ಆ್ಯಪ್ನಗರ

ಹಾವೇರಿ ನಗರದಲ್ಲಿ ಏರಿದ ಬಿಸಿಲಿನ ತಾಪ

ಹಾವೇರಿ :ನಗರದಲ್ಲಿ ದಿನದಿಂದ ದಿನ ಹೆಚ್ಚುತ್ತಿರುವ ಬಿಸಿಲಿನ ತಾಪದಿಂದ ಜನರು ತಪ್ಪಿಸಿಕೊಳ್ಳಲು ತಂಪು ಪಾನಿ ಸೇವನೆಯತ್ತ ಮೊರೆ ಹೋಗಿದ್ದಾರೆ. ನಗರದಲ್ಲಿ ಬೇಸಿಗೆ ಬಿಸಿಲು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ನೆತ್ತಿಯ ಮೇಲೆ ಸೂರ್ಯನ ತಾಪ, ಕೆಳಗೆ ರಸ್ತೆ ಉರಿಗೆ ನಗರದ ಜನತೆ ಚಟಪಡಿಸುತ್ತಿದ್ದಾರೆ. ಎಳೆನೀರು, ಕಲ್ಲಂಗಡಿ, ದ್ರಾಕ್ಷಿ ಹಣ್ಣುಗಳಿಗೆ ಕೆಲವು ಜನರು ಮೋರೆ ಹೋದರೆ, ಇನ್ನೂ ಕೆಲವರು ಕಬ್ಬಿನ ಹಾಲು, ಮಜ್ಜಿಗೆ, ಲಸ್ಸಿ, ಸೋಡಾ, ಶರಬತ್ತು ಸೇರಿದಂತೆ ತಂಪುಪಾನಿಯತ್ತ ಮೊರೆ ಹೋಗುತ್ತಿದ್ದಾರೆ.

Vijaya Karnataka 27 Mar 2018, 5:00 am
ಹಾವೇರಿ :ನಗರದಲ್ಲಿ ದಿನದಿಂದ ದಿನ ಹೆಚ್ಚುತ್ತಿರುವ ಬಿಸಿಲಿನ ತಾಪದಿಂದ ಜನರು ತಪ್ಪಿಸಿಕೊಳ್ಳಲು ತಂಪು ಪಾನಿ ಸೇವನೆಯತ್ತ ಮೊರೆ ಹೋಗಿದ್ದಾರೆ. ನಗರದಲ್ಲಿ ಬೇಸಿಗೆ ಬಿಸಿಲು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ನೆತ್ತಿಯ ಮೇಲೆ ಸೂರ್ಯನ ತಾಪ, ಕೆಳಗೆ ರಸ್ತೆ ಉರಿಗೆ ನಗರದ ಜನತೆ ಚಟಪಡಿಸುತ್ತಿದ್ದಾರೆ. ಎಳೆನೀರು, ಕಲ್ಲಂಗಡಿ, ದ್ರಾಕ್ಷಿ ಹಣ್ಣುಗಳಿಗೆ ಕೆಲವು ಜನರು ಮೋರೆ ಹೋದರೆ, ಇನ್ನೂ ಕೆಲವರು ಕಬ್ಬಿನ ಹಾಲು, ಮಜ್ಜಿಗೆ, ಲಸ್ಸಿ, ಸೋಡಾ, ಶರಬತ್ತು ಸೇರಿದಂತೆ ತಂಪುಪಾನಿಯತ್ತ ಮೊರೆ ಹೋಗುತ್ತಿದ್ದಾರೆ.
Vijaya Karnataka Web heat up heat prices for people with hot temperatures
ಹಾವೇರಿ ನಗರದಲ್ಲಿ ಏರಿದ ಬಿಸಿಲಿನ ತಾಪ


ಭರ್ಜರಿ ವ್ಯಾಪಾರ: ನಗರದಲ್ಲಿ ಬಿಪಿ ರಸ್ತೆ, ಜಿಲ್ಲಾಸ್ಪತ್ರೆ ಮುಂಭಾಗ, ಮುನ್ಸಿಪಲ್‌ ಹೈಸ್ಕೂಲ್‌, ಜಿ.ಪಿ.ರಸ್ತೆ, ದಾನಮ್ಮ ದೇವಿ ಗುಡಿ ಹತ್ತಿರ, ಸುಭಾಸ್‌ ಸರ್ಕಲ್‌, ಗಾಂಧಿ ವೃತ್ತ, ತರಕಾರಿ ಮಾರುಕಟ್ಟೆ ಸೇರಿದಂತೆ ನಗರದಲ್ಲಿ ಪ್ರಮುಖ ಸ್ಥಳಗಳಲ್ಲಿ ಎಳೆನೀರು, ಕಲ್ಲಂಗಡಿ, ದ್ರಾಕ್ಷಿ ಹಣ್ಣು ಸೇರಿದಂತೆ ಇತರೆ ಅಂಗÜಡಿಗಳಲ್ಲಿ ಭರ್ಜರಿ ವ್ಯಾಪಾರ ನಡೆಯಿತ್ತಿದೆ.

ಬೆಲೆ ಏರಿಕೆ ಬಿಸಿ: ಒಂದೆಡೆ ಬಿಸಿಲಿನ ತಾಪವಿದ್ದರೆ ಇನ್ನೊಂದೆಡೆ ಜನರಿಗೆ ತಂಪುಪಾನಿಯ ಬೆಲೆ ಬಿಸಿ ಹೆಚ್ಚಾಗಿದೆ. ಇದನ್ನೇ ಬಂಡವಾಳ ಮಾಡಿಕೊಂಡು ವ್ಯಾಪಾರಿಗಳು ತಂಪುಪಾನಿಯ ಬೆಲೆಗಳನ್ನು ಏಕಾಏಕಿ ದರ ದ್ವಿಗುಣಗೊಳಿಸಿದ್ದಾರೆ.

ಎಳನೀರು 20 ರಿಂದ 30ಕ್ಕೆ ಏರಿದೆ. ಕಬ್ಬಿನ ಹಾಲು 10 ರಿಂದ 15ಕ್ಕೆ ಜಿಗಿದರೆ, ಲಿಂಬು ಸೋಡಾ 12 ರಿಂದ 20ಕ್ಕೆ ಏರಿಕೆ ಕಂಡಿದೆ. ಬೆಲೆ ಏರಿಕೆ ನಡುವೆಯೂ ಗ್ರಾಹಕರು ತಂಪು ಪಾನಿಯಗಳನ್ನು ಕುಡಿಯಲೇ ಬೇಕಾದ ಅನಿವಾರ್ಯ ಇದೆ. ಒಟ್ಟಾರೆ ನಗರದಲ್ಲಿ ಬಿಸಿಲಿನ ತಾಪ ಹೆಚ್ಚುವ ಜತೆಗೆ ತಂಪು ಪಾನಿಯಗಳ ಬೆಲೆಯೂ ಹೆಚ್ಚುತ್ತಿರುವುದು ಜನರಿಗೆ ಚಿಂತೆಗೀಡು ಮಾಡಿದೆ.


ಯಾವುದಕ್ಕೆ ಎಷ್ಟು ದರ

ಹೆಸರು ಮೊದಲ ದರ ಏರಿಕೆ ದರ

ಎಳನೀರು 20 30

ಕಲ್ಲಂಗಡಿ 10 20 ಪ್ಲೇಟ್‌ಗೆ

ಶರಬತ್‌ 12 15

ಬಾದಾಮ್‌ ಜ್ಯೂಸ್‌ 20 25

ಫ್ರುಟ್ಸ್‌ ಜ್ಯೂಸ್‌ 10 15

ಲಸ್ಸಿ 20 25

ಜೀರಾ 12 18

ಆರೇಂಜ್‌ 13 15

ಲಿಂಬೂ 12 15

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ