ಆ್ಯಪ್ನಗರ

ಬೀದಿಬದಿ ಹಸುವಿಗೂ ಗೃಹ ಪ್ರವೇಶ ಭಾಗ್ಯ

​ಹಾವೇರಿ: ನೂತನ ಗೃಹ ಪ್ರವೇಶ ಸಂದರ್ಭದಲ್ಲಿಗೋಮಾತೆ ಪೂಜಿಸುವ ಸಂಪ್ರದಾಯವಿದೆ. ಆದರೆ, ಪ್ರಸಕ್ತ ಕೊರೊನಾ ಹಿನ್ನೆಲೆಯಲ್ಲಿಗೃಹಪ್ರವೇಶಗಳಿಗೆ ತಮ್ಮ ಗೋವುಗಳನ್ನು ನೀಡಲು ರೈತರು ಹಿಂದೇಟು ಹಾಕುತ್ತಿದ್ದು, ಅನಿವಾರ್ಯವಾಗಿ ಬೀದಿಬದಿಯ ಹಸುಗಳ ಮೊರೆ ಹೋಗಬೇಕಾಗಿದೆ.

Vijaya Karnataka 5 Aug 2020, 5:00 am
ಮಂಜುನಾಥ ದಾಸಣ್ಣನವರ
Vijaya Karnataka Web 4 MANJU 1-_23
ಹಾವೇರಿ ನಗರದಲ್ಲಿಬೀದಿ ಬದಿ ಹಸುವನ್ನು ಗೃಹಪ್ರವೇಶಕ್ಕೆ ಕರೆದೊಯ್ದು ಪೂಜೆ ಸಲ್ಲಿಸಿರುವುದು.

ಹಾವೇರಿ: ನೂತನ ಗೃಹ ಪ್ರವೇಶ ಸಂದರ್ಭದಲ್ಲಿಗೋಮಾತೆ ಪೂಜಿಸುವ ಸಂಪ್ರದಾಯವಿದೆ. ಆದರೆ, ಪ್ರಸಕ್ತ ಕೊರೊನಾ ಹಿನ್ನೆಲೆಯಲ್ಲಿಗೃಹಪ್ರವೇಶಗಳಿಗೆ ತಮ್ಮ ಗೋವುಗಳನ್ನು ನೀಡಲು ರೈತರು ಹಿಂದೇಟು ಹಾಕುತ್ತಿದ್ದು, ಅನಿವಾರ್ಯವಾಗಿ ಬೀದಿಬದಿಯ ಹಸುಗಳ ಮೊರೆ ಹೋಗಬೇಕಾಗಿದೆ.

ಹಾವೇರಿ ನಗರದಲ್ಲಿಇತ್ತೀಚೆಗೆ ಇಂತಹ ಬೆಳವಣಿಗೆ ಕಂಡುಬಂದಿದ್ದು, ಬಹುತೇಕ ಕಡೆ ತಮ್ಮ ಹಸುವನ್ನು ಗೃಹಪ್ರವೇಶ ಕಾರ್ಯಗಳಿಗೆ ನೀಡಲು ರೈತರು ನಿರಾಕರಿಸಿದ್ದಾರೆ. ಲಕ್ಷಾಂತರ ರೂ. ವ್ಯಯಿಸಿ ಮನೆ ನಿರ್ಮಿಸಿಕೊಂಡ ಜನರು ಇದರಿಂದ ಕಂಗಾಲಾಗಿದ್ದು, ಅನಿವಾರ್ಯವಾಗಿ ಬೀದಿ ಬದಿ ಹಸುಗಳನ್ನೇ ಮನೆಗೆ ಕರೆತಂದು ಗೋಮಾತೆ ಪೂಜಾ ವಿಧಾನಗಳನ್ನು ಪೂರೈಸಿಕೊಳ್ಳುತ್ತಿದ್ದಾರೆ.

ಜಾನುವಾರುಗಳಿಗೆ ಸೋಂಕು ತಗುಲುವುದಿಲ್ಲಎಂದು ತಿಳಿಹೇಳಿದರೂ ಬಹುತೇಕ ಜನ ಒಪ್ಪಿಕೊಳ್ಳುತ್ತಿಲ್ಲ. ವಿನಾಕಾರಣ ತಮ್ಮ ಜಾನುವಾರುಗಳನ್ನು ಸಂಕಷ್ಟದಲ್ಲಿದೂಡುವುದೂ ಬೇಡ ಎಂಬ ನಿಲುವು ರೈತರಿಂದ ವ್ಯಕ್ತವಾಗುತ್ತಿದೆ.

ಹಳ್ಳಿಯಲ್ಲಿಲ್ಲಸಮಸ್ಯೆ: ಹಳ್ಳಿಗಳಲ್ಲಿರೈತಾಪಿ ವರ್ಗದ ಜನರು ತಮ್ಮ ಹಸು-ಕರುಗಳನ್ನು ಸಾಕುತ್ತಾರೆ. ಹೀಗಾಗಿ ಅಲ್ಲಿನ ಶುಭ ಕಾರ್ಯಕ್ರಮಗಲ್ಲಿಗೋಮಾತೆ ಪೂಜೆಗೆ ಯಾವುದೇ ಸಮಸ್ಯೆಯಾಗಿಲ್ಲ. ಆದರೆ ನಗರಗಳಲ್ಲಿಮಾತ್ರ ಇಂತಹ ಸಮಸ್ಯೆ ಎದುರಾಗಿದೆ.

ಗೃಹಪ್ರವೇಶದಲ್ಲಿಗೋಪೂಜೆಗೆ ಗೋವನ್ನು ಕೊಡಲು ಹಿಂದೇಟು ಹಾಕುತ್ತಿದ್ದಾರೆ. ಹಿಂದೆ ನೂತನ ಗೃಹಪ್ರವೇಶದ ಪೂಜೆಗೆಂದು ತೆರಳಿದ ಹಸು ಹುಷಾರಿಲ್ಲದೇ ಕಾಯಿಲೆಗೆ ತುತ್ತಾದ ಉದಾಹರಣೆಗಳಿವೆ ಎಂದು ರೈತ ವೀರಪ್ಪ ಬಾಳಿಕಾಯಿ ಹೇಳಿದರು.

ಅನಿವಾರ್ಯವಾಗಿ ಬೀದಿ ಬದಿಯ ಹಸುಗಳನ್ನು ಪೂಜಿಸುವ ಪದ್ಧತಿ ನಗರದಲ್ಲಿಕೆಲವೆಡೆ ಕಂಡುಬಂದಿದೆ. ಗೋವುಗಳಿಗೆ ಪೂಜೆ ಸಲ್ಲಿಸಿ, ಉಡಿ ತುಂಬಿ, ಆರತಿ ಬೆಳಗಿ, ಗೋಮಾತೆಗೆ ಕೃತಜ್ಞತೆ ಸಲ್ಲಿಸುತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ