ಆ್ಯಪ್ನಗರ

ಹಾವೇರಿ: ಸಾವಿನಲ್ಲಿಯೂ ಒಂದಾದ ದಂಪತಿ

​ಕಂಚಾರಗಟ್ಟಿ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಇವರು ದಾಂಪತ್ಯ ಜೀವನ ಮಾದರಿಯಾಗಿತ್ತು. ಇಬ್ಬರು ಒಬ್ಬರನ್ನೊಬ್ಬರು ಬಿಟ್ಟು ಇರುತ್ತಿರಲಿಲ್ಲ. ಈಗ ಸಾವಿನಲ್ಲಿ ಸಹ ಒಂದಾಗಿದ್ದಾರೆ. ಇದು ಸಂಬಂಧಿಕರಿಗೆ ಗ್ರಾಮದವರನ್ನು ದುಃಖದ ಮಡುವಿಗೆ ತಳ್ಳಿದೆ.

Vijaya Karnataka Web 14 Aug 2021, 11:58 pm
ಹಾವೇರಿ: ವೃದ್ದ ದಂಪತಿ ಸಾವಿನಲ್ಲಿ ಒಂದಾದ ಘಟನೆ ಹಾವೇರಿ ತಾಲೂಕಿನ ಕಂಚಾರಗಟ್ಟಿ ಗ್ರಾಮದಲ್ಲಿ ನಡೆದಿದೆ. 60 ವರ್ಷದ ಹೊನ್ನಮ್ಮ ಹುಳ್ಯಾಳ ಮತ್ತು 65 ವರ್ಷದ ಶೇಖರಗೌಡ ಹುಳ್ಯಾಳ ಮೃತಪಟ್ಟ ದಂಪತಿ.
Vijaya Karnataka Web ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಹೊನ್ನಮ್ಮ ಹುಳ್ಯಾಳ ವಯೋಸಹಜ ಖಾಯಲೆಗಳಿಂದ ಬಳುತ್ತಿದ್ದರು.

ಶನಿವಾರ ಮುಂಜಾನೆ ಅನಾರೋಗ್ಯದಿಂದ ಹೊನ್ನಮ್ಮ ಸಾವನ್ನಪ್ಪಿದ್ದಾರೆ. ಪತ್ನಿಯ ಸಾವಿನ ಸುದ್ದಿ ಕೇಳುತ್ತಿದ್ದಂತೆ ಪತಿ ಶೇಖರಗೌಡ ಪ್ರಾಣಬಿಟ್ಟಿದ್ದಾರೆ. ಇಬ್ಬರು ಅನ್ಯೋನ್ಯದಿಂದ ದಾಂಪತ್ಯ ಜೀವನ ಕಳೆದಿದ್ದರು. ಪ್ರಗತಿಪರ ರೈತರಾಗಿದ್ದ ಶೇಖರಗೌಡರ ಯಶಸ್ಸಿನ ಹಿಂದೆ ಪತ್ನಿ ಹೊನ್ನಮ್ಮ ಇದ್ದರು.

ಕಂಚಾರಗಟ್ಟಿ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಇವರು ದಾಂಪತ್ಯ ಜೀವನ ಮಾದರಿಯಾಗಿತ್ತು. ಇಬ್ಬರು ಒಬ್ಬರನ್ನೊಬ್ಬರು ಬಿಟ್ಟು ಇರುತ್ತಿರಲಿಲ್ಲ. ಈಗ ಸಾವಿನಲ್ಲಿ ಸಹ ಒಂದಾಗಿದ್ದಾರೆ. ಇದು ಸಂಬಂಧಿಕರಿಗೆ ಗ್ರಾಮದವರನ್ನು ದುಃಖದ ಮಡುವಿಗೆ ತಳ್ಳಿದೆ.

ನಾಲ್ಕು ದಶಕಗಳ ಕಾಲ ದಾಂಪತ್ಯದಲ್ಲಿ ಮನಸ್ತಾಪವಿಲ್ಲದೆ ಅಪಸ್ವರವಿಲ್ಲದೆ ಜೀವನ ಸಾಗಿಸಿದ್ದ ಜೋಡಿ ಸಾವಿನಲ್ಲಿ ಸಹ ಒಂದಾಗಿರುವುದಕ್ಕೆ ಗ್ರಾಮಸ್ಥರು ಆಶ್ಚರ್ಯ ವ್ಯಕ್ತಪಡಿಸಿದರು.

ಸಾವಿನ್ನಲ್ಲಿ ಒಂದಾದ ದಂಪತಿ ಶವಗಳನ್ನು ಅಕ್ಕಪಕ್ಕದಲ್ಲಿ ಕುಳ್ಳಿರಿಸಿ ಸಾರ್ವಜನಿಕರಿಗೆ ಅಂತಿಮದರ್ಶನದ ಅವಕಾಶ
ಕಲ್ಪಿಸಲಾಗಿತ್ತು. ನಂತರ ಟ್ರ್ಯಾಕ್ಟರ್‌ನಲ್ಲಿ ದಂಪತಿ ಶವಗಳನ್ನ ಮೆರವಣಿಗೆ ಮಾಡಲಾಯಿತು. ಭಜನೆ ಹಲಗೆ ಪಟಾಕಿಯೊಂದಿಗೆ ದಂಪತಿ ಶವಗಳನ್ನು ಮೆರವಣಿಗೆ ಮಾಡಲಾಯಿತು.

ನಂತರ ಶೇಖರಗೌಡ ಹುಳ್ಯಾಳರಿಗೆ ಸೇರಿದ ಜಮೀನಿನಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು. ಒಂದೇ ಗುದ್ದಿನಲ್ಲಿ ಪತಿ ಮತ್ತು ಪತ್ನಿಯನ್ನ ಎರಡು ಕುಣಿಗಳಲ್ಲಿ ಇರಿಸಿ ಅಂತ್ಯಕ್ರಿಯೆ ಮಾಡಲಾಯಿತು. ಈ ಅಪರೂಪದ ದಂಪತಿಯ ಅಂತಿಮ ಯಾತ್ರೆಗೆ ಗ್ರಾಮಸ್ಥರು ಸಂಬಂಧಿಕರು ಕಂಬನಿ ಮಿಡಿದರು. ಸಾವಿನಲ್ಲಿ ಒಂದಾದ ದಂಪತಿ ಮಣ್ಣಿನಲ್ಲಿ ಸಹ ಒಂದಾದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ