ಆ್ಯಪ್ನಗರ

ಹಾವೇರಿಗೂ ಬಂತು ಎಚ್‌ಎಸ್‌ಆರ್‌ಪಿ

ಹಾವೇರಿ : ಬೈಕ್‌, ಕಾರ್‌ ಸೇರಿದಂತೆ 1 ಏಪ್ರೀಲ್‌ 2019 ರ ನಂತರ ತಯಾರಿಸಲಾಗಿರುವ ಎಲ್ಲ ತರಹದ ವಾಹನಗಳಿಗೆ ಎಚ್‌ಎಸ್‌ಆರ್‌ಪಿ ನಂಬರ್‌ ಅಳವಡಿಕೆ ಕಡ್ಡಾಯ. ಈ ನಂಬರ್‌ ಇಲ್ಲದ ವಾಹನಗಳು ಬೀದಿಗೆ ಇಳಿಯಲು ಅವಕಾಶ ಇಲ್ಲವೇ ಇಲ್ಲ. ಇಂಥ ವಿನೂತನ ವ್ಯವಸ್ಥೆ ಈಗ ಹಾವೇರಿಯಲ್ಲೂ ಕಾಲಿಟ್ಟಿದೆ. ಈ ವ್ಯವಸ್ಥೆ ನಿಜಕ್ಕೂ ಅಚ್ಚರಿ ಮತ್ತು ಪ್ರಶಂಸೆಗೂ ಪಾತ್ರವಾಗಿದೆ.

Vijaya Karnataka 10 May 2019, 5:00 am
ಹಾವೇರಿ : ಬೈಕ್‌, ಕಾರ್‌ ಸೇರಿದಂತೆ 1 ಏಪ್ರೀಲ್‌ 2019 ರ ನಂತರ ತಯಾರಿಸಲಾಗಿರುವ ಎಲ್ಲ ತರಹದ ವಾಹನಗಳಿಗೆ ಎಚ್‌ಎಸ್‌ಆರ್‌ಪಿ ನಂಬರ್‌ ಅಳವಡಿಕೆ ಕಡ್ಡಾಯ. ಈ ನಂಬರ್‌ ಇಲ್ಲದ ವಾಹನಗಳು ಬೀದಿಗೆ ಇಳಿಯಲು ಅವಕಾಶ ಇಲ್ಲವೇ ಇಲ್ಲ. ಇಂಥ ವಿನೂತನ ವ್ಯವಸ್ಥೆ ಈಗ ಹಾವೇರಿಯಲ್ಲೂ ಕಾಲಿಟ್ಟಿದೆ. ಈ ವ್ಯವಸ್ಥೆ ನಿಜಕ್ಕೂ ಅಚ್ಚರಿ ಮತ್ತು ಪ್ರಶಂಸೆಗೂ ಪಾತ್ರವಾಗಿದೆ.
Vijaya Karnataka Web haveri came to hsrp
ಹಾವೇರಿಗೂ ಬಂತು ಎಚ್‌ಎಸ್‌ಆರ್‌ಪಿ


ಏನಿದು ಎಚ್‌ಎಸ್‌ಆರ್‌ಪಿ?:
ಎಚ್‌ಎಸ್‌ಆರ್‌ಪಿ ಎಂದರೆ ಹೈ ಸೆಕ್ಯೂರ್ಡ್‌ ರಿಜಿಸ್ಪ್ರೇಷನ್‌ ನಂಬರ್‌ ಪ್ಲೇಟ್‌. ಜಿಪಿಎಸ್‌ ತಂತ್ರಾಂಶ ಅಳವಡಿಸಿಕೊಂಡಿರುವ ನಂಬರ್‌ ಪ್ಲೇಟ್‌. ವಾಹನ ಸವಾರರು ಮುಂಬರುವ ದಿನಗಳಲ್ಲಿ ನಿರಾತಂಕ ಮತ್ತು ನೆಮ್ಮದಿಯಿಂದ ವಾಹನ ಚಲಾವಣೆ, ನಿಲುಗಡೆಗೆ ಪೂರಕ ವಾತಾವರಣಕ್ಕೆ ಹೇಳಿ ಮಾಡಿಸಿದ ವ್ಯವಸ್ಥೆ ಇದಾಗಿದೆ.

ಅಗತ್ಯ ಏಕೆ? : ವಾಹನ ಕಳ್ಳತನ, ಅಪಘಾತ ಘಟನಾವಳಿಗಳಿಗೆ ಹಳ್ಳಿ, ಪಟ್ಟಣ, ನಗರ, ಮಹಾನಗರ ಎನ್ನುವ ಬೇಧವಿಲ್ಲ. ಇಂಥ ಪ್ರಸಂಗಗಳು ನಿತ್ಯವೂ ಒಂದಿಲ್ಲೊಂದು ಪ್ರದೇಶದಲ್ಲಿ ಇದ್ದೇ ಇದೆ. ವಾಹನಗಳಿಗೆ ವಿಮೆ ಮಾಡಿಸುವಲ್ಲೂ ಮೋಸ ಮಾಡುವ, ಹಳೆಯ ಗಾಡಿಯನ್ನೇ ಬಣ್ಣ ಹೊಡಿಸುವ ಜತೆಗೆ ತಕ್ಷಣ ಖರೀದಿಸಲು ಮುಂದಾಗುವ ರೀತಿಯಲ್ಲಿ ಸಿದ್ಧಪಡಿಸಿ ಟೋಪಿ ಹಾಕುವ, ಆನ್‌ಲೈನ್‌ ಮೂಲಕ ವಾಹನ ಮಾರಾಟ ಮಾಡಿ ಮೋಸ ಮಾಡುವ ಘಟನೆಗಳಿಗೂ ಲೆಕ್ಕವಿಲ್ಲ. ಈ ಎಲ್ಲ ಅನ್ಯಾಯ, ಅಕ್ರಮಗಳನ್ನು ತಡೆಯುವ ಜತೆಗೆ ಅಪಘಾತ-ಕಳ್ಳತನಕ್ಕೆ ಬ್ರೇಕ್‌ ಹಾಕುವಲ್ಲಿ ಈ ನಂಬರ್‌ ಪ್ಲೇಟ್‌ ಅಗತ್ಯ ಎನ್ನಲಾಗುತ್ತಿದೆ.

ಎಲ್ಲೆಲ್ಲಿ ಜಾರಿ? :
ಈ ವ್ಯವಸ್ಥೆ ಕೇವಲ ಬೆರಳೆಣಿಕೆ ಪ್ರದೇಶಕ್ಕೆ ಮಾತ್ರ ಸೀಮಿತವಾಗಿರದೇ ದೇಶದೆಲ್ಲೆಡೆ ಅನ್ವಯವಾಗಿದೆ. 1 ಏಪ್ರೀಲ್‌ 2019 ರ ನಂತರ ತಯಾರಿಸಲಾಗಿರುವ ಎಲ್ಲ ವಾಹನಗಳಿಗೂ ತಯಾರಿಕಾ ಕಂಪನಿಗಳು ಮತ್ತು ಡೀಲರ್‌ ತಮ್ಮ ವಾಹನಗಳಿಗೆ ಎಚ್‌ಎಸ್‌ಆರ್‌ಪಿ ನಂಬರ್‌ ಪ್ಲೇಟ್‌ ಅಳವಡಿಸುವುದನ್ನು ಕೇಂದ್ರ ಸರಕಾರ ಕಡ್ಡಾಯಗೊಳಿಸಿದೆ. ಈ ನಂಬರ್‌ ಪ್ಲೇಟ್‌ ಇಲ್ಲದ ವಾಹನಗಳ ನೋಂದಣಿ ಮಾಡಲು ಅವಕಾಶ ಇಲ್ಲದಂತೆ ಸಾಫ್ಟ್‌ವೇರ್‌ (ತಂತ್ರಾಂಶ) ಜಾರಿಗೊಂಡಿರುವ ಕಾರಣಕ್ಕೆ ಎಲ್ಲರಿಗೂ ಇದು ಅನಿವಾರ್ಯ ಮತ್ತು ಅಗತ್ಯವಾಗಿದೆ.

ಹಾವೇರಿಯಲ್ಲಿ ಜಾರಿ: ಈ ವ್ಯವಸ್ಥೆ ಜಾರಿ ಕುರಿತಂತೆ ಜಿಲ್ಲಾ ಪ್ರಾದೇಶಿಕ ಸಾರಿಗೆ ಇಲಾಖೆಗೆ ಸುತ್ತೋಲೆ ಬಂದಿಲ್ಲ. ಈ ತಂತ್ರಾಂಶ ಹೊಂದಿರುವ ನಂಬರ್‌ ಪ್ಲೇಟ್‌ಗಳನ್ನು ಸಿದ್ಧಪಡಿಸಿ ಮಾರಾಟ ಮಾಡಿರುವ ಮಾಹಿತಿ ಪತ್ರಿಕೆಗೆ ಲಭ್ಯವಾಗಿದೆ. ನಗರದ ಬಹದ್ಧೂರ ದೇಸಾಯಿ ಹಿರೋ ಶೋರೂಂ ಡೀಲರ್‌ ತಮ್ಮಲ್ಲಿರುವ ಹೊಸ ವಾಹನಗಳಿಗೆ ಈ ಎಚ್‌ಎಸ್‌ಆರ್‌ಪಿ ಪ್ಲೇಟ್‌ಗಳನ್ನು ಅಳವಡಿಸುತ್ತಿರುವ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ.

ಒಟ್ಟಿನಲ್ಲಿ ಜಿಪಿಎಸ್‌ ತಂತ್ರಾಂಶವನ್ನು ಒಳಗೊಂಡಿರುವ ವಾಹನ ಖರೀದಿಸುವ ಮಾಲಿಕರಿಗೆ ಈ ಹೊಸ ವ್ಯವಸ್ಥೆ ಭವಿಷ್ಯದ ದೃಷ್ಟಿಯಿಂದ ನೆಮ್ಮದಿ, ನಿರಾತಂಕ ಚಾಲನೆಗೆ ಅನುಕೂಲ ಕಲ್ಪಿಸಲಿದೆ. ಈಗಾಗಲೇ ಖರೀದಿಸಿರುವ ವಾಹನಗಳ ಗತಿ ಏನು? ಎನ್ನುವುದಕ್ಕೆ ಕೇಂದ್ರ ಸರಕಾರವೇ ಉತ್ತರಿಸಬೇಕಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ