ಆ್ಯಪ್ನಗರ

ಹಿಂದೂಗಳ ಬಂಧಿಸಿದರೆ ಉಗ್ರ ಪ್ರತಿಭಟನೆ: ಉದಾಸಿ ಎಚ್ಚರಿಕೆ

ಹಾವೇರಿ: ಅಕ್ರಮ ಕಸಾಯಿ ಖಾನೆ ಸ್ಥಗಿತಗೊಳಿಸಬೇಕು. ಅಕ್ರಮ ಗೋಹತ್ಯೆ, ಗೋಮಾಂಸ ಮಾರಾಟದ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಜೂನ್‌ 4 ರಂದು ಪ್ರತಿಭಟನೆ ನಡೆಸಿದ ಹಿಂದೂಪರ ಸಂಘಟಕರ ಮೇಲೆ ಪೊಲೀಸ್‌ ಇಲಾಖೆ ಕೇಸ್‌ ದಾಖಲಿಸಿರುವುದು ಖಂಡನೀಯ. ಬಂಧನಕ್ಕೆ ಮುಂದಾದಲ್ಲಿ ಜಿಲ್ಲಾದ್ಯಂತ ಉಗ್ರ ಪ್ರತಿಭಟನೆ ಕೈಗೊಳ್ಳುವುದಾಗಿ ಶಾಸಕ ಸಿ.ಎಂ.ಉದಾಸಿ ಎಚ್ಚರಿಕೆ ನೀಡಿದ್ದಾರೆ.

Vijaya Karnataka 8 Jun 2019, 5:00 am
ಹಾವೇರಿ: ಅಕ್ರಮ ಕಸಾಯಿ ಖಾನೆ ಸ್ಥಗಿತಗೊಳಿಸಬೇಕು. ಅಕ್ರಮ ಗೋಹತ್ಯೆ, ಗೋಮಾಂಸ ಮಾರಾಟದ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಜೂನ್‌ 4 ರಂದು ಪ್ರತಿಭಟನೆ ನಡೆಸಿದ ಹಿಂದೂಪರ ಸಂಘಟಕರ ಮೇಲೆ ಪೊಲೀಸ್‌ ಇಲಾಖೆ ಕೇಸ್‌ ದಾಖಲಿಸಿರುವುದು ಖಂಡನೀಯ. ಬಂಧನಕ್ಕೆ ಮುಂದಾದಲ್ಲಿ ಜಿಲ್ಲಾದ್ಯಂತ ಉಗ್ರ ಪ್ರತಿಭಟನೆ ಕೈಗೊಳ್ಳುವುದಾಗಿ ಶಾಸಕ ಸಿ.ಎಂ.ಉದಾಸಿ ಎಚ್ಚರಿಕೆ ನೀಡಿದ್ದಾರೆ.
Vijaya Karnataka Web hindus detained in fierce protest udasi warns
ಹಿಂದೂಗಳ ಬಂಧಿಸಿದರೆ ಉಗ್ರ ಪ್ರತಿಭಟನೆ: ಉದಾಸಿ ಎಚ್ಚರಿಕೆ


ಹಾವೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಜೂನ್‌ 4 ರಂದು ನೀಡಿರುವ ದೂರನ್ನು ಜೂನ್‌ 5 ರಂದು ದಾಖಲಿಸಿದ್ದಾರೆ. ಪೌರಾಯುಕ್ತರಿಗೆ ಮತ್ತು ಪೊಲೀಸರಿಗೆ ದೂರು ನೀಡಿದರೂ ಕ್ರಮ ಕೈಗೊಳ್ಳದ ಕಾರಣಕ್ಕೆ ಕಸಾಯಿಖಾನೆ ಮುಚ್ಚಿಸುವ ಜತೆಗೆ ದನ ಕರು ಕಡೆಯುತ್ತಿದ್ದ ಕಟುಕರನ್ನು ತಡೆಯಲು ಮುಂದಾದ ಪ್ರತಿಭಟನಾಕಾರರ ಮೇಲೆ 23 ಕ್ಕೂ ಹೆಚ್ಚು ಜನರು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ. ಈ ಘಟನೆಯನ್ನು ಗಾಯಗೊಂಡಿರುವ 4 ಹಿಂದೂ ಯುವಕರು ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.

ಈ ಘಟನೆ ಮರುದಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಯುವಕರನ್ನೂ ಸೇರಿದಂತೆ ಪ್ರತಿಭಟನೆಯಲ್ಲಿ ಪಾಲ್ಗೊಳ್ಳದ ಹಿಂದೂಪರ ಸಂಘಟನೆ ಮುಖಂಡರ ವಿರುದ್ಧ ಮಹಿಳೆಯರ ಮೂಲಕ ದೂರು ಕೊಡಿಸಿರುವುದು ನಿಜಕ್ಕೂ ಖಂಡನಾರ್ಹ. ಪೊಲೀಸ ಇಲಾಖೆ ಉದ್ದೇಶಪೂರಕವಾಗಿ ಒಂದು ಕೋಮಿನ ಪರವಾಗಿ ಕೆಲಸ ಮಾಡುವಂತೆ ಪ್ರಚೋದಿಸಿರುವುದು ಸ್ಪಷ್ಟವಾಗಿದೆ ಎಂದು ದೂರಿದರು.

ಮಹಿಳೆಯರು ನೀಡಿದ ದೂರಿನ ಮೇಲೆ ಹಿಂದೂಪರ ಸಂಘಟನೆ ಮುಖಂಡರ ವಿರುದ್ಧ ಕೇಸ್‌ ದಾಖಲಿಸಿ ಬಂಧನಕ್ಕೆ ಮುಂದಾಗುವ ಪೊಲೀಸ್‌ ಇಲಾಖೆ ಕ್ರಮ ನಿಲ್ಲಿಸಬೇಕು. ಪ್ರತಿಭಟನಾಕಾರರ ಮೇಲೆ ಸುಳ್ಳು ಕೇಸ್‌ ದಾಖಲಿಸುವುದು ಕಾಂಗ್ರೆಸ ಸಂಸ್ಕೃತಿಗೆ ಸಾಕ್ಷಿಯಾಗಿದೆ.

ಅಕ್ರಮ ಕಸಾಯಿ ಖಾನೆ ನಡೆಸುತ್ತಿರುವವರನ್ನು ಮತ್ತು ದೈಹಿಕ ಹಲ್ಲೆ ಮಾಡಿದವರನ್ನು ಕೂಡಲೇ ಬಂಧಿಸಬೇಕು. ಸುಳ್ಳು ದೂರು ಆಧರಿಸಿ ಹಿಂದೂಪರ ಸಂಘಟನೆಗಳ ಮುಖಂಡರ ಬಂಧನಕ್ಕೆ ಯಾವುದೇ ಕಾರಣಕ್ಕೂ ಅವಕಾಶ ಕೊಡುವುದಿಲ್ಲ.

ಈ ಬಗ್ಗೆ ಜಿಲ್ಲಾ ಪೊಲೀಸ ವರಿಷ್ಠರಿಗೆ ಶುಕ್ರವಾರ ಮನವಿ ಸಲ್ಲಿಸುವ ಜತೆಗೆ ಐಜಿಪಿ ಅವರಿಗೂ ಮೌಖಿಕವಾಗಿ ಹೇಳಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಈಗಲೂ ಕಾಲ ಮಿಂಚಿಲ್ಲ. ಅಕ್ರಮವಾಗಿ ಗೋಹತ್ಯೆ ನಡೆಸುವ ಕಸಾಯಿಖಾನೆ ಮುಚ್ಚಿಸಬೇಕು. ಅಂಥವರ ವಿರುದ್ಧ ಕೇಸ್‌ ದಾಖಲಿಸಿ ಕ್ರಮ ಕೈಗೊಳ್ಳಬೇಕು. ತಪ್ಪಿದಲ್ಲಿ ಜಿಲ್ಲಾದ್ಯಂತ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ ಸಜ್ಜನರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿದ್ಧರಾಜ ಕಲಕೋಟಿ, ಜಿಲ್ಲಾ ವಿಎಚ್‌ಪಿ ಸಂಚಾಲಕ ಎಸ್‌.ಆರ್‌. ಹೆಗಡೆ, ಡಾ.ಸಂತೋಷ ಆಲದಕಟ್ಟಿ, ವಿಜಯ ಕುಮಾರ ಚಿನ್ನಿಕಟ್ಟಿ ಮತ್ತು ಪ್ರಭು ಹಿಟ್ನಳ್ಳಿ ಮುಂತಾದವರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ