ಪಬ್ಲಿಕ್‌ ಶಾಲೆಯ ಆವರಣದಲ್ಲಿ ಸದ್ಭಾವನಾ ದಿನಾಚರಣೆ ಆಚರಿಸಲಾಯಿತು.
Vijaya Karnataka Web HVR-26 RATTIHALLI  3


ಈ ವೇಳೆ ಮುಖ್ಯ ಶಿಕ್ಷ ಕಿ ಕು. ರಶ್ಮಿ ಎ.ಎಂ. ಮಾತನಾಡಿ, ದೇಶಭಕ್ತಿಯೇ ನಿಜವಾದ ರಾಷ್ಟ್ರೀಯತೆ ಇಂದಿನ ಎಲ್ಲ ಹಿಂಸೆಗಳಿಗೆ ಸಂಕುಚಿತ ಮನೋಭಾವವೇ ಮೂಲ ಬೇರು. ಆದ್ದರಿಂದ ಶಿಕ್ಷ ಣ ಸಂಸ್ಥೆಗಳು ಸಂಸ್ಕಾರ ಬೆಳೆಸುವ ತಾಣಗಳಾಗಬೇಕು ಮತ್ತು ಪ್ರಶಿಕ್ಷ ಣಾರ್ಥಿಗಳು ಜಾತ್ಯಾತೀತ ವ್ಯಕ್ತಿಗಳಾಗಬೇಕು. ಭಾರತ ಜಾತ್ಯಾತೀತ ರಾಷ್ಟ್ರ. ಆದರೆ, ಇಂದು ಜಾತೀಯತೆ ಎಂಬುದು ಭಾರತೀಯ ಸಮಾಜಕ್ಕೆ ಅಂಟಿದ ಶಾಪ. ಈ ಶಾಪ ವಿಮೋಚನೆಗೆ ಶಿಕ್ಷ ಕರು ಮತ್ತು ಶಿಕ್ಷ ಣ ಸಂಸ್ಥೆಗಳು, ನಾವೆಲ್ಲ ಒಂದು ನಾವೆಲ್ಲ ಬಂಧು ಎಂಬ ವಿಶಾಲ ಮನೋಭಾವನೆ ಬೆಳೆಸಬೇಕಾಗಿದೆ ಎಂದು ಹೇಳಿದರು.

ಸಂಸ್ಥೆಯ ಪ್ರದಾನ ಕಾರ್ಯದರ್ಶಿ ಹರೀಶಕುಮಾರ ಪವಾರ ವಿದ್ಯಾರ್ಥಿಗಳಿಗೆ ಸದ್ಭಾವನಾ ದಿನಾಚರಣೆಯ ಪ್ರತಿಜ್ಞಾ ವಿಧಿ ಬೋಧಿಸಿದರು. ಸಂಸ್ಥೆಯ ಆಡಳಿತಾಧಿಕಾರಿ ಪರಶುರಾಮ ಪವಾರ ಸಲಹಾ ಸಮಿತಿ ಅಧ್ಯಕ್ಷ ನಾಗರಾಜ ವರ್ಣೇಕರ್‌, ಅಧ್ಯಕ್ಷ ಎಚ್‌.ಬಿ.ದೊಡ್ಡತಮ್ಮಣ್ಣನವರ ಮಾತನಾಡಿದರು. ಶಿಕ್ಷ ಕರಾದ ವೀರೇಶ ಹೊಸಬೆಳ್ಳೂರ, ಕಲ್ಪನಾ ಹೆಗಡೆ, ನಗೀನಾಬಾನು, ಸುನೈನಾ, ಮಧು ಬೆನ್ನೂರ, ಸಲ್ಮಾ, ಶಹಮದ್‌ ಹಾಜರಿದ್ದರು. ವೀರೇಶ ಹೊಸಬೆಳ್ಳೂರ ಸ್ವಾಗತಿಸಿದರು, ನಗೀನಾಭಾನು ನಿರೂಪಿಸಿದರು. ಕಲ್ಪನಾ ಹೆಗಡೆ ವಂದಿಸಿದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ