ಆ್ಯಪ್ನಗರ

ಹಾವೇರಿ-ಕೆರೆ ಜಲಪೂರಣ ಅಪೂರ್ಣ

ಕುಮಾರಪಟ್ಟಣ: ಅಂತರ್ಜಲ ವೃದ್ಧಿ ಹಾಗೂ ಸಮರ್ಪಕ ನೀರಾವರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿಎರಡು ವರ್ಷಗಳ ಹಿಂದೆ ಕೈಗೊಂಡ 32 ಕೋಟಿ ರೂ. ಯೋಜನೆಗೆ ಅಪೂರ್ಣಗೊಂಡಿದ್ದು, ಸಾರ್ವಜನಿಕರ ಬೇಸರಕ್ಕೆ ಕಾರಣವಾಗಿದೆ.

Vijaya Karnataka 31 Jul 2020, 5:00 am
ಕುಮಾರಪಟ್ಟಣ: ಅಂತರ್ಜಲ ವೃದ್ಧಿ ಹಾಗೂ ಸಮರ್ಪಕ ನೀರಾವರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿಎರಡು ವರ್ಷಗಳ ಹಿಂದೆ ಕೈಗೊಂಡ 32 ಕೋಟಿ ರೂ. ಯೋಜನೆಗೆ ಅಪೂರ್ಣಗೊಂಡಿದ್ದು, ಸಾರ್ವಜನಿಕರ ಬೇಸರಕ್ಕೆ ಕಾರಣವಾಗಿದೆ.
Vijaya Karnataka Web 060529   KPM  01  POND KRR_23
ಕುಮಾರಪಟ್ಟಣ ಸಮೀಪದ ಕರೂರು ಗ್ರಾಮದಲ್ಲಿರುವ ಗುಡ್ಡದ ಕರೆ.


ಕರೂರ ಗ್ರಾಮದ ಗುಡ್ಡದಕೆರೆ, ಚಳಗೇರಿ ಮತ್ತು ಕಮದೋಡಾ ಕೆರೆಗಳಿಗೆ ನೀರು ತುಂಬಿಸುವ ಮಹತ್ವದ ಯೋಜನೆಗೆ ಎರಡು ವರ್ಷದ ಹಿಂದೆ ಈ ಯೋಜನೆಗೆ ಚಳಗೇರಿ ಗ್ರಾಮದಲ್ಲಿವಿಧಾನಸಭಾ ಮಾಜಿ ಅಧ್ಯಕ್ಷ ಕೆ.ಬಿ.ಕೋಳಿವಾಡ ನೇತೃತ್ವದಲ್ಲಿಚಾಲನೆ ದೊರೆತಿತ್ತು. ಆದರೆ, ಈವರೆಗೂ ಯೋಜನೆ ಕುಂಟುತ್ತ ಸಾಗಿದೆ.

ರಾಣೇಬೆನ್ನೂರು ತಾಲೂಕಿನ ಮದೇನೂರು ಗ್ರಾಮದ ತುಂಗಭದ್ರಾ ನದಿಯಿಂದ ಹಾಗೂ ತುಂಗಾ ಮೇಲ್ದಂಡೆ ಕಾಲುವೆಯಿಂದ ನೀರು ಹರಿಸಲು ಕ್ರಿಯಾ ಯೋಜನೆ ರೂಪಿಸಲಾಗಿತ್ತು. ಆದರೆ, ಸುಮಾರು 85 ಎಕರೆ ವಿಸ್ತೀರ್ಣದ ಕರೂರು ಗ್ರಾಮದ ಗುಡ್ಡದಕೆರೆ, ಚಳಗೇರಿ ಮತ್ತು ಕಮದೋಡ ಕೆರೆಗಳಿಗೆ ನೀರು ತುಂಬಿಸಿಲ್ಲ. ಅಗತ್ಯಕ್ಕೆ ತಕ್ಕಂತೆ ಹಣ ಮಂಜೂರಾದರೂ ಕಾಮಗಾರಿ ನಡೆಸಿಲ್ಲಎಂಬುದು ರೈತರ ಆರೋಪವಾಗಿದೆ.

ಈ ಮೂರು ಗ್ರಾಮಗಳಿಂದ ನದಿ ಸಾಕಷ್ಟು ದೂರದಲ್ಲಿದ್ದು, ಕೃಷಿ ನೀರಾವರಿಗೆ ಸಮಸ್ಯೆಯಾಗಿದೆ. ಅನಿವಾರ್ಯವಾಗಿ ರೈತರು ಬೋರ್‌ವೆಲ್‌ ಕೊರೆಸಿದ್ದಾರೆ. ಆದರೆ ಅಂತರ್ಜಲ ಮಟ್ಟ ದಿನೇದಿನೇ ಕುಸಿಯುತ್ತಿದೆ. ಈ ಸಂದರ್ಭದಲ್ಲಿಕೆರೆಗಳಿಗೆ ನೀರು ತುಂಬಿಸಿದರೆ ಅಂತರ್ಜಲ ಮಟ್ಟ ವೃದ್ಧಿಯ ಜೊತೆಗೆ ಜನ ಜಾನುವಾರುಗಳಿಗೆ ಕುಡಿಯುವ ನೀರು ದೊರೆಯಲಿದೆ. ಆದ್ದರಿಂದ ಶೀಘ್ರವೇ ಯೋಜನೆ ಪೂರ್ಣಗೊಳಿಸಬೇಕೆಂಬುದು ಇಲ್ಲಿನ ರೈತರ ಒತ್ತಾಯವಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ