ಆ್ಯಪ್ನಗರ

ಉತ್ತಮ ಮಳೆ, ಕೃಷಿಗೆ ಚೈತನ್ಯ

ಹಾವೇರಿ: ಜಿಲ್ಲಾದ್ಯಂತ ಸೋಮವಾರ ರಾತ್ರಿ, ಮಂಗಳವಾರ ಬೆಳಗಿನ ಜಾವ ಉತ್ತಮ ಮಳೆ ಸುರಿದಿದ್ದು, ರೈತರ ಮೂಗದಲ್ಲಿಸಂತಸ ಮೂಡಿಸಿದೆ.

Vijaya Karnataka 4 Sep 2019, 5:00 am
ಹಾವೇರಿ: ಜಿಲ್ಲಾದ್ಯಂತ ಸೋಮವಾರ ರಾತ್ರಿ, ಮಂಗಳವಾರ ಬೆಳಗಿನ ಜಾವ ಉತ್ತಮ ಮಳೆ ಸುರಿದಿದ್ದು, ರೈತರ ಮೂಗದಲ್ಲಿಸಂತಸ ಮೂಡಿಸಿದೆ.
Vijaya Karnataka Web good rain the spirit of agriculture
ಉತ್ತಮ ಮಳೆ, ಕೃಷಿಗೆ ಚೈತನ್ಯ


ಜಿಲ್ಲೆಯಲ್ಲಿ ಸೋಮವಾರ ಒಟ್ಟು 37.9 ಮಿ.ಮೀ. ಮಳೆಯಾಗಿದ್ದು, ಈ ಪೈಕಿ ಹಾನಗಲ್ಲನಲ್ಲಿ10.8 ಮಿ.ಮೀ. ಮಳೆ ಬೀಳುವ ಮೂಲಕ ಅತಿ ಹೆಚ್ಚು ಮಳೆಯಾಗಿದೆ. ರಾಣೇಬೆನ್ನೂರ 2.4 ಮಿ.ಮೀ. ಮಳೆ ಬೀಳುವ ಮೂಲಕ ಅತಿ ಕಡಿಮೆ ಮಳೆಯಾಗಿದೆ. ಹಿರೇಕೆರೂರು, ಬ್ಯಾಡಗು ತಾಲೂಕಿನಲ್ಲಿ6.2 ಮಿ.ಮೀ. ಮಳೆಯಾಗಿದೆ. ಹಾವೇರಿ 4.6. ಮಿ.ಮೀ. ಶಿಗ್ಗಾವಿ 4.4 ಮಿ.ಮೀ., ಸವಣೂರ ತಾಲೂಕಿನಲ್ಲಿ3.5 ಮಿ.ಮೀ. ಮಳೆಯಾಗಿದೆ.

ಮಂಗಳವಾರ 48.3 ಮಿ.ಮೀ. ಮಳೆಯಾಗಿದ್ದು ಆ ಪೈಕಿ ಹಾನಗಲ್ಲನಲ್ಲಿ14.3 ಮಿ.ಮೀ., ಹಾವೇರಿ 12.2 ಮಿ.ಮೀ., ಅತಿ ಹೆಚ್ಚು ಮಳೆಯಾಗಿದೆ. ರಾಣೇಬೆನ್ನೂರ ಮತ್ತು ಸವಣೂರ ಅತಿ ಕಡಿಮೆ ಮಳೆಯಾಗಿದೆ. ಹಿರೇಕೆರೂರ, ಶಿಗ್ಗಾವಿ, ಬ್ಯಾಡಗಿ ಉತ್ತಮ ಮಳೆಯಾಗಿದೆ.

ಮಂಗಳವಾರ ಬೆಳಗಿನಿಂದ ಜಿಟಿ ಜಿಟಿ ಮಳೆ ಮುಂದುವರೆದು ಮಧ್ಯಾಹ್ನದ ವೇಳೆ ಸ್ವಲ್ಪ ಬಿಸಿಲಿನ ಛಾಯೆ ಮೂಡಿತ್ತು. ಸಂಜೆಯಾಗುತ್ತಿದ್ದಂತೆ ಜಿಲ್ಲಾದ್ಯಂತ ಮೋಡಕವಿದ ವಾತಾವರಣವಿದ್ದು ಮಳೆ ಬರುವ ಸಾಧ್ಯತೆ ಹೆಚ್ಚಾಗಿದೆ. ಈ ಜಿಟಿ ಜಿಟಿ ಮಳೆಗೆಯಿಂದ ರೈತರ ಸ್ವಲ್ಪ ಚೈತನ್ಯ ಉಂಟಾಗಿದ್ದು, ನೆರೆಯಿಂದ ಹಾಳಾಗಿದ್ದ ಭೂಮಿಯನ್ನು ಮರಳಿ ಉಳುಮೆ ಮಾಡಿ ಬಿತ್ತನೆಯ ಕಾರ್ಯದಲ್ಲಿರೈತರು ತೊಡಗಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ