ಆ್ಯಪ್ನಗರ

ಮಾಳನಾಯಕನಹಳ್ಳಿ ಗ್ರಾಪಂಗೆ ಹೊನ್ನತ್ತಿ ಅಧ್ಯಕ್ಷ

ತುಮ್ಮಿನಕಟ್ಟಿ: ರಾಣೇಬೆನ್ನೂರು ತಾಲೂಕಿನ ಮಾಳನಾಯಕನಹಳ್ಳಿ ಗ್ರಾಪಂ ಅಧ್ಯಕ್ಷರಾಗಿ ಕಾಂಗ್ರೆಸ್‌ ಬೆಂಬಲಿತ ರಾಮಪ್ಪ ಶಿವಪ್ಪ ಹೊನ್ನತ್ತಿ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ.

Vijaya Karnataka 10 Jan 2020, 5:00 am
ತುಮ್ಮಿನಕಟ್ಟಿ: ರಾಣೇಬೆನ್ನೂರು ತಾಲೂಕಿನ ಮಾಳನಾಯಕನಹಳ್ಳಿ ಗ್ರಾಪಂ ಅಧ್ಯಕ್ಷರಾಗಿ ಕಾಂಗ್ರೆಸ್‌ ಬೆಂಬಲಿತ ರಾಮಪ್ಪ ಶಿವಪ್ಪ ಹೊನ್ನತ್ತಿ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ.
Vijaya Karnataka Web honored president of mallanayakanahalli grappam
ಮಾಳನಾಯಕನಹಳ್ಳಿ ಗ್ರಾಪಂಗೆ ಹೊನ್ನತ್ತಿ ಅಧ್ಯಕ್ಷ


ಗುರುವಾರ ನಡೆದ ಅಧ್ಯಕ್ಷ ಸ್ಥಾನದ ಮೀಸಲಾತಿ ಸಾಮಾನ್ಯ ಚುನಾವಣೆಗೆ ಒಂದು ನಾಮಪತ್ರ ಮಾತ್ರ ಸಲ್ಲಿಕೆಯಾಗಿದ್ದರಿಂದ ಅವಿರೋಧ ಆಯ್ಕೆ ಸುಗಮವಾಯಿತು. ತಾಲೂಕ ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಎಮ್‌.ಎಸ್‌.ಕಾಂಬಳೆ ಚುನಾವಣೆ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದರು.

ಮಾಳನಾಯಕನಹಳ್ಳಿ ಗ್ರಾಮ ಪಂಚಾಯತಿ ಒಟ್ಟು 14 ಸದಸ್ಯರ ಬಲ ಹೊಂದಿದೆ. ಅದ್ಯಕ್ಷ ಜಗದೀಶಯ್ಯಗೌಡ್ರ ನಿಧನದಿಂದ ತೆರವಾದ ಕಾರಣ ಅಧ್ಯಕ್ಷ ಸ್ಥಾನಕ್ಕೆ ಮಾತ್ರ ಚುನಾವಣೆ ನಡೆಯಿತು. ಒಟ್ಟು 11 ಸದಸ್ಯರು ಹಾಜರಿದ್ದರು 3 ಜನ ಸದಸ್ಯರು ಗೈರು ಆಗಿದ್ದರು. ಕಾಂಗ್ರೆಸ್‌ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು.

ಜಿಪಂ ಉಪಾಧ್ಯಕ್ಷೆ ಗಿರಿಜಮ್ಮ ಬ್ಯಾಲದಹಳ್ಳಿ, ತಾಪಂ ಸದಸ್ಯೆ ಜ್ಯೋತಿ ಗಂಜಾಮದ, ಸುರೇಶ ಸಾಂತನವರ, ಕಾಂಗ್ರೆಸ್‌ ಮುಖಂಡರಾದ ಕೃಷ್ಣಪ್ಪ ಕಂಬಳಿ, ಮಂಜನಗೌಡ ಪಾಟೀಲ, ಹನುಮಂತಪ್ಪ ಬ್ಯಾಲದಹಳ್ಳಿ, ಯಲ್ಲಪ್ಪ ರಡ್ಡೇರ, ಕುಸುಮಾ ಶೆಟ್ಟಿಕೇರಿ, ಮಹದೇವಪ್ಪ ದೊಡ್ಡದ್ಯಾವಣ್ಣನವರ, ಆಶಾಬಾನು ಶೆತಸನದಿ, ಗುತ್ತೆವ್ವ ಪೂಜಾರ, ಮಂಜುಳಾ ಮಾಸೂರ ಮತ್ತಿತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ