ಆ್ಯಪ್ನಗರ

ಅನುರಾಧ ನಕ್ಷತ್ರ : ಮಗುವಿಗೆ ಅನ್ನಪ್ರಾಸನ

ಹಾವೇರಿ: ಇಲ್ಲಿಯ ಬಸವೇಶ್ವರ ನಗರದಲ್ಲಿರುವ ಅನ್ನಪೂರ್ಣಶ್ವರಿ ದೇವಸ್ಥಾನದಲ್ಲಿಬಸವೇಶ್ವರ ನಗರದ ಮಹಿಳಾ ನಾಗರೀಕ ವೇದಿಕೆ ವತಿಯಿಂದ ಅನ್ನಪ್ರಾಸನ ಕಾರ್ಯಕ್ರಮ ನಡೆಯಿತು.

Vijaya Karnataka 28 Dec 2019, 5:00 am
ಹಾವೇರಿ: ಇಲ್ಲಿಯ ಬಸವೇಶ್ವರ ನಗರದಲ್ಲಿರುವ ಅನ್ನಪೂರ್ಣಶ್ವರಿ ದೇವಸ್ಥಾನದಲ್ಲಿಬಸವೇಶ್ವರ ನಗರದ ಮಹಿಳಾ ನಾಗರೀಕ ವೇದಿಕೆ ವತಿಯಿಂದ ಅನ್ನಪ್ರಾಸನ ಕಾರ್ಯಕ್ರಮ ನಡೆಯಿತು.
Vijaya Karnataka Web hereditary star anaprasha for a child
ಅನುರಾಧ ನಕ್ಷತ್ರ : ಮಗುವಿಗೆ ಅನ್ನಪ್ರಾಸನ


ಈ ಕಾರ್ಯಕ್ರಮದಲ್ಲಿಹರಸೂರ ಬಣ್ಣದಮಠದ ಅಭಿನವ ರುದ್ರಚನ್ನಮಲ್ಲಿಕಾರ್ಜುನ ಸ್ವಾಮೀಜಿ ಮಾರ್ಗದರ್ಶನದಲ್ಲಿಅನುರಾಧ ನಕ್ಷತ್ರ ದಿನದಂದು ಅನ್ನಪೂರ್ಣೇಶ್ವರ ದೇವಿಗೆ ಪೂಜೆ ಸಲ್ಲಿಸಿ, ಮುತೈದೆಯರಿಗೆ ಉಡಿ ತುಂಬುವ ಮೂಲಕ 6 ತಿಂಗಳಿನಿಂದ ಒಂದು ವರ್ಷದ ಮಗುವಿಗೆ ಅನ್ನ ಪ್ರಾಸನ ಮಾಡಿಸಲಾಯಿತು.

ಈ ವೇಳೆ ಮಹಿಳಾ ನಾಗರಿಕ ವೇದಿಕೆಯ ಅಧ್ಯಕ್ಷೆ ಲತಾ ಹಳೆಕೊಪ್ಪ ಮಾತನಾಡಿ, ತಾಯಿಯ ಎದೆ ಹಾಲು ಮಗುವಿಗೆ ಸಾಕಾಗದೆ ಇದ್ದಾಗ ಮತ್ತು ಮಗುವಿನ ಶಾರೀರಿಕ ಶಕ್ತಿಯು ವೃದ್ಧಿಸುವ ಉದ್ದೇಶದಿಂದ ಅನ್ನಪೂರ್ಣಶ್ವರಿ ದೇವಸ್ಥಾನದಲ್ಲಿಅನ್ನಪ್ರಾಸನ ಮಾಡಿಸಲಾಗುತ್ತಿದೆ ಎಂದರು.

ಅನ್ನಪೂರ್ಣೇಶ್ವರಿ ದೇವಸ್ಥಾನ ಹಾವೇರಿ ನಗರದಲ್ಲಿಯೇ ಇರುವುದರಿಂದ ನಗರದ ಜನತೆಗೆ ಅನುಕೂಲವಾಗಿದೆ. ಪ್ರತಿ ವರ್ಷಯೂ ಇಲ್ಲಿಅನ್ನ ಪ್ರಸನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಹೇಳಿದರು.

ಈ ಕಾರ್ಯಕ್ರಮದಲ್ಲಿಮಹಿಳಾ ವೇದಿಕೆಯ ಕಾರ್ಯದರ್ಶಿ ಪ್ರೇಮಾ ಬೋಗಾರ, ಕವಿತಾ ಸ್ವಾಮಿ, ಸರೋಜಾ ಬನ್ನೂರ, ಮಮತಾ ಹಿಂಚಿಗೇರಿ, ಸರೋಜಾ ಬಣಕಾರ, ಕಸ್ತೂರಿ ರಿತ್ತಿ, ಮಧುಮತಿ ಚಿಕ್ಕೆಗೌಡ್ರ, ಸರ್ವ ಮಂಗಳಾ ಹಾಗೂ ವೇದಿಕೆಯ ಸದಸ್ಯರು ಸಾರ್ವಜನಿಕರು ಮಹಿಳೆಯರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ