ಆ್ಯಪ್ನಗರ

2 ವರ್ಷವಾದರೂ ಉದ್ಘಾಟನೆಯಾಗದ ಹಾಸ್ಟೆಲ್‌

ಗಣೇಶ ಅರ್ಕಾಚಾರಿ ಬ್ಯಾಡಗಿ: ಕಾಲೇಜು ಶಿಕ್ಷಣ ಇಲಾಖೆ ವತಿಯಿಂದ ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜ್‌ (ಹಂಸಬಾವಿ ರಸ್ತೆ) ಆವರಣದಲ್ಲಿ2018-19 ರಲ್ಲಿಒಂದು ಕೋಟಿ ರೂ. ವೆಚ್ಚದಲ್ಲಿನಿರ್ಮಿಸಲಾದ ಎಸ್‌.ಸಿ, ಎಸ್‌.ಟಿ, ವರ್ಗಗಳ ವಿದ್ಯಾರ್ಥಿ (ಗಂಡು ಮಕ್ಕಳ) ವಸತಿ ನಿಲಯ ಎರಡು ವರ್ಷವಾದರೂ ಉದ್ಘಾಟನೆ ಭಾಗ್ಯ ಕಂಡಿಲ್ಲ.

Vijaya Karnataka 4 Dec 2019, 5:00 am
ಗಣೇಶ ಅರ್ಕಾಚಾರಿ ಬ್ಯಾಡಗಿ: ಕಾಲೇಜು ಶಿಕ್ಷಣ ಇಲಾಖೆ ವತಿಯಿಂದ ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜ್‌ (ಹಂಸಬಾವಿ ರಸ್ತೆ) ಆವರಣದಲ್ಲಿ2018-19 ರಲ್ಲಿಒಂದು ಕೋಟಿ ರೂ. ವೆಚ್ಚದಲ್ಲಿನಿರ್ಮಿಸಲಾದ ಎಸ್‌.ಸಿ, ಎಸ್‌.ಟಿ, ವರ್ಗಗಳ ವಿದ್ಯಾರ್ಥಿ (ಗಂಡು ಮಕ್ಕಳ) ವಸತಿ ನಿಲಯ ಎರಡು ವರ್ಷವಾದರೂ ಉದ್ಘಾಟನೆ ಭಾಗ್ಯ ಕಂಡಿಲ್ಲ.
Vijaya Karnataka Web hostel which has not been opened for 2 years
2 ವರ್ಷವಾದರೂ ಉದ್ಘಾಟನೆಯಾಗದ ಹಾಸ್ಟೆಲ್‌


ಸಂಪೂರ್ಣ ಕಾಮಗಾರಿ ಎರಡು ವರ್ಷದ ಹಿಂದೆ ಪೂರ್ಣಗೊಂಡಿದೆ. ಇಷ್ಟು ವರ್ಷವಾದರೂ ವಸತಿ ನಿಲಯ ಇಲ್ಲಿಯವರೆಗೂ ಉದ್ಘಾಟನೆ ಭಾಗ್ಯ ಮಾತ್ರ ಕಂಡಿಲ್ಲ.

ಇಲಾಖೆಗಳ ಹಗ್ಗ ಜಗ್ಗಾಟ: ಕಾಲೇಜು ಶಿಕ್ಷಣ ಇಲಾಖೆ ವತಿಯಿಂದ ಎಸ್‌ಇಪಿ ಟಿಎಸ್‌ಪಿ ಅನುದಾನಡಿ ನಿರ್ಮಿಸಲಾದ ಕಟ್ಟಡವನ್ನು ಸಮಾಜ ಕಲ್ಯಾಣ ಇಲಾಖೆಗೆ ಹಸ್ತಾಂತರ ಮಾಡಿದ್ದೇವೆ ಎಂದು ಕಾಲೇಜು ಶಿಕ್ಷಣ ಇಲಾಖೆ ಹೇಳುತ್ತಿದ್ದರೆ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಮಾತ್ರ ನಮಗೆ ಇಲ್ಲಿಯವರೆಗೂ ಕಟ್ಟಡ ಹಸ್ತಾಂತರ ಮಾಡಿಲ್ಲ. ಅಲ್ಲದೆ ಸದ್ಯಕ್ಕೆ ನಮಗೆ ಕಟ್ಟಡದ ಅವಶ್ಯಕತೆ ಇಲ್ಲಎನ್ನುತ್ತಿದ್ದಾರೆ. ಹೀಗಾಗಿ ವಸತಿ ಸಹಿತ ಪದವಿ ವಿದ್ಯಾರ್ಜನೆ ಮಾಡುವ ಕನಸು ಹೊಂದಿರುವ ಬಡ ವಿದ್ಯಾರ್ಥಿಗಳು ಪರದಾಡುವಂತಾಗಿದೆ.

ನೂತನ ವಸತಿ ನಿಲಯದಲ್ಲಿಒಟ್ಟು 5 ಕೊಠಡಿಗಳು (ರೂಮ್‌), ಅಡುಗೆ ಕೋಣೆ, ಸೇರಿದಂತೆ ಶೌಚಾಲಯ, ವಾರ್ಡನ್‌ ಕೋಣೆ ಪ್ರತ್ಯೇಕವಾಗಿ ನಿರ್ಮಿಸಲಾಗಿದೆ. ಕಟ್ಟಡ ಬಳಕೆಯಿಲ್ಲದೇ ಸುತ್ತಲೂ ಮುಳ್ಳಿನ ಗಿಡಗಳು, ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿಅನೈತಿಕ ಚಟುವಟಿಕೆಗಳು ನಡೆಯುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

ಶೇ.30 ವಿದ್ಯಾರ್ಥಿಗಳಿಗೆ ಸೌಲಭ್ಯವಿಲ್ಲ: ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿಒಟ್ಟು 337 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು ಇದರಲ್ಲಿಶೇ.25 ರಿಂದ 30 ರಷ್ಟು ವಿದ್ಯಾರ್ಥಿಗಳು ಪರಿಶಿಷ್ಟ ಜಾತಿ ಮತ್ತು ಪಂಗಡದವರಿದ್ದಾರೆ. ಆದರೆ ಉದ್ಘಾ ಟನೆ ಭಾಗ್ಯ ಕಾಣದ ವಸತಿ ನಿಲಯ ವಿದ್ಯಾರ್ಥಿಗಳ ಪಾಲಿಗೆ ಇದ್ದೂ ಇಲ್ಲದಂತಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ