ಆ್ಯಪ್ನಗರ

ಬಿಜೆಪಿ ಟಿಕೆಟ್‌ಗಾಗಿ ಬಣಕಾರ ಹೊತ್ತು ಮೆರೆದಾಡಿದರು

ಹಿರೇಕೆರೂರು: ಮಾಜಿ ಶಾಸಕ ಯು.ಬಿ.ಬಣಕಾರ ಅವರಿಗೆ ಬಿಜೆಪಿ ಟಿಕೆಟ್‌ ನೀಡುವಂತೆ ಒತ್ತಾಯಿಸಿ ಅವರನ್ನು ಹೊತ್ತು ಪಟ್ಟಣದಲ್ಲಿಬುಧವಾರ ಕಾರ್ಯಕರ್ತರು, ಅಭಿಮಾನಿಗಳು ಮೆರೆದಾಡಿದರು.

Vijaya Karnataka 26 Sep 2019, 5:00 am
ಹಿರೇಕೆರೂರು: ಮಾಜಿ ಶಾಸಕ ಯು.ಬಿ.ಬಣಕಾರ ಅವರಿಗೆ ಬಿಜೆಪಿ ಟಿಕೆಟ್‌ ನೀಡುವಂತೆ ಒತ್ತಾಯಿಸಿ ಅವರನ್ನು ಹೊತ್ತು ಪಟ್ಟಣದಲ್ಲಿಬುಧವಾರ ಕಾರ್ಯಕರ್ತರು, ಅಭಿಮಾನಿಗಳು ಮೆರೆದಾಡಿದರು.
Vijaya Karnataka Web he marched for the bjp ticket
ಬಿಜೆಪಿ ಟಿಕೆಟ್‌ಗಾಗಿ ಬಣಕಾರ ಹೊತ್ತು ಮೆರೆದಾಡಿದರು


ಬಿಜೆಪಿ ಟಿಕೆಟ್‌ ನೀಡದಿದ್ದರೆ ಪಕ್ಷೇತರರಾಗಿ ಸ್ಪರ್ಧಿಸುವಂತೆ ಬಣಕಾರ ಅವರಿಗೆ ಒತ್ತಾಯಿಸಿ ಕಾರ್ಯಕರ್ತರು ಕೆಲಹೊತ್ತು ಮುಖ್ಯರಸ್ತೆಯಲ್ಲಿ ಪ್ರತಿಭಟನೆ ನಡೆಸಿದರು.

ಉಪಚುನಾವಣೆಯಲ್ಲಿಸ್ಪರ್ಧಿಸಲು ಬಿಜೆಪಿಯಿಂದ ಬಣಕಾರ ಅವರಿಗೆ ಟಿಕೆಟ್‌ ನೀಡಲೇಬೇಕು ಎಂದು ಒತ್ತಾಯಿಸಿದರು.

ಮಾಜಿ ಶಾಸಕ ಯು.ಬಿ.ಬಣಕಾರ ಬೆಂಗಳೂರಿನಿಂದ ಪಟ್ಟಣಕ್ಕೆ ಮಧ್ಯಾಹ್ನ ಆಗಮಿಸುತ್ತಿದ್ದಂತೆಯೆ ಸುತ್ತುವರಿದ ಕಾರ್ಯಕರ್ತರು, ಅಭಿಮಾನಿಗಳು ಅವರಿಗೆ ಹೂಮಾಲೆ ಹಾಕಿ ಹೆಗಲ ಮೇಲೆ ಹೊತ್ತು ಮೆರೆದಾಡಿದರು.

'' ಸಿಎಂ ಯಡಿಯೂರಪ್ಪ ಅವರ ಮೇಲೆ ಗೌರವವಿಟ್ಟು ಚುನಾವಣೆಗೆ ಸ್ಪರ್ಧಿಸಲ್ಲಅಂದರೆ ತಾಲೂಕಿನ ಜನ ಕೇಳುವ ಸ್ಥಿತಿಯಲಿಲ್ಲ. ನಾಮಪತ್ರ ಸಲ್ಲಿಸದಿದ್ದರೆ ವಿಷ ಕುಡಿಯುತ್ತೇವೆ ಎನ್ನುತ್ತಿದ್ದಾರೆ. ನಾನು ಮತದಾರರ ಮಾತು ಕೇಳಬೇಕೋ ಅಥವಾ ಬಿಜೆಪಿ ಮುಖಂಡರ ಮಾತು ಕೇಳಬೇಕೊ ಎನ್ನುವ ಸಂಕಟದಲ್ಲಿದ್ದೇನೆ'' ಎಂದು ಬಣಕಾರ ಪ್ರತಿಕ್ರಿಯಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ