ಆ್ಯಪ್ನಗರ

ಪದವೀಧರ ಚುನಾವಣೆ ಅಭಿಪ್ರಾಯ ಸಂಗ್ರಹ

ಹಾವೇರಿ: ನಗರದ ಬಿಜೆಪಿ ಜಿಲ್ಲಾಕಾರ್ಯಾಲಯದಲ್ಲಿಮಂಗಳವಾರ ಪದವೀಧರ ವಿಧಾನ ಪರಿಷತ್‌ ಚುನಾವಣೆಯ ಅಭಿಪ್ರಾಯ ಸಂಗ್ರಹಣೆ ಅಭಿಯಾನ ಸಭೆ ನಡೆಯಿತು.

Vijaya Karnataka 17 Oct 2019, 5:00 am
ಹಾವೇರಿ: ನಗರದ ಬಿಜೆಪಿ ಜಿಲ್ಲಾಕಾರ್ಯಾಲಯದಲ್ಲಿಮಂಗಳವಾರ ಪದವೀಧರ ವಿಧಾನ ಪರಿಷತ್‌ ಚುನಾವಣೆಯ ಅಭಿಪ್ರಾಯ ಸಂಗ್ರಹಣೆ ಅಭಿಯಾನ ಸಭೆ ನಡೆಯಿತು.
Vijaya Karnataka Web graduate election opinion
ಪದವೀಧರ ಚುನಾವಣೆ ಅಭಿಪ್ರಾಯ ಸಂಗ್ರಹ


ಈ ವೇಳೆ ರಾಜ್ಯ ಉಪಾಧ್ಯಕ್ಷ ಎಂ.ಬಿ. ಭಾನುಪ್ರಕಾಶ ಮಾತನಾಡಿ, ಮುಂದಿನ ವರ್ಷ ವಿಧಾನ ಪರಿಷತ್‌ ಪದವಿಧರರ ಚುನಾವಣೆ ನಡೆಯಲಿದ್ದು, ಚುನಾವಣೆ ಕುರಿತು ಕಾರ್ಯಕರ್ತರ, ಮುಖಂಡರ ಅಭಿಪ್ರಾಯವನ್ನು ಸಂಗ್ರಹಣೆ ಮಾಡಿಕೊಂಡು ರಾಜ್ಯ ಕಾರ್ಯಾಲಯಕ್ಕೆ ಕಳಿಸಲಾಗುತ್ತದೆ ಎಂದರು.

ಟಿಕೆಟ್‌ ಆಕಾಂಕ್ಷಿಗಳ ಪಟ್ಟಿ ತಯಾರಿಸುವ ಕುರಿತು ಪಕ್ಷದ ಕಾರ್ಯಕರ್ತರೊಂದಿಗೆ ವಿಧಾನಸಭಾವಾರು ಪ್ರತ್ಯೇಕವಾಗಿ ಚರ್ಚಿಸಿದರು. ಮುಂಬರುವ ಪಶ್ಚಿಮ ಪದವೀಧರ ಚುನಾವಣೆಯಲ್ಲಿಮತ ಚಲಾಯಿಸಲು ಪದವಿ ಮುಗಿಸಿರುವ ಹೆಚ್ಚು ಜನರಿಂದ ಮತದಾನಕ್ಕೆ ಅರ್ಜಿ ಸಲ್ಲಿಸಲು ಬೂತ್‌ ಮಟ್ಟದ ಕಾರ್ಯಕರ್ತರು ಕಾರ್ಯನಿರ್ವಹಿಸಬೇಕು ಎಂದು ಕರೆ ನೀಡಿದರು.

ರಾಜ್ಯ ಉಪಾಧ್ಯಕ್ಷ ಮಾ.ನಾಗರಾಜ ಮಾತನಾಡಿ, ಮುಂಬರುವ ಚುನಾವಣೆಯಲ್ಲಿಪಕ್ಷದ ಕಾರ್ಯಕರ್ತರು ಒಟ್ಟಾಗಿ ಕೆಲಸ ಮಾಡುವ ಮೂಲಕ ಪಕ್ಷದ ಅಭ್ಯರ್ಥಿ ಗೆಲ್ಲಿಸಬೇಕು. ಚುನಾವಣೆಯಲ್ಲಿನಾವು ವ್ಯಕ್ತಿಯನ್ನು ನೋಡಿ ಮತ ಹಾಕುವ ಬದಲು ಪಕ್ಷಕ್ಕೆ ಆದ್ಯತೆ ಕೊಟ್ಟು ಪಕ್ಷಕ್ಕೆ ಮತ ಚಲಾಯಿಸುವ ಮನೋಭಾವ ಹೊಂದಬೇಕು ಎಂದರು.

ಜಿಲ್ಲಾಧ್ಯಕ್ಷ ಶಿವರಾಜ ಸಜ್ಜನರ ಮಾತನಾಡಿ, ಪಶ್ಚಿಮ ಪದವೀಧರ ಕ್ಷೇತ್ರದಲ್ಲಿಪಕ್ಷದ ಕುರಿತು ಸಾಕಷ್ಟು ಒಲವಿದೆ ಹಾಗೂ ನಮ್ಮ ಭಾಗದಲ್ಲಿಲಕ್ಷಕಿಂತ ಅಧಿಕ ಜನರು ಪದವೀಧರರಿದ್ದಾರೆ. ಈ ಚುನಾವಣೆಯಲ್ಲಿನಾವು ಪ್ರತಿ ಮನೆ ಮನೆಗೆ ತಲುಪಿ ಪದವಿ ಮುಗಿಸಿರುವ ವ್ಯಕ್ತಿಗಳನ್ನು ಮತದಾನಕ್ಕೆ ಅರ್ಜಿ ಸಲ್ಲಿಸಲು ವಿನಂತಿಸಿಬೇಕು. ಈ ಚುನಾವಣೆಯಲ್ಲಿಬಿಜೆಪಿಗೆ ಮತ ಚಲಾಯಿಸಿ ಪಕ್ಷದ ಅಭ್ಯರ್ಥಿಯನ್ನು ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಬೇಕು ಎಂದರು.

ವೇದಿಕೆಯಲ್ಲಿ ಶಾಸಕ ವಿರುಪಾಕ್ಷಪ್ಪ ಬಳ್ಳಾರಿ, ಮಾಜಿ ಶಾಸಕರಾದ ಯು.ಬಿ. ಬಣಕಾರ, ಸುರೇಶಗೌಡ್ರ ಪಾಟೀಲ, ಡಿ.ಎಂ. ಸಾಲಿ, ಮಾಜಿ ಸಂಸದ ಮಂಜುನಾಥ ಕುನ್ನೂರ, ಜಿಲ್ಲಾಪ್ರಧಾನ ಕಾರ್ಯದರ್ಶಿ ಸಿದ್ದರಾಜ ಕಲಕೋಟಿ, ಶಿವಾನಂದ ಮ್ಯಾಗೇರಿ, ಲಿಂಗರಾಜ ಚಪ್ಪರದಳ್ಳಿ, ರಾಜ್ಯ ಎಸ್‌.ಟಿ. ಮೋರ್ಚಾ ಉಪಾಧ್ಯಕ್ಷ ಮಂಜುನಾಥ ಓಲೇಕಾರ ಸೇರಿದಂತೆ ಜಿಲ್ಲೆಮತ್ತು ವಿವಿಧ ಮಂಡಲಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ