ಆ್ಯಪ್ನಗರ

ಗುರಿ ಸಾಧನೆಗೆ ಪ್ರಾಮಾಣಿಕ ಪ್ರಯತ್ನ ಅವಶ್ಯ

ಹಾವೇರಿ: ಯಾವುದೇ ವ್ಯಕ್ತಿಯೂ ಜೀವನದಲ್ಲಿ ಉನ್ನತ ಸ್ಥಾನಕ್ಕೆ ಏರಿದ್ದಾರೆ ಎಂದರೆ ಅದರ ಹಿಂದೆ ಬಹಳಷ್ಟು ಶ್ರಮ, ಶ್ರದ್ಧೆ, ಪ್ರಯತ್ನ ಇರುತ್ತದೆ ಎಂದು ಮಾನಸಿಕ ತಜ್ಞ ಡಾ. ವಿಜಯಕುಮಾರ ಬಳಿಗಾರ ಹೇಳಿದರು.

Vijaya Karnataka 4 Aug 2019, 5:00 am
ಹಾವೇರಿ: ಯಾವುದೇ ವ್ಯಕ್ತಿಯೂ ಜೀವನದಲ್ಲಿ ಉನ್ನತ ಸ್ಥಾನಕ್ಕೆ ಏರಿದ್ದಾರೆ ಎಂದರೆ ಅದರ ಹಿಂದೆ ಬಹಳಷ್ಟು ಶ್ರಮ, ಶ್ರದ್ಧೆ, ಪ್ರಯತ್ನ ಇರುತ್ತದೆ ಎಂದು ಮಾನಸಿಕ ತಜ್ಞ ಡಾ. ವಿಜಯಕುಮಾರ ಬಳಿಗಾರ ಹೇಳಿದರು.
Vijaya Karnataka Web honest effort is required to achieve the goal
ಗುರಿ ಸಾಧನೆಗೆ ಪ್ರಾಮಾಣಿಕ ಪ್ರಯತ್ನ ಅವಶ್ಯ


ಸ್ಥಳೀಯ ಪಿ.ಯು. ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳು ಅವಕಾಶಗಳನ್ನು ಸೃಷ್ಠಿಸಿಕೊಂಡು ಗುರಿ ಸಾಧನೆಗೆ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ನಿರ್ಧಿಷ್ಟ ಗುರಿ ಕಠಿಣ ಪರಿಶ್ರಮದಿಂದ ಸಾಧನೆ ಶಿಖರ ಏರಬೇಕು ಎಂದು ಹೇಳಿದರು.

ಸಾಹಿತಿ ಹನುಮಂತಗೌಡ ಗೊಲ್ಲರ ಮಾತನಾಡಿ, ಒಂದು ಮಂದಿರ ಕಟ್ಟಿದರೆ ನೂರಾರು ಭಿಕ್ಷ ುಕರು ಹುಟ್ಟಿಕೊಳ್ಳುತ್ತಾರೆ. ಒಂದು ವಿದ್ಯಾಮಂದಿರ ಕಟ್ಟಿದರೆ ಸಾವಿರಾರು ವಿದ್ಯಾರ್ಥಿಗಳು ಬದುಕನ್ನು ಕಟ್ಟಿಕೊಳ್ಳುತ್ತಾರೆ. 'ಕಲಿಕೆ-ಅಂಕ ಗಳಿಕೆ-ಉದ್ಯೋಗ' ಇದಿಷ್ಟೆ ಶಿಕ್ಷ ಣ ಕ್ಷೇತ್ರದ ಘೋಷ ವಾಕ್ಯ ಎಂಬಂತಾಗಿದೆ. ನಿಮ್ಮ ಗುರಿ ಹೇಗಿರಬೇಕೆಂದರೆ ನಿನ್ನ ಗುರಿಯನ್ನು ಕೇಳಿ ಜನ ನಿನ್ನನ್ನು ಹುಚ್ಚನೆನ್ನಬೇಕು. ನೀನು ಸಾಧಿಸಿದ ಮೇಲೆ ಅವರು ಹುಚ್ಚರಾಗಬೇಕು ಎಂದರು.

ನವಚೇತನ ಫೌಂಡೇಶನ್‌ ನಿರ್ದೇಶಕಿ ಸೌಮ್ಯ ಮಾಳಿ ಮಾತನಾಡಿ, ಪ್ರತಿಯೊಬ್ಬರ ಜೀವನದಲ್ಲಿ ತಿರುವು ಬರುವುದು ಒಮ್ಮೆ ಮಾತ್ರ. ಅದನ್ನು ಸಾರ್ಥಕ ಪಡಿಸಿಕೊಳ್ಳಬೇಕು. ನಿಮ್ಮ ಭವಿಷ್ಯವನ್ನು ನೀವೇ ರೂಪಿಸಿಕೊಳ್ಳಬೇಕು ಎಂದು ತಿಳಿಸಿದರು. ಪ್ರಾ. ಕೆ.ಜಿ. ಪಾಟೀಲ ಮಾತನಾಡಿ, ಸಾಧನೆ ಸಾಧಕನ ಸೋತ್ತು. ಪರಿವರ್ತನೆ ಜಗದ ನಿಯಮ. ಈ ಕಾಲೇಜಿನಿಂದ ಉತ್ತಮ ವಿದ್ಯಾರ್ಥಿಗಳಾಗಿ ವಿದ್ಯಾರ್ಥಿ ಜೀವನವನ್ನು ಸಾರ್ಥಕ ಪಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಆಡಳಿತಾಧಿಕಾರಿ ಚಂದ್ರಕಲಾ ಮಾಳಿ ಮಾತನಾಡಿ, ನೂರಾರು ಆಸೆಗಳನ್ನು ಇಟ್ಟುಕೊಂಡು ತಂದೆ, ತಾಯಿಗಳು ನಿಮ್ಮನ್ನು ಕಾಲೇಜಿಗೆ ಕಳಿಸುತ್ತಾರೆ. ಅವರ ಆಸೆಗೆ ನೀರೇರೆಯದೆ ಅವರಿಗೆ ಹಾಗೂ ಉಪನ್ಯಾಸಕರಿಗೆ ಕೀರ್ತಿ ತರುವ ಕೆಲಸ ಮಾಡಬೇಕು ಎಂದರು.

ಮರ್ದಾನಸಾಬ ನದಾಫ್‌, ಅರುಣಕುಮಾರ, ಮಂಜುನಾಥ ಸಂಕಣ್ಣನವರ, ರತನ ಕಾಶಪ್ಪನವರ ಸೇರಿದಂತೆ ಉಪನ್ಯಾಸಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ನಗೀನಾ ಭಾನು, ಕಾವ್ಯ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಮರಿಗೌಡ್ರ ಎಸ್‌.ಎಲ್‌. ಪ್ರಾಸ್ತಾವಿಕವಾಗಿ ಮಾತನಾಡಿದರು. ಸಹನಾ ಪೀರಜಾದೆ ಸ್ವಾಗತಿಸಿದರು. ದೀಪಾ ಪಾಟೀಲ ನಿರೂಪಿಸಿದರು. ವೈಷ್ಣವಿ ವಂದಿಸಿದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ