ಶಿಗ್ಗಾವಿ:ಖಾತೆ ಬದಲಾವಣೆಗೆ ಸಂಬಂಧಿಸಿದಂತೆ ತನ್ನ ಕಚೇರಿ ಸಹಾಯಕಿ ಮೂಲಕ ಪರೋಕ್ಷ ವಾಗಿ ಲಂಚದ ಹಣ ಪಡೆದುಕೊಂಡ ಹಿರೇಬೆಂಡಿಗೇರಿ ವ್ಯಾಪ್ತಿಯ ಗ್ರಾಮ ಲೆಕ್ಕಾಧಿಕಾರಿ ಎಸ್.ಎಸ್.ಮಾಳವಾಡ ಗುರುವಾರವೂ ತಲೆಮರೆಸಿಕೊಂಡಿದ್ದಾರೆ.
ಬುಧವಾರ ಎಸಿಬಿ ಪೊಲೀಸ್ರು ದಾಳಿ ಮಾಡಿ ದೂರು ದಾಖಲಿಸಿಕೊಂಡಿದ್ದಾರೆ. ಚಿಕ್ಕಬೆಂಡಿಗೇರಿ ಗ್ರಾಮದ ಧರ್ಮೇಗೌಡ ಯಲ್ಲಪ್ಪಗೌಡ ಬೈಲಪ್ಪಗೌಡ ಎನ್ನುವವರು ತಮ್ಮ ತಂದೆ ಹೆಸರಿನಲ್ಲಿರುವ 8 ಎಕರೆ ಜಮೀನನ್ನು ಸಹೋದರರಿಬ್ಬರು ಸಬ್ ರಜಿಸ್ಟ್ರಾರ್ ಕಚೇರಿಯಲ್ಲಿ ನೋಂದಣಿ ಮೂಲಕ ಹಿಸ್ಸೆ ಮಾಡಿಕೊಂಡಿದ್ದಾರೆ. ಇದನ್ನು ಪರಿಶೀಲಿಸಿ ತಂದೆ ಹೆಸರು ಕಡಿಮೆ ಮಾಡಿ ಸಹೋದರರ ಹೆಸರು ಕಂದಾಯ ದಾಖಲೆಯಲ್ಲಿ ನೋಂದಾಯಿಸಲು ಗ್ರಾಮ ಲೆಕ್ಕಾಧಿಕಾರಿ 6 ಸಾವಿರ ರೂ. ಮೊತ್ತದ ಲಂಚದ ಬೇಡಿಕೆ ಇಟ್ಟಿದ್ದರು.
ಈ ಕುರಿತು ಧರ್ಮೇಗೌಡ ಎಸಿಬಿ ಪೊಲೀಸ್ರಿಗೆ ದೂರು ನೀಡಿದಾಗ, ದಾಳಿ ಮಾಡಿದಾಗ ಲಂಚದ ಹಣ ಪಡೆಯುತ್ತಿದ್ದ ಗ್ರಾಮಲೆಕ್ಕಾಧಿಕಾರಿ ಖಾಸಗಿ ಸಹಾಯಕಿ ಸಿಕ್ಕಿ ಬಿದ್ದಿದ್ದರು.