ಆ್ಯಪ್ನಗರ

ಥಾಯ್ಲೆಂಡ್‌ನಲ್ಲಿ ಮಿಂಚಿದ ಹಾವೇರಿ ಯೋಗಪಟುಗಳು

ಹಾವೇರಿ: ಕೆಲಸದ ಒತ್ತಡದಲ್ಲಿ ಆಹಾರ, ನಿದ್ರೆ ತ್ಯಜಿಸುವ ಯುವ ಪೀಳಿಗೆಗೆ ದೈಹಿಕ ಮತ್ತು ಮಾನಸಿಕ ಸದೃಢತೆಗೆ ಯೋಗ ಅತ್ಯವಶ್ಯಕ. ಈ ಕಾರಣಕ್ಕೇ ಭಗವದ್ಗೀತೆಯಲ್ಲಿ ''ಯೋಗಕ್ಷೇಮಂ ವಹಾಮ್ಯಹಂ'' ಅನ್ನೋ ಸಂದೇಶ ನೀಡಲಾಗಿದೆ. ಇದು ಹಾವೇರಿ ಹುಕ್ಕೇರಿಮಠದ ಸದಾಶಿವ ಶ್ರೀ ಗಳ ಮಾತು.

Vijaya Karnataka 31 May 2019, 5:00 am
ಹಾವೇರಿ: ಕೆಲಸದ ಒತ್ತಡದಲ್ಲಿ ಆಹಾರ, ನಿದ್ರೆ ತ್ಯಜಿಸುವ ಯುವ ಪೀಳಿಗೆಗೆ ದೈಹಿಕ ಮತ್ತು ಮಾನಸಿಕ ಸದೃಢತೆಗೆ ಯೋಗ ಅತ್ಯವಶ್ಯಕ. ಈ ಕಾರಣಕ್ಕೇ ಭಗವದ್ಗೀತೆಯಲ್ಲಿ ''ಯೋಗಕ್ಷೇಮಂ ವಹಾಮ್ಯಹಂ'' ಅನ್ನೋ ಸಂದೇಶ ನೀಡಲಾಗಿದೆ. ಇದು ಹಾವೇರಿ ಹುಕ್ಕೇರಿಮಠದ ಸದಾಶಿವ ಶ್ರೀ ಗಳ ಮಾತು.
Vijaya Karnataka Web HVR-30 HAVERI 3


ಭೋಗ ಭೂಮಿ ಎಂದೇ ಪ್ರಸಿದ್ಧಿಯಾಗಿರುವ ಥಾಯ್ಲೆಂಡ್‌ ದೇಶದಲ್ಲಿ ಯೋಗ ಸಂದೇಶ ಜತೆ ಮಹತ್ವ ಸಾರುವ 7ನೇ ಅಂತಾರಾಷ್ಟ್ರೀಯ ಯೋಗ ಉತ್ಸವದಲ್ಲಿ ಶ್ರೀಗಳು ಮೇ 22ರಿಂದ 28ರ ವರೆಗೆ ಪಾಲ್ಗೊಂಡಿದ್ದರು. 30 ಸೆಕೆಂಡ್‌ ಕಾಲ ವೀರಭದ್ರಾಸನ ಭಾಗ 1ನ್ನು ಯಶಸ್ವಿಯಾಗಿಸುವ ನಿಟ್ಟಿನಲ್ಲಿ ಆಯೋಜಿಸಲಾಗಿದ್ದ ವಿಶ್ವದಾಖಲೆ 2019ಕ್ಕೆ ಶ್ರೀಗಳು ಚಾಲನೆ ನೀಡಿ ಜಿಲ್ಲೆಯ ಜತೆಗೆ ರಾಜ್ಯದ ಕೀರ್ತಿ ಪತಾಕೆಯನ್ನು ಹಾರಿಸಿದರು ಎನ್ನುವುದು ವಿಶೇಷ.

ಈ ಅಭೂತಪೂರ್ವ ಕಾರ್ಯಕ್ರಮವನ್ನು ಹಾವೇರಿ ನಗರದ ಪ್ರೇಮ್‌ಕುಮಾರ ಮುದ್ದಿ ಅಂತಾರಾಷ್ಟ್ರೀಯ ಸಂಯೋಜನಕಾರನಾಗಿ ಆಯೋಜಿಸಿದ್ದರು ಎನ್ನುವುದು ಗಮನಾರ್ಹ. ಈ ಯೋಗ ಉತ್ಸವದಲ್ಲಿ ಜಿಲ್ಲೆಯ 7 ಸ್ಪರ್ಧಾಳುಗಳ ಜತೆಗೆ ರಾಜ್ಯದ 70 ಹಾಗೂ ವಿಶ್ವದ 15-16 ರಾಷ್ಟ್ರಗಳಿಂದ ಸುಮಾರು 700 ಕ್ಕೂ ಅಧಿಕ ಸ್ಪರ್ಧಿಗಳು, ಯೋಗ ಪಟುಗಳು ಭಾಗವಹಿಸಿದ್ದರು

ಹುಕ್ಕೇರಿಮಠದ ಸದಾಶಿವ ಶ್ರೀಗಳು ಯೋಗ ಸಾಧಕರ ಆರೋಗ್ಯದ ಒಳಗುಟ್ಟನ್ನು ಪ್ರಚುರ ಪಡಿಸುವ ಯೋಗ ಉತ್ಸವಕ್ಕೆ ಚಾಲನೆ ನೀಡಿ ಯೋಗ ಕರ್ಮಸ್ಸು ಕೌಶಲ್ಯಯೇಹಂ ಎಂದು ಸಂದೇಶ ನೀಡಿದ್ದು ಜಿಲ್ಲೆಗೆ ಸಂದ ಗೌರವ ಎನ್ನಬಹುದು.

ಯೋಗ ಮತ್ತು ಅದರ ಮಹತ್ವದ ಬಗ್ಗೆ ಶ್ರೀಗಳು ಆಡಿದ ನುಡಿಗಳು ಥಾಯ್ಲೆಂಡ್‌ ದೇಶದಲ್ಲಿ ಮಹತ್ವದ ಚರ್ಚೆಗೆ ಕಾರಣವಾಗಿವೆ. ಅಂತಾರಾಷ್ಟ್ರೀಯ ಯೋಗ ಫೌಂಡೇಶನ್‌ನ ಸಂಸ್ಥಾಪಕ ಅಧ್ಯಕ್ಷ ಆಚಾರ್ಯ ಡಾ.ನಿರಂಜನ ಮೂರ್ತಿ ಅವರು ಶ್ರೀಗಳನ್ನು ಇದೇ ಜುಲೈ 14 ರಂದು ಬೆಂಗಳೂರಲ್ಲಿ ನಡೆಯಲಿರುವ 5ನೇ ಅಂತಾರಾಷ್ಟ್ರೀಯ ಯೋಗಾಸನ ಚಾಂಪಿಯನ್‌ಶಿಪ್‌ ಹಾಗೂ ಇಂಡೊನೇಶಿಯಾದ ಬಾಲಿಯಲ್ಲಿ ಸೆಪ್ಟೆಂಬರ್‌ನಲ್ಲಿ ಹಮ್ಮಿಕೊಳ್ಳುವ ಅಂತಾರಾಷ್ಟ್ರೀಯ ಹಿಮಾಲಯ ಯೋಗಾ ಒಲಂಪಿಯಾಡ್‌ನ ನೇತೃತ್ವ ವಹಿಸಲು ಆಹ್ವಾನಿಸಲು ಬರುತ್ತಿದ್ದಾರೆ ಎನ್ನುವುದೂ ವಿಶೇಷ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ