ಆ್ಯಪ್ನಗರ

ಮನಮುಟ್ಟಿದ ‘ನಾನು ಗಾಂಧಿ ಆಗ್ತೇನೆ’

ಅಕ್ಕಿಆಲೂರು: ರಂಗಗ್ರಾಮ ಖ್ಯಾತಿಯ ಶೇಷಗಿರಿಯ ಸಿ.ಎಂ.ಉದಾಸಿ ಕಲಾಕ್ಷೇತ್ರದಲ್ಲಿಮಕ್ಕಳ ರಂಗ ತರಬೇತಿ ಶಿಬಿರದಲ್ಲಿಮಕ್ಕಳೇ ಸಿದ್ಧಪಡಿಸಿ, ಅಭಿನಯಿಸಿದ 'ನಾನು ಗಾಂಧಿ ಆಗ್ತೇನೆ' ನಾಟಕ ನೆರೆದ ರಂಗಾಸಕ್ತರ ಗಮನ ಸೆಳೆಯುವಲ್ಲಿಯಶಸ್ವಿಯಾಯಿತು.

Vijaya Karnataka 2 Dec 2019, 5:00 am
ಅಕ್ಕಿಆಲೂರು: ರಂಗಗ್ರಾಮ ಖ್ಯಾತಿಯ ಶೇಷಗಿರಿಯ ಸಿ.ಎಂ.ಉದಾಸಿ ಕಲಾಕ್ಷೇತ್ರದಲ್ಲಿಮಕ್ಕಳ ರಂಗ ತರಬೇತಿ ಶಿಬಿರದಲ್ಲಿಮಕ್ಕಳೇ ಸಿದ್ಧಪಡಿಸಿ, ಅಭಿನಯಿಸಿದ 'ನಾನು ಗಾಂಧಿ ಆಗ್ತೇನೆ' ನಾಟಕ ನೆರೆದ ರಂಗಾಸಕ್ತರ ಗಮನ ಸೆಳೆಯುವಲ್ಲಿಯಶಸ್ವಿಯಾಯಿತು.
Vijaya Karnataka Web i am gandhi augustine
ಮನಮುಟ್ಟಿದ ‘ನಾನು ಗಾಂಧಿ ಆಗ್ತೇನೆ’


ಶೇಷಗಿರಿ ಕಲಾತಂಡದ 15 ಜನ ತಂತ್ರಜ್ಞರು ಹಾಗೂ ಸಂಪನ್ಮೂಲ ವ್ಯಕ್ತಿಗಳ ಮಾರ್ಗದಲ್ಲಿಸಿದ್ಧಪಡಿಸಲಾಗಿದ್ದ ಡಾ.ಆರ್‌.ವಿ.ಭಂಡಾರಿ ಅವರ ನಾನು ಗಾಂಧಿ ಆಗ್ತೇನೆ ನಾಟಕ ತೆರೆ ಮೇಲೆ ಸುಂದರವಾಗಿ ಮೂಡಿ ಬಂದಿತು. ಪ್ರತಿ ಪಾತ್ರಗಳಿಗೆ ಜೀವ ತುಂಬಿದ ಮಕ್ಕಳು ಮನೋಜ್ಞ ಅಭಿನಯ ಸಾದರ ಪಡಿಸಿ ಸೈ ಎನಿಸಿಕೊಂಡರು.

ಇದೇ ಸಂದರ್ಭದಲ್ಲಿಪ್ರದರ್ಶಿಸಲ್ಪಟ್ಟ ರಾಷ್ಟ್ರಕವಿ ಕುವೆಂಪು ಅವರ ಕಿಂದರ ಜೋಗಿ ನೃತ್ಯ ರೂಪಕ ಸೊಗಸಾಗಿತ್ತು. ನರಸಿಂಹ್‌ ಕೋಮಾರ ಮತ್ತು ವಿಶ್ವನಾಥ ಹಿರೇಮಠ ಅವರ ಸಂಗೀತ ಪೂರಕವಾಗಿತ್ತು. ಹರೀಶ್‌ ಗುರಪ್ಪನವರ, ಜಗದೀಶ್‌ ಕಟ್ಟಿಮನಿ, ಶಿವಮೂರ್ತಿ ಹುಣಸಿಹಳ್ಳಿ, ಜಮೀರ್‌ ಪಠಾಣ, ನಾಗರಾಜ್‌ ಕಾಶೆಂಬಿ, ಗಣೇಶ್‌ ತಾಂತ್ರಿಕ ನೆರವು ನೀಡಿದರು. ಲಕ್ಷತ್ರ್ಮಣ ರೊಟ್ಟಿ, ಸಿದ್ದು ಕೊಂಡೋಜಿ ವಸ್ತಾ್ರಲಂಕಾರ ಮನ ಸೆಳೆದರೆ, ಸಿದ್ದಪ್ಪ ರೊಟ್ಟಿ, ದೇವಿಪ್ರಸಾದ್‌ ಯರತೋಟಿ ನಿರ್ವಹಿಸಿದರು. ಗಜಾನನ ಯುವಕ ಮಂಡಳದ ಅಧ್ಯಕ್ಷ ಪ್ರಭು ಗುರಪ್ಪನವರ, ಸಂಚಾಲಕ ನಾಗರಾಜ್‌ ಧಾರೇಶ್ವರ ಸಹಕಾರ ನೀಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ