ಆ್ಯಪ್ನಗರ

'ತಿಹಾರ್‌ ಜೈಲಲ್ಲಿ ರಾಜ್ಯದ ಕೀರ್ತಿ ಪತಾಕೆ ಹಾರಿಸಿದ ಡಿಕೆಶಿ'! ಬಿಸಿ ಪಾಟೀಲ್‌ ತಿರುಗೇಟು

‘ಬಿ. ಸಿ. ಪಾಟೀಲ್‌ ನೋಟು, ಬನ್ನಿಕೋಡರಿಗೆ ವೋಟು ಅಂತ ಹೇಳೋಕೆ ಬೆಂಗಳೂರಿನಿಂದ ಹೆಲಿಕಾಪ್ಟರ್‌ನಲ್ಲಿ ಕ್ಷೇತ್ರಕ್ಕೆ ಬರಬೇಕಾಗಿತ್ತಾ? ಡಿಕೆಶಿ ಬಂದಿದ್ದೇ ಆಮಿಷವೊಡ್ಡುವುದಕ್ಕೆ’ - ಅನರ್ಹ ಬಿ. ಸಿ. ಪಾಟೀಲ್ ಆರೋಪ

Vijaya Karnataka Web 2 Dec 2019, 7:51 pm
ಹಿರೇಕೆರೂರು (ಹಾವೇರಿ): ತಿಹಾರ್‌ ಜೈಲಿನಲ್ಲಿ ಕರ್ನಾಟಕ ರಾಜ್ಯದ ಕೀರ್ತಿ ಪತಾಕೆ ಹಾರಿಸಿದ್ದ ಮಾಜಿ ಸಚಿವ ಡಿ.ಕೆ.ಶಿವಕುಮಾರ್‌, ಈಗ ಆಚಾರ-ವಿಚಾರ ಹೇಳುವಷ್ಟು ದೊಡ್ಡವರಾದ್ರಾ ಎಂದು ಬಿಜೆಪಿ ಅಭ್ಯರ್ಥಿ ಬಿ.ಸಿ. ಪಾಟೀಲ್‌ ತಿರುಗೇಟು ನೀಡಿದ್ದಾರೆ.
Vijaya Karnataka Web haveri hirekerur bjp candidate bc patil slams congress leader dk shivakumar
'ತಿಹಾರ್‌ ಜೈಲಲ್ಲಿ ರಾಜ್ಯದ ಕೀರ್ತಿ ಪತಾಕೆ ಹಾರಿಸಿದ ಡಿಕೆಶಿ'! ಬಿಸಿ ಪಾಟೀಲ್‌ ತಿರುಗೇಟು


ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಬಿ. ಸಿ. ಪಾಟೀಲ್‌ ನೋಟು, ಬನ್ನಿಕೋಡರಿಗೆ ವೋಟು ಅಂತ ಹೇಳೋಕೆ ಬೆಂಗಳೂರಿನಿಂದ ಹೆಲಿಕಾಪ್ಟರ್‌ನಲ್ಲಿ ಕ್ಷೇತ್ರಕ್ಕೆ ಬರಬೇಕಾಗಿತ್ತಾ? ಡಿಕೆಶಿ ಬಂದಿದ್ದೇ ಆಮಿಷವೊಡ್ಡುವುದಕ್ಕೆ’ ಎಂದು ಪಾಟೀಲ್ ಕಿಡಿಕಾರಿದರು.

‘ಡಿಕೆಶಿ ಈ ಹಿಂದೆ ಏನಾಗಿದ್ದರು? ಈಗ ಏನಾಗಿದ್ದಾರೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ಡಿಕೆಶಿ ಸಚಿವರಾಗಿದ್ದಾಗ ಯಾವತ್ತೂ ಶಾಸಕರನ್ನು ಪ್ರೀತಿಯಿಂದ ಮಾತನಾಡಿಸಿಲ್ಲ. ದರ್ಪದಿಂದಲೇ ವರ್ತಿಸುತ್ತಿದ್ದರು. ಈಗಲೂ ಅದೇ ರೀತಿ ದರ್ಪ ತೋರುತ್ತಿದ್ದಾರೆ’ ಎಂದು ಬಿ.ಸಿ. ಪಾಟೀಲ್ ಹರಿಹಾಯ್ದರು.

'ಅನರ್ಹರನ್ನು ಗೆಲ್ಲಿಸಲು ಯಡಿಯೂರಪ್ಪ ಪ್ರಾಣ ತ್ಯಾಗಕ್ಕೂ ರೆಡಿ'! ಕುಮಾರಸ್ವಾಮಿ ವ್ಯಂಗ್ಯ

ಕಪಟ ನಾಟಕ: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರದ್ದು ಕಪಟ ನಾಟಕ ಎಂದು ಜರಿದ ಬಿ. ಸಿ. ಪಾಟೀಲ್, ಈ ನಾಟಕಕ್ಕೆ ಏನು ಹೆಸರಿಡಬೇಕು ಅಂತ ಗೊತ್ತಾಗುತ್ತಿಲ್ಲ ಎಂದರು. ಸಿದ್ದರಾಮಯ್ಯ ನಾನು ಮುಖ್ಯಮಂತ್ರಿ ಅಂತಾರೆ, ಮಲ್ಲಿಕಾರ್ಜುನ ಖರ್ಗೆ ಹಾಗೂ ಎಚ್‌.ಡಿ.ದೇವೇಗೌಡ್ರು ಒಂದಾಗಿದ್ದೇವೆ ಅಂತಾರೆ. ಡಿಕೆಶಿ ಭ್ರಮೆಯಲ್ಲಿಇದ್ದಂತೆ ಕಾಣುತ್ತದೆ. ಯು.ಬಿ.ಬಣಕಾರ ಮತ್ತು ನನ್ನ ಮಧ್ಯ ಜಗಳ ಹಚ್ಚಿ ಲಾಭ ತೆಗೆದುಕೊಳ್ಳಲು ಮುಂದಾದಂತೆ ಕಾಣುತ್ತದೆ. ತಾಲೂಕಿನ ಅಭಿವೃದ್ಧಿಗಾಗಿ ನಾವಿಬ್ಬರೂ ಜಂಟಿಯಾಗಿ ಮತ ಕೇಳಿದ್ದೇವೆ. ಇಲ್ಲಿ ಮೂರನೇ ಶಕ್ತಿ ಇಲ್ಲ’ ಎಂದು ಬಿ.ಸಿ. ಪಾಟೀಲ್ ತಿಳಿಸಿದರು.

‘ಸಫರ್‌ ಆಗಿದ್ದು ಸಾಕು. ಇನ್ನು ಯಾರೊಂದಿಗೂ ಮೈತ್ರಿ ಇಲ್ಲ’ - ದೇವೇಗೌಡ

ಗರಂ ಆದ ಬಿಸಿಪಿ: ಮಾಜಿ ಶಾಸಕರ ಹನಿಟ್ರ್ಯಾಪ್‌ ಬಗ್ಗೆ ಕೇಳಿದ ಪ್ರಶ್ನೆಗೆ ಕೆಂಡಾಮಂಡಲವಾದ ಬಿ. ಸಿ. ಪಾಟೀಲ್, ‘ಕುಮಾರಸ್ವಾಮಿಗೆ ನಾಲಿಗೆ ಮೇಲೆ ಹಿಡಿತವಿಲ್ಲ. ಅವರ ಇತಿಹಾಸ ಏನು ಅಂತಾ ಎಲ್ಲರಿಗೂ ಗೊತ್ತಿದೆ. ಎಚ್ಡಿಕೆ ತಮ್ಮ ಘನತೆಗೆ ತಕ್ಕಂತೆ ಮಾತನಾಡಬೇಕು. ಚುನಾವಣಾ ಸಂದರ್ಭ ಈ ರೀತಿ ಆರೋಪಗಳು ಸಹಜ’ ಎಂದು ಪಾಟೀಲ್‌ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.

ಸಿದ್ದರಾಮಯ್ಯ ಜತೆ ಯಾರ್ರೀ ಹೋಗ್ತಾರೆ? ಮೈತ್ರಿ ಬಗ್ಗೆ ದೇವೇಗೌಡರ ಪ್ರಶ್ನೆ!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ