ಆ್ಯಪ್ನಗರ

ಎಚ್ಕೆ-ಬೊಮ್ಮಾಯಿ ಮುಖಾಮುಖಿ: ಕಾವೇರಲಿದೆ ಹಾವೇರಿ

ಹಾವೇರಿ: ಪಕ್ಷ ಬೇರೆಯಾದರೂ ಉತ್ತರ ಕರ್ನಾಟಕದ ಘಟಾನುಘಟಿ ರಾಜಕಾರಣಿಗಳು ಎಂದೇ ಗುರುತಿಸಿಕೊಂಡ ಮಾಜಿ ಸಚಿವರಾದ ಎಚ್‌.ಕೆ.ಪಾಟೀಲ, ಬಸವರಾಜ ಬೊಮ್ಮಾಯಿ ಮುಖಾಮುಖಿ ರಾಜಕಾರಣಕ್ಕೆ ಹಾವೇರಿ ಲೋಕಸಭೆ ಕ್ಷೇತ್ರ ವೇದಿಕೆಯಾಗಿದೆ.

Vijaya Karnataka 27 Mar 2019, 5:00 am
ಹಾವೇರಿ: ಪಕ್ಷ ಬೇರೆಯಾದರೂ ಉತ್ತರ ಕರ್ನಾಟಕದ ಘಟಾನುಘಟಿ ರಾಜಕಾರಣಿಗಳು ಎಂದೇ ಗುರುತಿಸಿಕೊಂಡ ಮಾಜಿ ಸಚಿವರಾದ ಎಚ್‌.ಕೆ.ಪಾಟೀಲ, ಬಸವರಾಜ ಬೊಮ್ಮಾಯಿ ಮುಖಾಮುಖಿ ರಾಜಕಾರಣಕ್ಕೆ ಹಾವೇರಿ ಲೋಕಸಭೆ ಕ್ಷೇತ್ರ ವೇದಿಕೆಯಾಗಿದೆ.
Vijaya Karnataka Web hk bommai encounter will be overwhelmingly haveri
ಎಚ್ಕೆ-ಬೊಮ್ಮಾಯಿ ಮುಖಾಮುಖಿ: ಕಾವೇರಲಿದೆ ಹಾವೇರಿ


ಬಿಜೆಪಿ ಅಭ್ಯರ್ಥಿ ಶಿವಕುಮಾರ ಉದಾಸಿ ಪರ ಬಸವರಾಜ ಬೊಮ್ಮಾಯಿ ರಾಜಕೀಯ ತಂತ್ರಗಾರಿಕೆ ರೂಪಿಸುತ್ತಿದ್ದಾರೆ. ಅಲ್ಲದೇ, ಬಿಜೆಪಿ ಹಿರಿಯ ಮುಖಂಡ ಸಿ.ಎಂ.ಉದಾಸಿ, ನೆಹರು ಓಲೇಕಾರ, ವಿರೂಪಾಕ್ಷಪ್ಪ ಬಳ್ಳಾರಿ ಸೇರಿದಂತೆ ಇನ್ನಿತರ ಬಿಜೆಪಿ ಮುಖಂಡರು ಶಿವಕುಮಾರ ಉದಾಸಿ ಪರ ಗೆಲುವಿನ ಯೋಜನೆ ರೂಪಿಸುತ್ತಿದ್ದಾರೆ.

ಇನ್ನೊಂದೆಡೆ ಕಾಂಗ್ರೆಸ್‌ ಅಭ್ಯರ್ಥಿ ಡಿ.ಆರ್‌.ಪಾಟೀಲ ಪರವಾಗಿ ಎಚ್‌.ಕೆ.ಪಾಟೀಲ ಮುಂದಾಳತ್ವ ವಹಿಸುವುದು ಪಕ್ಕಾಗಿದೆ. ಇವರಲ್ಲದೇ, ಕೆ.ಬಿ.ಕೋಳಿವಾಡ, ಶಿವಣ್ಣವರ, ಬಿ.ಸಿ.ಪಾಟೀಲ, ರುದ್ರಪ್ಪ ಲಮಾಣಿ ಕೂಡ ಪಾಟೀಲಗೆ ಬೆಂಬಲವಾಗಿದ್ದಾರೆ.

ಬಿಜೆಪಿ ತಂತ್ರಗಾರಿಕೆ : ಹಾವೇರಿ ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿ ಉಸ್ತುವಾರಿ ವಹಿಸಿಕೊಂಡ ಬೊಮ್ಮಾಯಿ ಅವರು ಎರಡ್ಮೂರು ದಿನಗಳಿಂದ ರಾಜಕೀಯ ತಂತ್ರಗಾರಿಕೆ ರೂಪಿಸುತ್ತಿದ್ದಾರೆ. ಬಿಜೆಪಿ ಅಭ್ಯರ್ಥಿ ಶಿವಕುಮಾರ ಉದಾಸಿ ಮೇಲೆ ಅಸಮಾಧಾನ ಹೊಂದಿರುವ ಕಾರ್ಯಕರ್ತ, ಮುಖಂಡರ ಸಮಾಧಾನಪಡಿಸುವ ಜತೆಗೆ ಗೆಲುವಿನ ರಣತಂತ್ರಕ್ಕೆ ಮುಂದಾಗಿದ್ದಾರೆ.

ಎಚ್ಕೆ ಯೋಜನೆ : ಇತ್ತ ಇದೇ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿರುವ ಡಿ.ಆರ್‌.ಪಾಟೀಲರ ಗೆಲುವಿಗೆ ಎಚ್‌.ಕೆ.ಪಾಟೀಲ, ಪಕ್ಷ ದ ಕಾರ್ಯಕರ್ತ, ಮುಖಂಡರಲ್ಲಿರುವ ಅಸಮಾಧಾನ ಅಳಿಸಿ, ವಿಶ್ವಾಸಕ್ಕೆ ಪಡೆಯವ ಪರ್ಯಾಯ ರಾಜಕೀಯ ತಂತ್ರಗಾರಿಕೆ ಕೈಗೊಳ್ಳುವದು ಅನಿವಾರ್ಯವಾಗಿದೆ.

ಹೀಗಾಗಿ ಇವರಿಬ್ಬರು ಪ್ರತಿಷ್ಠೆ ಪಣಕ್ಕಿಟ್ಟು ಹಾವೇರಿ ಕ್ಷೇತ್ರದಲ್ಲಿ ತಮ್ಮ, ತಮ್ಮ ಪಕ್ಷ ದ ಅಭ್ಯರ್ಥಿ ಗೆಲ್ಲಿಸುವ ಅನಿವಾರ್ಯತೆಗೆ ಸಿದ್ಧರಾಗಿದ್ದಾರೆ. ಹೀಗಾಗಿ ಹಾವೇರಿ ಕ್ಷೇತ್ರದಲ್ಲಿ ಎಚ್‌.ಕೆ.ಪಾಟೀಲ ಮತ್ತು ಬಸವರಾಜ ಬೊಮ್ಮಾಯಿ ಮುಖಾಮುಖಿಯಾಗಲಿದ್ದು, ಈ ಬಾರಿ ಅಖಾಡ ರಂಗೇರಲಿದೆ ಎಂದು ಹೇಳಲಾಗುತ್ತಿದೆ.

ಗದಗನಲ್ಲಿ ಹುರುಪು: ಈವರೆಗೂ ಲೋಕಸಭೆ ಚುನಾವಣೆಯಲ್ಲಿ ಬರೀ ಮತದಾನ ಮಾಡುತ್ತಿದ್ದ ಗದಗ ಜಿಲ್ಲೆಯ ಮತದಾರರಿಗೆ ಈ ಬಾರಿ ತಮ್ಮದೇ ಜಿಲ್ಲೆಯವರು ಅಭ್ಯರ್ಥಿಯಾಗಿದ್ದರಿಂದ ಚುನಾವಣೆ ಹುರುಪು, ಹುಮ್ಮಸು ಹೆಚ್ಚಿಸಿದೆ. ಟಿಕೆಟ್‌ ವಂಚಿತರ ಅಸಮಾಧಾನ, ಪ್ರತಿಷ್ಠೆಯ ಹಣಾಹಣಿ, ತಂತ್ರ ಪ್ರತಿ ತಂತ್ರಗಳಿಂದ ಈ ಬಾರಿ ಹಾವೇರಿ ಜಿಲ್ಲೆಯಲ್ಲಿ ಚುನಾವಣೆ ಕಾವು ಏರುವುದು ಖಚಿತ ಎಂಬ ಮಾತುಗಳು ಕೇಳಿಬರುತ್ತಿವೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ